Bengaluru Rain: ಮಳೆಯಲ್ಲಿ ನಿಂತ ಜನ; ಈ ಕಾರಣಕ್ಕೆ ಡಿಕೆಶಿಗೆ ಥ್ಯಾಂಕ್ಸ್‌ ಹೇಳ್ತಿದ್ದಾರೆ

ವೀಕೆಂಡ್‌ ಪ್ಲಾನ್‌ನಲ್ಲಿದ್ದ ಬೆಂಗಳೂರಿನ ಜನರಿಗೆ ಮಳೆರಾಯ ಶಾಕ್‌ ನೀಡಿದ್ದಾನೆ. ಶನಿವಾರ ರಾತ್ರಿ ಸುರಿದ ಮಳೆಯಿಂದ ಬೆಂಗಳೂರಿನಲ್ಲಿ ಅವಾಂತರ ಸೃಷ್ಟಿಯಾಗಿದ್ದು, ಜನ ಪರದಾಡಿದ್ದಾರೆ. ರಸ್ತೆ ಹಾಗೂ ಮೇಲ್ಸೇತುವೆಗಳಲ್ಲಿ ನೀರು ನಿಂತಿದ್ದು ಮನೆಗಳಿಗೆ ತೆರಳಲು ಜನ ಸುಸ್ತಾದರು. ಈ ನಡುವೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್‌ ಅವರಿಗೆ ಜನ ಈ ಕಾರಣಕ್ಕೆ ಥ್ಯಾಂಕ್ಸ್‌ ಅಂತ ಹೇಳ್ತಿದ್ದಾರೆ.

ಬೆಂಗಳೂರಿನಲ್ಲಿ ಸಣ್ಣ ಮಳೆ ಬಂದರೂ ಪರದಾಡುವ ಪರಿಸ್ಥಿತಿ ಇದೆ. ಸಣ್ಣ ಮಳೆಗೂ ರಸ್ತೆಗಳಲ್ಲಿ, ಅಂಡರ್‌ಪಾಸ್‌ಗಳಲ್ಲಿ ಹಾಗೂ ಮೇಲ್ಸೇತುವೆಗಳಲ್ಲಿ ನೀರು ನಿಲ್ಲುವುದು ಕಾಮನ್‌. ನೆನ್ನೆ ಸಂಜೆ ಸುರಿದ ಮಳೆಗೆ ಬೆಂಗಳೂರಿನ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇದೀಗ ಬ್ರ್ಯಾಂಡ್‌ ಬೆಂಗಳೂರು ಅಂದ್ರೆ ಇದೇನಾ ಅಂತ ಜನ ಕೇಳ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಡಿ.ಕೆ ಶಿವಕುಮಾರ್‌ ಅವರನ್ನು ಟ್ಯಾಗ್‌ ಮಾಡುತ್ತಿರುವ ಜನ ಬ್ರ್ಯಾಂಡ್‌ ಬೆಂಗಳೂರಿನ ಬಗ್ಗೆ ವ್ಯಂಗ್ಯವಾಡಿದ್ದಾರೆ. ಬ್ರ್ಯಾಂಡ್‌ ಬೆಂಗಳೂರು ಎನ್ನುವುದು ಕೇವಲ ಘೋಷಣೆಗೆ ಸೀಮಿತವಾಗಿದೆ. ಆದರೆ, ಜನ ಇನ್ನೂ ಪರದಾಡುವುದು ತಪ್ಪುತ್ತಿಲ್ಲ ಎನ್ನುತ್ತಿದ್ದಾರೆ. ಕೆಲವರು ವ್ಯಂಗ್ಯವಾಗಿ ಥ್ಯಾಂಕ್ಸ್‌ ಡಿ.ಕೆ ಶಿವಕುಮಾರ್‌ ಅವರೇ, ನೀವು ಹೇಳಿದ ಬ್ರ್ಯಾಂಡ್‌ ಬೆಂಗಳೂರು ಇದೇನಾ ಅಂತ ಕೇಳ್ತಾ ಇದ್ದಾರೆ.

Bengaluru Rain People standing in the rain Thanks to DKS for this reason

ಡಿ.ಕೆ ಶಿವಕುಮಾರ್‌ ಬದ್ಧತೆಗೆ ಜೈ

ಬೆಂಗಳೂರಿನಲ್ಲಿ ಡಿ.ಕೆ ಶಿವಕುಮಾರ್‌ ಅವರ ಬದ್ಧತೆಗೆ ಜೈ.. ಎಂದು ವ್ಯಂಗ್ಯವಾಗಿ ಸುಮುಖ ಶೆಣೈ ಎನ್ನುವವರು ಹೇಳಿದ್ದಾರೆ. ಬೆಂಗಳೂರಿನ ಮಳೆಯ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಟ್ವೀಟ್‌ ಮಾಡಿರುವ ಅವರು. ಬೆಂಗಳೂರನ್ನು ಬ್ರ್ಯಾಂಡ್‌ ಬೆಂಗಳೂರು ಮಾಡಿದ್ದಕ್ಕಾಗಿ ಥ್ಯಾಂಕ್ಸ್‌ ಡಿಯರ್‌ ಡಿ.ಕೆ ಶಿವಕುಮಾರ್‌ ಅವರೇ ಎಂದು ಹೇಳಿದ್ದಾರೆ.

