Bengaluru: ರಸ್ತೆಗಳ ಸ್ವಚ್ಛತೆಗೆ ಹೈಟೆಕ್ ಟಚ್ : 613 ಕೋಟಿ ರೂ. ವೆಚ್ಚದಲ್ಲಿ 46 ಕಸ ಗುಡಿಸುವ ಯಂತ್ರಕ್ಕೆ ಶೀಘ್ರದಲ್ಲೇ ಟೆಂಡರ್
ಬೆಂಗಳೂರು: ನಗರದ ಪ್ರಮುಖ ಸಮಸ್ಯೆಗಳಲ್ಲಿ ಒಂದಾದ ರಸ್ತೆ ಮೇಲಿನ ಧೂಳು ಮತ್ತು ಹೂಳು ನಿರ್ವಹಣೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಹತ್ವದ ಕ್ರಮ ಕೈಗೊಂಡಿದೆ. ನಗರದ ಐದು ಪ್ರಮುಖ ನಗರ ನಿಗಮಗಳ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಲು ಒಟ್ಟು 46 ಯಾಂತ್ರಿಕ ಕಸ ಗುಡಿಸುವ ಯಂತ್ರಗಳನ್ನು (Mechanical Sweeping Machines) ಬಾಡಿಗೆಗೆ ಪಡೆಯಲು ಅನುಮೋದನೆ ನೀಡಲಾಗಿದ್ದು, ಇದಕ್ಕಾಗಿ ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ.
ಈ ಬೃಹತ್ ಯೋಜನೆಗೆ ಸುಮಾರು 613 ಕೋಟಿ ರೂ. ವೆಚ್ಚವಾಗಲಿದ್ದು, ಗುತ್ತಿಗೆಯ ಅವಧಿಯನ್ನು 10 ವರ್ಷಗಳಿಗೆ ನಿಗದಿಪಡಿಸಲಾಗಿದೆ. ಈ ಹಿಂದೆ 7 ವರ್ಷಗಳ ಅವಧಿಗೆ ಯೋಜನೆ ರೂಪಿಸಲಾಗಿತ್ತು, ಆದರೆ ದೀರ್ಘಕಾಲೀನ ನಿರ್ವಹಣೆ ಮತ್ತು ದಕ್ಷತೆಯ ದೃಷ್ಟಿಯಿಂದ ರೈಟ್ಸ್ (ಆರ್ಐಟಿಇಎಸ್) ಸಂಸ್ಥೆಯ ಶಿಫಾರಸಿನ ಮೇರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.

ಪ್ರಸ್ತುತ ಸಮಸ್ಯೆ ಮತ್ತು ಅಗತ್ಯತೆ
2025ರ ಆರಂಭದಲ್ಲಿ ಹಳೆಯ ಸ್ವೀಪಿಂಗ್ ಗುತ್ತಿಗೆ ಮುಕ್ತಾಯಗೊಂಡ ನಂತರ, ನಗರದ ರಸ್ತೆಗಳಲ್ಲಿ ಸ್ವೀಪಿಂಗ್ ಯಂತ್ರಗಳ ಸಂಚಾರ ಸ್ಥಗಿತಗೊಂಡಿದೆ. ಪರಿಣಾಮವಾಗಿ, ರಸ್ತೆ ಬದಿಗಳಲ್ಲಿ ಹೂಳು, ಒಣ ಎಲೆಗಳು ಮತ್ತು ತ್ಯಾಜ್ಯ ರಾಶಿ ಬಿದ್ದಿದ್ದು, ವಾಹನ ಸಂಚಾರದಿಂದ ವಿಪರೀತ ಧೂಳು ಏಳುತ್ತಿದೆ. ಇತ್ತೀಚೆಗೆ ಕೆಲವು ಕಡೆ ಟೆಕ್ಕಿಗಳು ಮತ್ತು ನಾಗರಿಕರೆ ಸೇರಿ ಹೂಳು ತೆಗೆಯುವ ಅಭಿಯಾನ ನಡೆಸಿದ್ದರು. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಜಿಬಿಎ ಮುಂದಾಗಿದೆ.
