Bengaluru Suburban Rail: ಈ ಮಾರ್ಗದಲ್ಲಿ ನಿಲ್ದಾಣಗಳ ವಿನ್ಯಾಸ ಬದಲಾವಣೆ, ಎಲ್ಲೆಲ್ಲಿ ಹಾಗೂ ವೆಚ್ಚ ಎಷ್ಟು?-ಅಂಕಿಅಂಶಗಳ ವಿವರ
ಉಪನಗರ ರೈಲು ಯೋಜನೆಯ ಮಲ್ಲಿಗೆ ಕಾರಿಡಾರ್ನ ನಿಲ್ದಾಣಗಳ ವಿನ್ಯಾಸ ಬದಲಾವಣೆಯೊಂದಿಗೆ ತಿಂಗಳಾಂತ್ಯದಲ್ಲಿ ಮರು ಟೆಂಡರ್ ಕರೆಯಲು ಕೆ-ರೈಡ್ ಕಂಪನಿ ನಿರ್ಧಿರಿಸಿದೆ.
ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಸಂಪರ್ಕಿಸುವ 25.01 ಕಿಲೋ ಮೀಟರ್ ಉದ್ದದ ಮಾರ್ಗ ಇದಾಗಿದ್ದು, ಇಲ್ಲಿ 12 ನಿಲ್ದಾಣಗಳ ನಿರ್ಮಾಣಕ್ಕೆ ಈ ಮೊದಲು ಕರೆದಿದ್ದ ಟೆಂಡರ್ ನವೆಂಬರ್ನಲ್ಲಿ ರದ್ದಾಗಿತ್ತು. ಆದರೆ ಇದೀಗ ನಿಲ್ದಾಣ ವಿನ್ಯಾಸ ಬದಲು ಅಂದರೆ ಮೂರು ಬೋಗಿ ನಿಲ್ಲುವಷ್ಟು ಉದ್ದದ ಪ್ಲಾಟ್ಫಾರ್ಮ್ ನಿರ್ಮಿಸಬೇಕೆ ಅಥವಾ ಆರು ಬೋಗಿ ರೈಲು ನಿಲುಗಡೆಗೆ ಪೂರಕವಾಗಿ ರೂಪಿಸಿಕೊಳ್ಳಬೇಕೆ ಎಂಬ ಚರ್ಚೆಗಳು ನಡೆಯುತ್ತಿವೆ.

6 ಬೋಗಿಗಳ ರೈಲಿಗೆ ಅನುಗುಣವಾದ ಪ್ಲಾಟ್ಫಾರ್ಮ್ ನಿರ್ಮಿಸಿಕೊಳ್ಳುವುದು ಹಾಗೂ ಮೂರು ಬೋಗಿಗಳ ರೈಲನ್ನು ಓಡಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈಗಾಗಲೇ ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸೂಚನೆಯಂತೆ ಬೆಂಗಳೂರು ಮೆಟ್ರೋ ರೈಲ್ವೆ ನಿಗಮ (BMRCL)ವು ನಮ್ಮ ಮೆಟ್ರೋ 3ನೇ ಹಂತದ ಮಾಗಡಿ ರೋಡ್ ಕಾರಿಡಾರ್ನಲ್ಲಿ ಮೂರು ಬೋಗಿಗಳ ರೈಲು ಓಡಿಸಲು ಡಿಪಿಆರ್ ತಯಾರಿಸಿ ಸಲ್ಲಿಸಿದೆ. ಉಪನಗರ ರೈಲ್ವೆ ಯೋಜನೆ ಅನುಷ್ಠಾನ ಮಾಡುತ್ತಿರುವ ಕೆ-ರೈಡ್ ಕೂಡ ಮೂರು ಬೋಗಿಗಳ ಕುರಿತು ಅಧ್ಯಯನ ಮಾಡಿದೆ.
ಕೆ-ರೈಡ್ ಮೂಲಗಳ ಪ್ರಕಾರ, ಉಪನಗರ ರೈಲ್ವೆಯ ಒಂದು ರೈಲ್ವೆ ಬೋಗಿ 300 ಜನ ಪ್ರಯಾಣಿಕರ ಸಾಮರ್ಥ್ಯ ಹೊಂದಿರಲಿದೆ. ಒಂದು ಗಂಟೆಗೆ 30ಕ್ಕಿಂತಲೂ ಹೆಚ್ಚಿನ ಟ್ರಿಪ್ ಸಂಚರಿಸಬಹುದು. ಸಂಸ್ಥೆ ನಡೆಸಿದ ಪಿಎಚ್ಪಿಡಿಟಿ (ಪೀಕ್ ಅವರ್ ಪೀಕ್ ಡೈರೆಕ್ಷನ್ ಟ್ರಾಫಿಕ್) ಅಧ್ಯಯನದ ಪ್ರಕಾರ, ಈ ಮಾರ್ಗದಲ್ಲಿ ವರ್ಷಕ್ಕೆ ಶೇಕಡಾ 19ರಷ್ಟು ಹೆಚ್ಚಿನ ಪ್ರಯಾಣಿಕರ ಹೆಚ್ಚಳವಾಗುವ ಸಾಧ್ಯೆತೆಯಿದೆ.
