ಬೆಂಗಳೂರು ಬೈಕ್ ಸವಾರರೇ ಎಚ್ಚರ: ಅವೈಜ್ಞಾನಿಕ ಹಂಪ್ನಿಂದಾದ ಅಪಘಾತದಲ್ಲಿ ಸ್ಕೂಟರ್, ಮೊಬೈಲ್,ಹಣ ಮಾಯ
ಉದ್ಯಾನ ನಗರಿ ಬೆಂಗಳೂರು ಇತ್ತೀಚೆಗಂತೂ ರಸ್ತೆ ಗುಂಡಿಗಳ ಸಾಮಾಜ್ಯವಾಗಿ ಇಲ್ಲವೇ ಅವೈಜ್ಞಾನಿಕ ರಸ್ತೆ ಹಂಪ್ಗಳನ್ನು ಹೊಂದಿರುವ ನಗರವಾಗಿ ಬದಲಾಗುತ್ತಿದೆ ಎಂದು ಅನ್ನಿಸುತ್ತಿದೆ.
ಬೆಂಗಳೂರು, ಮಾರ್ಚ್ 08: ಉದ್ಯಾನ ನಗರಿ ಬೆಂಗಳೂರು ಇತ್ತೀಚೆಗಂತೂ ರಸ್ತೆ ಗುಂಡಿಗಳ ಸಾಮಾಜ್ಯವಾಗಿ ಇಲ್ಲವೇ ಅವೈಜ್ಞಾನಿಕ ರಸ್ತೆ ಹಂಪ್ಗಳನ್ನು ಹೊಂದಿರುವ ನಗರವಾಗಿ ಬದಲಾಗುತ್ತಿದೆ ಎಂದು ಅನ್ನಿಸುತ್ತಿದೆ.
ಬೆಂಗಳೂರಲ್ಲಿ ರಸ್ತೆಗುಂಡಿಗಳಿಂದಾಗಿ ಸಾಕಷ್ಟು ಅಫಘಾತಗಳು, ಅವೈಜ್ಞಾನಿಕ ಹಂಪ್ನಿಂದ ಸಾವು ಎಂಬಿತ್ಯಾದಿ ಘಟನೆಗಳು ಹೊತೇನಲ್ಲ. ಇದೀಗ ಅಂತದ್ದೊಂದೆ ಘಟನೆಯಿಂದ ಬೆಂಗಳೂರು ರಸ್ತೆಗಳು ಸುದ್ದಿಯಲ್ಲಿವೆ. ಕೆಲ ದಿನಗಳ ಹಿಂದಷ್ಟೇ ದ್ವಿಚಕ್ರ ವಾಹನ ಸವಾರರೊಬ್ಬರು ಅವೈಜ್ಞಾನಿಕ ಹಂಪ್ನಿಂದಾಗಿ ಬಿದ್ದು, ಪ್ರಜ್ಞೆ ತಪ್ಪಿದ್ದಾರೆ. ಬಳಿಕ ನಡೆದ ಘಟನೆ ಆ ಸವಾರನಿಗೆ ಶಾಕ್ ನೀಡಿದೆ.

ನಗರದ ಕಲಾಸಿ ಪಾಳ್ಯದ ದ್ರೌಪದಮ್ಮ ದೇಗುಲದ ಸಮೀಪ ಅರುಣ್ ವಿ ಎಂಬುವರು ಮಾರ್ಚ್ 3 ರಂದು ದ್ವಿಚಕ್ರ ವಾಹನ (ಸ್ಕೂಟರ್) ರಸ್ತೆ ದಾಟುವಾಗ ಅವೈಜ್ಞಾನಿಕ ಹಂಪ್ನಿಂದಾಗಿ ಅಪಘಾತಕ್ಕೀಡಾದರು. ಘಟನೆ ತಡವಾಗಿ ಬೆಳೆಕಿಗೆ ಬಂದಿದೆ. ಇಷ್ಟೇ ಅಲ್ಲದೇ ಸ್ಕೂಟರ್ ಬೀಳುತ್ತಿದ್ದಂತೆ ಸವಾರ ಪ್ರಜ್ಞೆ ತಪ್ಪಿದ್ದಾರೆ. ಸ್ವಲ್ಪ ಹೊತ್ತಾದ ಬಳಿಕ ಸುಧಾರಿಸಿಕೊಂಡು ನೋಡಿದಾಗ ಅವರ ಸ್ಕೂಟರ್ ಕಳ್ಳತನವಾಗಿರುವುದು ಗೊತ್ತಾಗಿದೆ. ಇಷ್ಟೂ ಸಾಲದೆಂಬಂತೆ ಖದೀಮರು ಸವಾರನ ಬಳಿ ಇದ್ದ ಮೊಬೈಲ್ ಮಾತ್ರವಲ್ಲ, ಬೆಳ್ಳಿಯ ಚೈನ್, ಜೇಬಿನಲ್ಲಿದ್ದ 5,500 ರೂ. ನಗದು ಹಣ ಕೂಡಾ ಕಳ್ಳತನ ಮಾಡಿದ್ದಾರೆ.