ಹೊಸ ಸ್ವಿಮ್ಮಿಂಗ್‌ ಫುಲ್‌ಗೆ ಥ್ಯಾಂಕ್ಸ್‌

ಬೆಂಗಳೂರಿನಲ್ಲಿ ಹೊಸ ಸ್ವಿಮ್ಮಿಂಗ್‌ ಫುಲ್‌ ಸೃಷ್ಟಿಯಾಗಿದೆ. ಈ ಹೊಸ ಈಜುಕೊಳ ಸೃಷ್ಟಿ ಮಾಡಿದ್ದಕ್ಕಾಗಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಸರ್ಕಾರಕ್ಕೆ ಧನ್ಯವಾದ ಎಂದು ಜನ ಟ್ರೋಲ್‌ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ನಾವು ಮತ್ತೊಂದು ಸ್ವಿಮ್ಮಿಂಗ್‌ಫುಲ್‌ ನೋಡಿದ್ವಿ, ಮಾನ್ಯತಾಟೆಕ್‌ ಪಾರ್ಕ್‌ ಮೇಲ್ಸೇತುವೆ ಮೇಲೆ ಇದಿದೆ ಎಂದಿದ್ದಾರೆ. ಇದನ್ನೂ ಸಹ ಡಿ.ಕೆ ಶಿವಕುಮಾರ್‌ ಅವರು ಕ್ರೆಡಿಟ್‌ ತಗೊಂಡು ಬ್ರ್ಯಾಂಡ್‌ ಬೆಂಗಳೂರಿಗೆ ಸೇರಿಸುತ್ತಾರಾ ಎಂದು ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದಾರೆ. ಮಾನ್ಯತಾ ಟೆಕ್‌ ಪಾರ್ಕ್‌ ಮೇಲ್ಸೇತುವೆ ಮೇಲೆ ಮಳೆ ನೀರು ನಿಂತಿದ್ದು, ಕಾರ್‌ನಲ್ಲಿ ಹೋಗುವ ಕೆಲವರು ಬೆಂಗಳೂರಲ್ಲಿ ಮಾನಸ ಸರೋವರ.. ಎನ್ನುವ ಹಾಡನ್ನು ಹಾಡಿರುವ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಬೆಂಗಳೂರಿನಲ್ಲಿ ಮಳೆ ಅವಾಂತರ: ಬೆಂಗಳೂರಿನಲ್ಲಿ ಶನಿವಾರ ತಡರಾತ್ರಿ ಭಾರೀ ಮಳೆ ಸುರಿದಿದೆ. ಭಾನುವಾರವೂ ಬೆಂಗಳೂರಿನ ಹಲವು ಭಾಗದಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ಶನಿವಾರ ಒಂದೇ ದಿನ ಬೆಂಗಳೂರಿನಲ್ಲಿ 36 ಮಿ.ಮೀಟರ್‌ ಮಳೆಯಾಗಿರುವುದು ವರದಿಯಾಗಿದೆ. ಯಲಹಂಕ, ಸರ್ಜಾಪುರ ಹಾಗೂ ಹೆಬ್ಬಾಳ ಸೇರಿದಂತೆ ಹಲವು ಭಾಗದಲ್ಲಿ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿರುವುದು ವರದಿಯಾಗಿದೆ. ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿದ್ದ ಹಲವು ವಸ್ತುಗಳಿಗೆ ಹಾನಿಯಾಗಿವೆ. ದಿನಸಿ ಹಾಗೂ ಬಟ್ಟೆಗಳು ಮಳೆ ನೀರಿಗೆ ಹಾಳಾಗಿವೆ. ಪ್ರತಿ ಬಾರಿ ಮಳೆ ಬಂದಾಗಲೂ ಕೆಲವು ಪ್ರದೇಶದಲ್ಲಿ ಸಮಸ್ಯೆ ಆಗುತ್ತಿದ್ದರೂ, ಬಿಬಿಎಂಪಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ ಎನ್ನುವ ಆಕ್ರೋಶ ಜನರಲ್ಲಿ ಹೆಚ್ಚಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+