ಹೈಟೆಕ್ ಕಣ್ಗಾವಲು ವ್ಯವಸ್ಥೆ
ಹಿಂದಿನ ಗುತ್ತಿಗೆಗಳಲ್ಲಿ ಯಂತ್ರಗಳ ಸರಿಯಾದ ಬಳಕೆಯಾಗದಿರುವ ಬಗ್ಗೆ ದೂರುಗಳಿದ್ದವು. ಇದನ್ನು ತಡೆಯಲು, ಹೊಸ ಟೆಂಡರ್ ಪ್ರಕಾರ ಪ್ರತಿ ಯಂತ್ರಕ್ಕೂ ಜಿಪಿಎಸ್ ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ. ಕೇಂದ್ರೀಯ ನಿಯಂತ್ರಣ ವ್ಯವಸ್ಥೆಯ (ಸಿಸಿಎಮ್ಎಸ್) ಮೂಲಕ ಅಧಿಕಾರಿಗಳು ರಿಯಲ್ ಟೈಮ್ನಲ್ಲಿ ಯಂತ್ರಗಳ ಕೆಲಸವನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. ಈ ಹೊಸ ಯಂತ್ರಗಳು ಪ್ರತಿ ಶಿಫ್ಟ್ಗೆ 10 ಕಿ.ಮೀ ರಸ್ತೆ ಸ್ವಚ್ಛಗೊಳಿಸುವ ಸಾಮರ್ಥ್ಯ ಹೊಂದಿರಲಿವೆ.
ವಲಯವಾರು ಯಂತ್ರಗಳ ಹಂಚಿಕೆ (ಅಂದಾಜು ವೆಚ್ಚ 10 ವರ್ಷಗಳಿಗೆ)
ರಸ್ತೆಗಳ ಉದ್ದ ಮತ್ತು ಟ್ರಾಫಿಕ್ ದಟ್ಟಣೆಯನ್ನು ಆಧರಿಸಿ 5 ಕಾರ್ಪೊರೇಷನ್ಗಳಿಗೆ ಯಂತ್ರಗಳನ್ನು ಹಂಚಿಕೆ ಮಾಡಲಾಗಿದೆ:
1. ಪೂರ್ವ ವಲಯ: 11 ಯಂತ್ರಗಳು (₹146.6 ಕೋಟಿ)
2. ಪಶ್ಚಿಮ ವಲಯ: 10 ಯಂತ್ರಗಳು (₹133.3 ಕೋಟಿ)
3. ಉತ್ತರ ವಲಯ: 10 ಯಂತ್ರಗಳು (₹133.3 ಕೋಟಿ)
4. ದಕ್ಷಿಣ ವಲಯ: 8 ಯಂತ್ರಗಳು (₹106.6 ಕೋಟಿ)
5. ಕೇಂದ್ರ ವಲಯ: 7 ಯಂತ್ರಗಳು (₹93.3 ಕೋಟಿ)
ನಾಗರಿಕರ ಆರೋಗ್ಯದ ಮೇಲೆ ಧೂಳು ದುಷ್ಪರಿಣಾಮ ಬೀರದಂತೆ ತಡೆಯುವುದು ನಮ್ಮ ಆದ್ಯತೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
-
"ಬೆಂಗಳೂರು: 370 ಎಕ್ರೆ ಜಕ್ಕೂರು ವೈಮಾನಿಕ ಶಾಲೆ ಜಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ಗೆ ಪ್ಲ್ಯಾನ್'' -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ -
ಬೆಂಗಳೂರು ನಾಗರಿಕರೇ ಗಮನಿಸಿ; ಪರಿಷ್ಕೃತ ಕರಡು ಮತದಾರರ ಪಟ್ಟಿ- ಅಹವಾಲು, ಆಕ್ಷೇಪಣೆ ಆಹ್ವಾನ -
ಸರ್ಕಾರಿ PU ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ಬರೋಬ್ಬರಿ 9,383 ರೂ. ಲಕ್ಷ ಅನುದಾನ ಮಂಜೂರು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ











Click it and Unblock the Notifications