ಇನ್ನು 2031ರ ವೇಳೆಗೆ ದಿನಕ್ಕೆ 10,931, 2041ಕ್ಕೆ 13,858 ಪ್ರಯಾಣಿಕರು ಪ್ರಯಾಣ ಮಾಡಲಿದ್ದಾರೆ ಎಂದು ಅಂದಾಜು ಮಾಡಲಾಗಿದೆ. 2051ಕ್ಕೆ 17,599 ಜನ ಸಂಚರಿಸುವ ಸಾಧ್ಯತೆ ಇದೆ. ಅಲ್ಲದೆ, 2061ರವರೆಗೂ ಇಷ್ಟೇ ಬೋಗಿಗಳು ಸಾಕಾಗುತ್ತವೆ. ಅಲ್ಲಿಯವರೆಗೆ ಮೂರು ಬೋಗಿಗಳ ರೈಲು ಸಂಚರಿಸಿದರೂ ಇಷ್ಟು ಪ್ರಯಾಣಿಕರು ತೊಂದರೆಯಿಲ್ಲದೆ ಪ್ರಯಾಣ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ, ಟ್ರಿಪ್ಗಳನ್ನು ಹೆಚ್ಚಳ ಆಗುವ ಸಾಧ್ಯತೆಯು ಹೆಚ್ಚಿದೆ ಎಂದು ಎನ್ನುವುದು ಅಧಿಕಾರಿಗಳ ಮಾತಾಗಿದೆ.
2019ರ ಮೂಲ ವಿಸ್ತ್ರತ ಯೋಜನಾ ವರದಿಯಲ್ಲಿ 9 ಬೋಗಿಯ ರೈಲಿಗೆ ಅನುಗುಣವಾಗಿ ನಿಲ್ದಾಣ ವಿನ್ಯಾಸ ಮಾಡಿಕೊಳ್ಳುವುದು ಹಾಗೂ ಆರು ಬೋಗಿಗಳ ನಿಲುಗಡೆಗೆ ತಕ್ಕಂತೆ ನಿಲ್ದಾಣ ನಿರ್ಮಾಣ ಮಾಡಲು ಯೋಜಿಸಲಾಗಿತ್ತು. ಆಗ ನಿಲ್ದಾಣಕ್ಕೆ ₹500 ಕೋಟಿ ವೆಚ್ಚ ಎಂದು ಅಂದಾಜು ಮಾಡಲಾಗಿತ್ತು. ಆದರೆ, 5 ವರ್ಷದ ಬಳಿಕ ಈ ವೆಚ್ಚ ಸುಮಾರು ₹850-900 ಕೋಟಿಗೆ ತಲುಪುತ್ತಿದೆ. ಆದ್ದರಿಂದ ನಿಲ್ದಾಣದ ವಿನ್ಯಾಸ ಬದಲಿಸಲು ಕೆ-ರೈಡ್ ಮುಂದಾಗಿದೆ ಎಂದು ತಿಳಿದುಬಂದಿದೆ.
ಈ 9 ಬೋಗಿಯ ರೈಲು ನಿಲುಗಡೆಯಾಗುವಷ್ಟು ಉದ್ದದ ಪ್ಲಾಟ್ಫಾರ್ಮ್ ನಿರ್ಮಿಸಿಕೊಂಡು ಹೆಚ್ಚುವರಿ ವೆಚ್ಚದ ಬದಲು ಆರು ಬೋಗಿಯ ರೈಲು ನಿಲ್ಲುವಷ್ಟು ಉದ್ದದ ಪ್ಲಾಟ್ಫಾರ್ಮ್ ನಿರ್ಮಿಸಿಕೊಳ್ಳುವ ಚರ್ಚೆ ನಡೆದಿದೆ. ತಿಂಗಳಾಂತ್ಯದ ಒಳಗೆ ಕೆ-ರೈಡ್ ಬೋರ್ಡ್ ಸಭೆ ನಡೆಯಲಿದ್ದು, ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎನ್ನುವ ಮಾಹಿತಿ ತಿಳಿದುಬಂದಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications