ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ಕಿಡ್ಸ್ ಕೆಂಪ್ ಶಾಶ್ವತವಾಗಿ ಬಂದ್
ಬೆಂಗಳೂರು, ನವೆಂಬರ್ 11 : ದೇಶಾದ್ಯಂತ ನೆಚ್ಚಿನ ಗ್ರಾಹಕರನ್ನು ಹೊಂದಿರುವ ಬೆಂಗಳೂರಿನ ಐಕಾನಿಕ್ ಆದಂತಹ ಬಿಗ್ ಕಿಡ್ಸ್ ಕೆಂಪ್ ಬಟ್ಟೆ ಅಂಗಡಿ ಇನ್ನು ನೆನಪು ಮಾತ್ರ. ಕಿಡ್ಸ್ ಕೆಂಪ್ ಬೆಂಗಳೂರಿನ ಎಂ.ಜಿ. ರಸ್ತೆಯ ಪ್ರಮುಖ ಲ್ಯಾಂಡ್ ಮಾರ್ಕ್ ಕೂಡ ಆಗಿತ್ತು. ಮಕ್ಕಳು ಬಯಸುವ ವಿಭಿನ್ನವಾದ ಉಡುಪುಗಳ ಜತೆಗೆ ಇಡೀ ಕುಟುಂಬದವರಿಗೆ ಬೇಕಾದ ರೀತಿಯ ಬಟ್ಟೆಗಳೂ ಲಭ್ಯವಿದ್ದವು.
ಕಿಡ್ಸ್ ಕೆಂಪ್ ಎಂದರೆ ಬೆಂಗಳೂರಿಗರಿಗೆ ಅಚ್ಚುಮೆಚ್ಚು ಪ್ರತಿ ವಾರವೂ ಕೂಡ ಬಟ್ಟೆ ಕೊಂಡುಕೊಳ್ಳಲು ಬೆಂಗಳೂರು ಸುತ್ತಮುತ್ತಲಿಂದ ಜನರು ಬರುತ್ತಿದ್ದರು.ಆದರೆ ಅಂಗಡಿಯನ್ನು ಕಾರಣಾಂತರಗಳಿಂದ ಶನಿವಾರ (ನ.11)ರಂದು ಮುಚ್ಚಲಾಗುತ್ತಿದೆ. ಹಾಗಾಗಿ ಎಲ್ಲ ಉಡುಪುಗಳ ಮೇಲೆ ಶೇ.೭೫ರವರೆಗೆ ರಿಯಾಯಿತಿ ನೀಡಲಾಗುತ್ತಿದೆ. 1985ರಲ್ಲಿ ಕೆಜಿ ರಸ್ತೆಯಲ್ಲಿ ಸಣ್ಣದಾಗಿ ಸ್ಥಾಪನೆಗೊಂಡಿದ್ದ ಕಿಡ್ಸ್ ಕೆಂಪ್ 1990ರಲ್ಲಿ ಎಂಜಿ ರಸ್ತೆಗೆ ಸ್ಥಳಾಂತರಿಸಲಾಯಿತು.

ಬೇರೆ ಬಟ್ಟೆ ಅಂಗಡಿಗಳಿಗೆ ಹೋಲಿಸಿದರೆ ಕಿಡ್ಸ್ ಕೆಂಪ್ ನಲ್ಲಿ ಸಾಕಷ್ಟು ಆಫರ್ ಗಳು ಎಂದಿಗೂ ಲಭ್ಯವಿರುತ್ತಿದ್ದವು. ಕೆಂಪ್ನಲ್ಲಿದ್ದ ಮಿಕ್ಕಿ ಮೌಸ್, ಬಸ್, ಕಾರುಗಳು ಹೀಗೆ ಕಾರ್ಟೂನ್ ಚಿತ್ರಗಳನ್ನು ಹೊಂದಿರುವಂತಹ ಬಟ್ಟೆಗಳು ಬಹುಬೇಗ ಮಕ್ಕಳನ್ನು ಆಕರ್ಷಿತರನ್ನಾಗಿಸುತ್ತಿತ್ತು.
ಬೆಂಗಳೂರಿನಲ್ಲಿ ಎಷ್ಟೇ ದೊಡ್ಡ ಮಾಲ್ಗಳು ತಲೆ ಎತ್ತಿದ್ದರೂ ಕೂಡ ಕಿಡ್ಸ್ ಕೆಂಪ್ ಗೆ ಇದರಿಂದ ಯಾವುದೇ ನಷ್ಟವಾಗಿಲ್ಲ. ಅಂಗಡಿ ಪ್ರಾರಂಭವಾಗಿ ಮುಚ್ಚುವ ಸಂದರ್ಭದವರೆಗೂ ತನ್ನ ಹೆಸರನ್ನು ಉಳಿಸಿಕೊಂಡಿದೆ. ನೌಕರರು ಹಾಗೂ ಮಾಲಿಕರ ಮಧ್ಯೆ ಸಂಬಂಧ ಉತ್ತಮವಾಗಿದೆ.
ಕಳೆದ ತಿಂಗಳು ಕಿಡ್ಸ್ ಕೆಂಪ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲರಿಗೂ ನೊಟೀಸ್ ನೀಡಲಾಗಿತ್ತು ಇದಾದ ಬಳಿಕ ಕೆಲಸಗಾರರಿಗೆ ಮೋಸವಾಗಬಾರದು ಎಂದು ಆಲೋಚಿಸಿ, ಎಚ್ಎಎಲ್ ಹಳೆಯ ವಿಮಾನ ರಸ್ತೆಯಲ್ಲಿರುವ ಕೆಂಪ್ ಫೋರ್ಟ್ ಮಾಲ್ನಲ್ಲಿ ಕಿಡ್ಸ್ ಕೆಂಪ್ನಲ್ಲಿ ಕೆಲಸಮಾಡುತ್ತಿದ್ದ ಪ್ರತಿಯೊಬ್ಬ ನೌಕರನಿಗೂ ಕೆಲಸವನ್ನು ಕಲ್ಪಿಸಲಾಗಿದೆ.
ವರನಟ ಡಾ. ರಾಜ್ಕುಮಾರ್ ಕುಟುಂಬದವರೂ ಸೇರಿದಂತೆ ಪ್ರಸಿದ್ಧ ನಟ-ನಟಿಯರೂ ಕೂಡ ಭೇಟಿ ನೀಡುತ್ತಿದ್ದರು. ಕಾರಣಾಂತರಗಳಿಂದ ನಾಲ್ಕು ವರ್ಷದ ಹಿಂದೆಯೇ ಅಂಗಡಿಯನ್ನು ಮುಚ್ಚುಲು ನಿರ್ಧರಿಸಿದ್ದರು ಕೂಡ ಸಾಧ್ಯವಾಗಿರಲಿಲ್ಲ. ಆದರೆ ಈಗ ದೃಢ ನಿರ್ಧಾರ ಮಾಡಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ












Click it and Unblock the Notifications