Bengaluru Traffic: ಬೆಳಗ್ಗೆಯೇ ಟ್ರಾಫಿಕ್ ಬಿಸಿ: ಹೊರ ವರ್ತುಲ ರಸ್ತೆ, ಹಳೆ ಮದ್ರಾಸ್ ರಸ್ತೆಯಲ್ಲಿ ನಿಧಾನಗತಿಯ ದಟ್ಟಣೆ
ಬೆಂಗಳೂರಿನ ಪ್ರಯಾಣಿಕರು ಬುಧವಾರ ಬೆಳಗ್ಗೆ ಹೊರ ವರ್ತುಲ ರಸ್ತೆ, ಹಳೆ ಮದ್ರಾಸ್ ರಸ್ತೆ ಮತ್ತು ಪೂರ್ವದ ಇತರ ರಸ್ತೆಗಳಲ್ಲಿ ನಿಧಾನಗತಿಯ ಸಂಚಾರ ಇದ್ದು, ಪ್ರಯಾಣಿಕರು ತೊಂದರೆ ಅನುಭವಿಸಿದರು. ಬೆಳಗ್ಗೆ ಒಂದು ಗಂಟೆಗೂ ಹೆಚ್ಚು ಕಾಲ ನಿಧಾನಗತಿಯ ಟ್ರಾಫಿಕ್ನಲ್ಲಿ ಸಿಲುಕಿಕೊಂಡಿದ್ದೆ ಎಂದು ಕೆಲವು ರಸ್ತೆ ಬಳಕೆದಾರರು ದೂರಿದ್ದಾರೆ.
ಹೊರ ವರ್ತುಲ ರಸ್ತೆ, ಹಳೆ ಮದ್ರಾಸ್ ರಸ್ತೆ ಮತ್ತು ಹಳೆ ವಿಮಾನ ನಿಲ್ದಾಣ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಇದು ವಿಶೇಷವಲ್ಲ, ಸಾಮಾನ್ಯವಾಗಿ ಇದೇ ರೀತಿ ಇರುತ್ತದೆ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ ಎಂದು ಡಿಹೆಚ್ ವರದಿ ಮಾಡಿದೆ.

"ಬೆಳಿಗ್ಗೆ ಹೆಚ್ಚಿನ ವಾಹನಗಳು ಕಚೇರಿಗೆ ಹೋಗುತ್ತಿದ್ದವು ಮತ್ತು ಆದ್ದರಿಂದ ಮೊದಲು ದಟ್ಟಣೆಯ ಪ್ರಮಾಣವು ಸಾಕಷ್ಟು ಹೆಚ್ಚಾಗಿತ್ತು. ಆದರೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ನಾವು ಸ್ಥಳದಲ್ಲಿ ತಂಡಗಳನ್ನು ನಿಯೋಜಿಸಿದ್ದೆವು" ಎಂದು ಪೊಲೀಸ್ ಉಪ ಆಯುಕ್ತ (ಸಂಚಾರ, ಪೂರ್ವ) ಕುಲದೀಪ್ ಕುಮಾರ್ ಜೈನ್ ಹೇಳಿದರು ಹೇಳಿರುವುದಾಗಿ ಡಿಹೆಚ್ ವರದಿ ಮಾಡಿದೆ.
ಭಯಪಡುವ ಅಗತ್ಯವಿಲ್ಲ
ಈ ಪರಿಸ್ಥಿತಿಯಲ್ಲಿ ಭಯಪಡುವ ಅಗತ್ಯವಿಲ್ಲ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ ಎನ್ ಅನುಚೇತ್ ಹೇಳಿದ್ದಾರೆ. "ನಾವು ಇನ್ನೂ ಯಾವುದೇ ಅಸಹಜ ಟ್ರಾಫಿಕ್ ಚಲನೆಯನ್ನು ನೋಡಿಲ್ಲ. ನಾವು ಮಧ್ಯಾಹ್ನ 1 ಗಂಟೆಯವರೆಗೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಿದ್ದೇವೆ. ಗಾಬರಿಯಾಗುವಂತಹದ್ದು ಏನೂ ಇಲ್ಲ; ಇದು ಸಾಮಾನ್ಯ ಬುಧವಾರದ ಬೆಳಿಗ್ಗೆಯಂತಿದೆ" ಎಂದು ಹೇಳಿದರು.
ನ್ಯಾವಿಗೇಷನ್ ಅಪ್ಲಿಕೇಶನ್ಗಳಲ್ಲಿ 'ಕಿತ್ತಳೆ' ಬಣ್ಣದಲ್ಲಿ ತೋರಿಸುವ ದಟ್ಟಣೆಯು ಟ್ರಾಫಿಕ್ ಪೊಲೀಸರಿಗೆ "ಸ್ವೀಕಾರಾರ್ಹ" ಎಂದು ಅವರು ವಿವರಿಸಿದರು, ಏಕೆಂದರೆ ದಟ್ಟಣೆಯು ಭಾರೀ ಮತ್ತು ಕೆಲವೊಮ್ಮೆ ನಿಧಾನವಾಗಿದ್ದರೂ ಚಲಿಸುತ್ತಿದೆ ಎಂದು ಸೂಚಿಸುತ್ತದೆ.
ಕಳೆದ ವಾರದ ಟ್ರಾಫಿಕ್ ದುಸಃಪ್ನ
ಕಳೆದ ಬುಧವಾರ (ಸೆಪ್ಟೆಂಬರ್ 26) ವಿಶೇಷವಾಗಿ ಹೊರ ವರ್ತುಲ ರಸ್ತೆಯು ಕಂಡ ಟ್ರಾಫಿಕ್ ದುಃಸ್ವಪ್ನ ಪುನರಾವರ್ತನೆಯಾಗುವುದನ್ನು ತಪ್ಪಿಸಲು, ಸಂಚಾರ ಪೊಲೀಸರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮತ್ತು ವಿಶೇಷವಾಗಿ ಟೆಕ್ ಪಾರ್ಕ್ಗಳ ಹೊರಗೆ ದಟ್ಟಣೆಯಾಗದ ರೀತಿಯಲ್ಲಿ ಸಂಚಾರವನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ.
"ನಾವು ಸಂಜೆ ಪರಿಶೀಲಿಸುತ್ತೇವೆ ಮತ್ತು ಯಾವುದೇ ಟ್ರಾಫಿಕ್ ಜಾಮ್ ಸಂಭವಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಬೇಗನೆ ಪ್ರಾರಂಭಿಸುತ್ತೇವೆ. ಇದು ಕಳೆದ ವಾರದಂತೆಯೇ ಇರುತ್ತದೆ ಎಂದು ನಾನು ಭಾವಿಸುವುದಿಲ್ಲ; ಭಾರೀ ದಟ್ಟಣೆಯನ್ನು ನಿಭಾಯಿಸಲು ನಾವು ಯೋಜನೆಯನ್ನು ಹೊಂದಿದ್ದೇವೆ" ಎಂದು ಕುಲ್ದೀಪ್ ಹೇಳಿದರು.












Click it and Unblock the Notifications