ದಿಢೀರನೆ ಬದಲಾದ ಬೆಂಗಳೂರು-ವಾರಣಾಸಿ ಭಾರತ್ ಗೌರವ್ ರೈಲು ನಿಲ್ದಾಣ
ಬೆಂಗಳೂರು, ನವೆಂಬರ್ 11: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಸಂಚರಿಸಬೇಕಿದ್ದ ಬೆಂಗಳೂರು-ವಾರಣಾಸಿ ಭಾರತ್ ಗೌರವ್ ರೈಲಿನ ನಿಲ್ದಾಣವನ್ನು ಅಧಿಕಾರಿಗಳು ದಿಢೀರನೇ ಬದಲಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭದ್ರತಾ ಪ್ರೋಟೋಕಾಲ್ ಹಿನ್ನೆಲೆಯಲ್ಲಿ ಬೆಂಗಳೂರಿನ ಯಶವಂತಪುರ್ ಜಂಕ್ಷಣ ರೈಲ್ವೆ ನಿಲ್ದಾಣದಿಂದ ಈ ರೈಲು ಹೊರಡಲಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
ಕಾಸಿ ದರ್ಶನಕ್ಕಾಗಿ ಈ ರೈಲು ಬೆಂಗಳೂರಿನ ಕೆಎಸ್ಆರ್ ರೈಲ್ವೆ ನಿಲ್ದಾಣದ ಮೂಲಕ ಹೊರಡುತ್ತಿತ್ತು. ಆದರೆ, ದಿಡೀರನೇ ರೈಲ್ವೆ ಇಲಾಖೆಯು ಈ ರೈಲಿನ ನಿಲ್ದಾಣವನ್ನು ದಿಢೀರನೇ ಬದಲಾಯಿಸಿದ ಬಳಿಕ ಕಾಸಿ ಯಾತ್ರೆಗೆ ಬೆಂಗಳೂರಿನಿಂದ ಹೊರಡುತ್ತಿದ್ದ ಒಟ್ಟು 431 ಪ್ರಯಾಣಿಕರಿಗೆ ಯಶವಂತಪುರ ರೈಲು ನಿಲ್ದಾಣಕ್ಕೆ ತಲುಪಲು ಸೂಚಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾಸಿ ಪ್ರವಾಸಕ್ಕಾಗಿ ಈ ರೈಲು ಕೆಎಸ್ಆರ್ ನಿಲ್ದಾಣದಿಂದ ಮಧ್ಯಾಹ್ನ ಇಂದು 1.45ಕ್ಕೆ ಹೊರಡಬೇಕಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಈ ರೈಲಿಗೆ ಚಾಲನೆ ನೀಡಲು ಆಸಕ್ತಿ ತೋರಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೊನೆಯಲ್ಲಿ ಯೋಜನೆ ಬದಲಾಯಿಸಿದ್ದಾರೆ. ಈ ವೇಳೆ ಅಧಿಕಾರಿಗಳು ರೈಲು ಸಂಚರಿಸುವ ಮೊದಲೇ ಎಲ್ಲ ಪ್ರಯಾಣಿಕರಿಗೆ ಮಾಹಿತಿ ನೀಡಿದ್ದಾರೆ. ಇಂದು ಪ್ರಧಾನಿ ಮೋದಿ ಈ ರೈಲಿಗೆ ಬೆಳಿಗ್ಗೆ 10:33ಕ್ಕೆ ವಿಶೇಷ ಚಾಲನೆ ನೀಡಿದ್ದಾರೆ. ಇನ್ನು ಈ ರೈಲಿಗೆ ಚಾಲನೆ ದೊರೆತ ಬಳಿಕ ಈ ರೈಲಿನಲ್ಲಿ 22 