ಈ ಸಂಬಂಧ ಸ್ಕೂಟರ್ ಮಾಲೀಕ/ಸವಾರ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಸ್ಕೂಟರ್, ಕೊರಳಲ್ಲಿದ್ದ ಬೆಳ್ಳಿ ಚೈನ್, ಹಣ ಮೊಬೈಲ್ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ಪೊಲಿಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ತರಕಾರಿ ವ್ಯಾಪಾರಿಯಾದ ವರುಣ (25) ಅಪಘಾತಕ್ಕೀಡಾಗಿ ಕಳ್ಳರ ಕರಾಮತ್ತಿಗೆ ಒಳಗಾದ ಸಂತ್ರಸ್ತ ಎಂದು ತಿಳಿದು ಬಂದಿದೆ. ಅವರು ಮಾರ್ಚ್ 03 ರಂದು ಲಾಲ್ಬಾಗ್ ಬಳಿಯ ಸಿದ್ದಾಪುರದಿಂದ ಕಲಾಸಿಪಾಳ್ಯದ ಕಡೆಗೆ ಹೊರಟಿದ್ದರು. ಅವರ ಮನೆಯಲ್ಲಿ ಭಜನಾ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಪಾಲ್ಗೊಂಡಿದ್ದವರಿಗೆ ಊಟ ತರಲು ಮಧ್ಯರಾತ್ರಿ ಅರುಣ್ ಅವರು ಹೊರಟಿದ್ದರು ಎನ್ನಲಾಗಿದೆ.
ಮಧ್ಯರಾತ್ರಿ ವೇಳೆ ವಾಹನಗಳ ಓಡಾಟ ಕಡಿಮೆ, ಕಲಾಸಿಪಾಳ್ಯದ ದ್ರೌಪದಮ್ಮ ದೇವಾಲಯದ ಬಳಿ ರಸ್ತೆ ಕಿರಿದಾಗಿದ್ದು, ಅವೈಜ್ಞಾನಿಕ ಹಂಪ್ ಹಾಕಲಾಗಿದೆ. ಕತ್ತಲಲ್ಲಿ ಹಂಪ ಕಂಡಿಲ್ಲ. ಕೂಡಲೇ ಸ್ಕೂಟರ್ ಸ್ಕಿಡ್ ಉರುಳಿ ಬಿದ್ದಿದೆ. ಈ ವೇಳೆ ಸವಾರರು ಅರೆಪ್ರಜ್ಞಾವಸ್ಥೆಗೆ ಹೋಗಿದ್ದಾರೆ. ಈ ವೇಳೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಘಟನೆ ಬಳಿಕ ಅರುಣ್ ಅವರು ತಮ್ಮ ಕುಟುಂಬಸ್ಥರಿಗೆ ಕರೆ ಮಾಡಲು ಮೊಬೈಲ್ ಇಲ್ಲ, ಮನೆಗೆ ತೆರಳಲು ಸ್ಕೂಟರ್ ಸಹ ಇಲ್ಲ, ಹೀಗಾಗಿ ಸಾಕಷ್ಟು ಪರದಾಡಿದ್ದಾರೆ. ಹೊರ ಹೋದ ಅರುಣ್ ಬಂದಿಲ್ಲವೆಂದು ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದರು.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು












Click it and Unblock the Notifications