ಬೆಂಗಳೂರಲ್ಲಿ ಸಿಗ್ನಲ್ನಲ್ಲಿ ನಿಂತು ಹಾರ್ನ್ ಮಾಡಿದ್ರೆ ವಾಹನ ಮುಂದೆ ಹೋಗಲ್ಲ
ಬೆಂಗಳೂರು, ಫೆಬ್ರವರಿ 4: ನಗರದಲ್ಲಿ ಶಬ್ದ ಮಾಲಿನ್ಯ ತಡೆಗಟ್ಟಲು ಮುಂಬೈ ಮಾದರಿಯ ಸಿಗ್ನಲಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲು ಟ್ರಾಫಿಕ್ ಪೊಲೀಸ್ ಮುಂದಾಗಿದ್ದಾರೆ.
ಇನ್ಮುಂದೆ ಸಿಗ್ನಲ್ ಬಿಟ್ಟ ತಕ್ಷಣ ವೇಗವಾಗಿ ಹೋಗಬೇಕು ಎಂದು ಹೆಚ್ಚು ಹಾರ್ನ್ ಮಾಡಿದರೆ ಸಿಗ್ನಲ್ ಕೆಂಪು ಬಣ್ಣಕ್ಕೆ ತಿರುಗುತ್ತದೆ.
ವಾಹನ ಸವಾರರೇ ಸಿಗ್ನಲ್ಗಳಲ್ಲಿ ನಿಂತು ಅನಗತ್ಯವಾಗಿ ಹಾರ್ನ್ ಮಾಡಿ ಶಬ್ದ ಮಾಲಿನ್ಯ ಮಾಡಿದರೆ, ಹೆಚ್ಚು ನಿಮಿಷ ಸಿಗ್ನಲ್ನಲ್ಲಿಯೇ ಇರಬೇಕಾದೀತು ಹುಷಾರ್.

ವಾಹನ ಸವಾರರು ಕಾಯುವ ಸಮಯ ಹೆಚ್ಚಳ
ಹೌದು ಇಂತಹದೊಂದು ಶಬ್ದ ಮಾಲಿನ್ಯ ನಿಯಂತ್ರಿಸಲು ಸೆಕೆಂಡುಗಳ ಸಂಖ್ಯೆ ಹೆಚ್ಚಿಸಿ, ಸವಾರರ ಕಾಯುವ ಸಮಯವನ್ನು ಹೆಚ್ಚಿಸುವ ಮುಂಬೈ ಸಂಚಾರ ಪೊಲೀಸರ ಪ್ರಯೋಗವನ್ನು ಬೆಂಗಳೂರಿನಲ್ಲೂ ಜಾರಿಗೆ ತರುವ ಬಗ್ಗೆ ಪೊಲೀಸರು ಚಿಂತನೆ ನಡೆಸಿದ್ದಾರೆ.

ಮೋರ್ ಹಾಂಕ್ ಮೋರ್ ವೇಯ್ಟ್
ಮುಂಬೈ ನಗರದಲ್ಲಿ ಅತಿ ಹೆಚ್ಚು ಟ್ರಾಫಿಕ್ ಇರುವ ಪ್ರದೇಶಗಳನ್ನು ಪೊಲೀಸರು ಗುರುತಿಸಿ ಡೆಸಿಬಲ್ ಮೀಟರ್ಗಳನ್ನು ಅಳವಡಿಸಿದ್ದಾರೆ. ರೆಡ್ ಸಿಗ್ನಲ್ ಬಿದ್ದವೇಳೆ ವಾಹನ ಸವಾರರು ಗ್ರೀನ್ ಸಿಗ್ನಲ್ ಬರುವ ತನಕ ಯಾವುದೇ ಹಾರ್ನ್ ಮಾಡದೆ ಸುಮ್ಮನೆ ಕಾಯಬೇಕು. ಅದನ್ನು ಬಿಟ್ಟು ಪದೇ ಪದೇ ಹಾರ್ನ್ ಮಾಡುತ್ತಿದ್ದರೆ , ಶಬ್ದದ ಪ್ರಮಾಣ 85 ಡೆಸಿಬಲ್ಗಿಂತ ಜಾಸ್ತಿ ಆಗುತ್ತಿದ್ದಂತೆ ಸಿಗ್ನಲ್ ಮತ್ತೆ ರಿ ಸೆಟ್ ಆಗುತ್ತದೆ. ಡಿಸಿಬಲ್ ಮೇಲೆ ಮೋರ್ ಹಾಂಕ್ ಮೋರ್ ವೇಯ್ಟ್ ಎಂದು ಸೂಚನೆಯನ್ನು ಹಾಕಿದ್ದಾರೆ.

ವಿಡಿಯೋ ವೈರಲ್
ಟ್ರಾಫಿಕ್ ಸಿಗ್ನಲ್ಗಳಲ್ಲಿ ಹಾರ್ನ್ ಕಿರಿ ಕಿರಿ ತಪ್ಪಿಸಲು ಮುಂಬೈ ಪೊಲೀಸರು ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಸಿಗ್ನಲ್ಗಳಲ್ಲಿ ಡೆಸಿಬಲ್ ಯಂತ್ರಗಳನ್ನು ಅಳವಡಿಸಿದ್ದು, ಹಸಿರು ನಿಶಾನೆ ಬರುವ ತನಕ ಪ್ರತಿಯೊಬ್ಬರು ಕಾಯಬೇಕು. ಅದನ್ನು ಬಿಟ್ಟು ಸುಖಾಸುಮ್ಮನೆ ಹಾರ್ನ್ ಮಾಡುತ್ತಿದ್ದರೆ ಶಬ್ದದ ಪ್ರಮಾಣ 90 ಡೆಸಿಬಲ್ದಾಟುತ್ತಿದ್ದಂತೆ ಸಿಗ್ನಲ್ ತನಗೆ ತಾನೇ ರೀಸೆಟ್ ಆಗುತ್ತದೆ.

ಹೊಸ ಸಿಗ್ನಲ್ ವ್ಯವಸ್ಥೆ ಬಗ್ಗೆ ಮಾಹಿತಿ
ಸಿಗ್ನಲ್ಗಳಲ್ಲಿ ದೀಪದ ಕೆಳಗೆ ಶಬ್ದ ಪ್ರಮಾಣ ಅಳೆಯುವ ಯಂತ್ರ ಅಳವಡಿಕೆ, ರೆಡ್ ಸಿಗ್ನಲ್ ಇದ್ದಾಗ ಸಿಗ್ನಲ್ ಬೀಳುವ ತನಕ ಸುಮ್ಮನೆ ಕಾಯಬೇಕು, ಅದನ್ನು ಬಿಟ್ಟು ಪದೇ ಪದೇ ಹಾರ್ನ್ ಮಾಡಿದರೆ ಸಿಗ್ನಲ್ ರೀಸೆಟ್ ಮಾಡಲಾಗುತ್ತದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ












Click it and Unblock the Notifications