ಪ್ರಯಾಣಿಕರು ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣದಿಂದ ರೈಲು ಹತ್ತಿಕೊಳ್ಳಲಿದ್ದಾರೆ. ಉಳಿದ ಪ್ರಯಾಣಿಕರು ಯಶವಂತಪುರದಿಂದ ಕಾಶಿಗೆ ಪ್ರಯಾಣಿಸಲಿದ್ದಾರೆ. ರೈಲು ಸಂಚರಿಸುವ ಮೊದಲೇ ಎಲ್ಲ ಪ್ರಯಾಣಿಕರಿಗೆ ವೈಯಕ್ತಿಕವಾಗಿ ಫೋನ್ ಕರೆ ಮಾಡಿ ಎಚ್ಚರಿಸಿ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ
ಗೊಂದಲದ
ಬಗ್ಗೆ
ಐಆರ್ಸಿಟಿಸಿ
ಮಾಹಿತಿ
ಈ
ಗೊಂದಲದ
ಬಗ್ಗೆ
ಐಆರ್ಸಿಟಿಸಿಯ
ಉನ್ನತ
ಅಧಿಕಾರಿಯೊಬ್ಬರು
ಮಾತನಾಡಿ,
"ನಾವು
ಪ್ರತಿಯೊಬ್ಬ
ಪ್ರಯಾಣಿಕರಿಗೆ
ಕರೆ
ಮಾಡಿ
ಕಳೆದ
24
ಗಂಟೆಗಳಲ್ಲಿ
ಬದಲಾವಣೆಯ
ಬಗ್ಗೆ
ಎಚ್ಚರಿಸಿದ್ದೇವೆ"
ಎಂದು
ಹೇಳಿದರು.
ಪ್ರಧಾನಿಯವರ
ಭದ್ರತಾ
ಪ್ರೋಟೋಕಾಲ್ನಿಂದಾಗಿ
ರೈಲಿನ
ಸ್ಥಳಾಂತರಿಸಬೇಕಾಯಿತು
ಎಂದು
ಐಆರ್ಸಿಟಿಸಿಯ
ಉನ್ನತ
ಅಧಿಕಾರಿಯೊಬ್ಬರು
ತಿಳಿಸಿದ್ದಾರೆ.
ಇಂದು
ಮಧ್ಯಾಹ್ನ
1:45ಕ್ಕೆ
ಯಸವಂತಪುರ್
ಮೂಲ
ಕಾಶಿಗೆ
ಸಂಚರಿಸಲಿರುವ
ಈ
ರೈಲಿನಲ್ಲಿ
ಒಟ್ಟು
600
ಕಾಸಿ
ದರ್ಶನಕ್ಕೆ
ತೆರಳಲಿದ್ದಾರೆ
ಎಂದು
ಅಧಿಕಾರಿಗಳು
ಮಾಹಿತಿ
ನೀಡಿದ್ದಾರೆ.
ಮದ್ದೂರಿನ ಖಾಸಗಿ ಸಂಸ್ಥೆಯೊಂದರ ಸಹಾಯಕ ವ್ಯವಸ್ಥಾಪಕ ಬಿ.ಎಂ.ಲೋಕೇಶ್ ಮಾತನಾಡಿ, ಈ ರೈಲಿನಲ್ಲಿ ಸಂಚರಿಸಲಿರುವ ವೃದ್ಧ ತಂದೆ-ತಾಯಿಯೊಂದಿಗೆ ತೆರಳಲಿರುವ ಅವರಿಗೆ ಬುಧವಾರ ಸಂಜೆ ರೈಲ್ವೆ ಇಲಾಖೆಯಿಂದ ನಮಗೆ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು. ವಿಜಯನಗರದಿಂದ ಕಾರಿನಲ್ಲಿ ಕುಟುಂಬದೊಂದಿಗೆ ಪ್ರಯಾಣಿಸಲಿರುವ ಅಂಶುಮನ್ ರಮೇಶ್ ರಾವ್, "ಕೆಎಸ್ಆರ್ಗೆ ಬಿಡುವ ಬದಲು, ಈಗ ಯಶವಂತಪುರದಿಂದ ಸಂಚರಿಸಲಿದೆ ಕೇವಲ 7 ಕಿ.ಮೀ. ಮಾತ್ರ ವ್ಯತ್ಯಾಸ ಅದೃಷ್ಟವಶಾತ್ ರೈಲ್ವೆ ಇಲಾಖೆ ನಮಗೆ ಮುಂಚಿತವಾಗಿ ತಿಳಿಸಿದ್ದರು ಎಂದು ಹೇಳಿಕೊಂಡರು.