Bengaluru Weather: ಕಡಿಮೆ ಆಯ್ತು ಬೆಂಗಳೂರಿನ ಚಳಿ, ಹೊಸ ವರ್ಷಾಚರಣೆಗೆ ಇಲ್ಲ ಅಡೆತಡೆ
ಉದ್ಯಾನ ನಗರಿ ಬೆಂಗಳೂರು ಹೊಸ ವರ್ಷದ ಸಂಭ್ರಮಾಚರಣೆಗೆ ಸಜ್ಜಾಗುತ್ತಿದೆ. ಡಿಸೆಂಬರ್ ತಿಂಗಳಿಡೀ ತೀವ್ರ ಚಳಿ, ಮಂಜಿನೊಂದಿಗೆ ನಗರವು ಕೂಲ್ ಸಿಟಿಯಾಗಿತ್ತು. ಕ್ರಿಸ್ಮಸ್ ವೇಳೆಯೂ ಚಳಿಗೆ ಜನರ ಮೈನಡುಗಿತ್ತು. ಹೊಸ ವರ್ಷದ ವೇಳೆಯೂ ಇದೇ ರೀತಿ ಚಳಿ ಇದ್ದರೆ ಸಂಭ್ರಮಾಚರಣೆ ಮಾಡೋದು ಹೇಗಪ್ಪಾ? ಎಂಬ ಚಿಂತೆ ಎಲ್ಲರ ತಲೆಯಲ್ಲಿತ್ತು. ಆದರೆ ವರ್ಷದ ಕೊನೆಯ ದಿನದ ವೇಳೆಗೆ ಬೆಂಗಳೂರಿನಾದ್ಯಂತ ಚಳಿ ತಗ್ಗಿದ್ದು, ಗರಿಷ್ಠ ತಾಪಮಾನದಲ್ಲಿ ತುಸು ಏರಿಕೆ ಕಂಡುಬಂದಿದೆ.
ಬೆಂಗಳೂರಿನಲ್ಲಿ ಮಂಗಳವಾರದಿಂದಲೂ ಚಳಿಯ ಪ್ರಮಾಣ ತುಸು ಕಡಿಮೆಯಾಗಿದೆ. ಅಲ್ಪ ಮಟ್ಟಿಗೆ ಮಂಜು ಕವಿದ ವಾತಾವರಣ ಮಾತ್ರ ಮುಂದುವರಿದಿದ್ದು, ಇಂದು ಮತ್ತು ನಾಳೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವ ಮಂಜು ಕವಿದಿರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ತಾಪಮಾನದಲ್ಲಿ ಏರಿಕೆ
ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯ್ ಇರಲಿದೆ. ಕಳೆದ ವಾರಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಭಾರೀ ಇಳಿಕೆ ಕಂಡುಬಂದಿತ್ತು. ಕಳೆದ 3 ದಿನಗಳವರೆಗೆ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆಯಾಗಿಲ್ಲ, ನಂತರದ ದಿನಗಳಲ್ಲಿ ರಾಜ್ಯದಾದ್ಯಂತ ಇಳಿಯುವ ಪ್ರವೃತ್ತಿ ಇದೆ. ಹೀಗಾಗಿ ಚಳಿಯ ಪ್ರಮಾಣ ಕ್ರಮೇಣ ಕಡಿಮೆಯಾಗಲಿದೆ.
ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದ್ದ ಚಳಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿರುವುದು ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಮನೆಯಿಂದ ಹೊರಬಂದು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಉತ್ಸುಕರಾಗಿರುವ ಜನರಿಗೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ. ಹವಾಮಾನ ಸುಧಾರಣೆ ಜನರ ಮನಸ್ಥಿತಿಯ ಮೇಲೆ ಒಳ್ಳೆಯ ಪ್ರಭಾವ ಬೀರುತ್ತದೆ. ಚಳಿ ಜಾಸ್ತಿ ಇದ್ದಾಗ ರಾತ್ರಿ ಸಮಯದಲ್ಲಿ ಹೊರಗೆ ಹೋಗಲು ಹಿಂಜರಿಯುವವರು ಹೆಚ್ಚು. ಆದರೆ ಈಗ ಚಳಿ ಕಡಿಮೆಯಾಗಿರುವುದರಿಂದ ಕುಟುಂಬ ಸಮೇತ, ಸ್ನೇಹಿತರ ಜೊತೆ ಪಾರ್ಟಿಗಳು, ಸಂಗೀತ ಕಾರ್ಯಕ್ರಮಗಳು, ಓಪನ್ ಏರ್ ಈವೆಂಟ್ಗಳಲ್ಲಿ ನಿರಾಳವಾಗಿ ಭಾಗವಹಿಸಬಹುದು.
ಸಂಭ್ರಮಾಚರಣೆಗೆ ನಿಶ್ಚಿಂತೆ
ಆರೋಗ್ಯದ ದೃಷ್ಟಿಯಿಂದಲೂ ಹೆಚ್ಚು ಚಳಿಯಿಂದ ಉಸಿರಾಟದ ಸಮಸ್ಯೆ, ನೆಗಡಿ-ಜ್ವರದಂತಹ ತೊಂದರೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಚಳಿ ತಗ್ಗಿರುವುದರಿಂದ ವಯೋವೃದ್ಧರು, ಮಕ್ಕಳು ಹಾಗೂ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವವರು ಕೂಡ ಹೊಸ ವರ್ಷದ ಸಂಭ್ರಮದಲ್ಲಿ ಭಾಗವಹಿಸಲು ಧೈರ್ಯ ಮಾಡುತ್ತಾರೆ. ಇನ್ನು ರಾತ್ರಿ ಸಂಚಾರ ಹಾಗೂ ವೀಕ್ಷಣೆಗೂ ಅನುಕೂಲವಾಗಲಿದೆ. ಚಳಿ ಕಡಿಮೆಯಾದಾಗ ರಸ್ತೆಗಳ ಮೇಲೆ ಮಂಜು ಅಥವಾ ತಣ್ಣನೆಯ ಗಾಳಿ ಕಡಿಮೆ ಇರುತ್ತದೆ. ಇದರಿಂದ ನೈಟ್ ಡ್ರೈವ್, ನಗರ ವೀಕ್ಷಣೆ, ಪಬ್-ರೆಸ್ಟೋರೆಂಟ್ಗಳ ಭೇಟಿ ಹೆಚ್ಚು ಸುರಕ್ಷಿತ ಹಾಗೂ ಸುಖಕರವಾಗುತ್ತದೆ.
ಹೆಚ್ಚು ಚಳಿ ಇದ್ದರೆ ಸ್ವೆಟರ್, ಜಾಕೆಟ್ ಧರಿಸಬೇಕಾಗುತ್ತದೆ. ಆದರೆ ಈಗ ತಂಪು ಹವಾಮಾನ ಇರುವುದರಿಂದ ಲೈಟ್ ಜಾಕೆಟ್ ಅಥವಾ ಸಾಮಾನ್ಯ ಉಡುಪಲ್ಲೇ ಹೊಸ ವರ್ಷದ ಸಂಭ್ರಮಕ್ಕೆ ತೆರಳಬಹುದು. ಇದರಿಂದ ಫೋಟೋ ಕ್ಲಿಕ್ಕಿಸುವುದು, ನೃತ್ಯ ಮಾಡುವುದು ಕೂಡ ಸುಲಭವಾಗುತ್ತದೆ. ಬೆಂಗಳೂರಿನಲ್ಲಿ ಚಳಿ ಕಡಿಮೆಯಾಗಿರುವುದು ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಹೊರಡುವವರಿಗೆ ಹವಾಮಾನ, ಆರೋಗ್ಯ, ಸಂಚಾರ ಮತ್ತು ಮನರಂಜನೆ ಎಲ್ಲದರಲ್ಲಿಯೂ ಅನುಕೂಲಕರವಾಗಿದೆ.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್












Click it and Unblock the Notifications