ಬೆಂಗಳೂರಿನಲ್ಲಿ 2000 ರು ನಕಲಿ ನೋಟು, 4 ಬಂಧನ
ಅಪನಗದೀಕರಣದ ರಂಗೋಲಿ ಹಾಕಿ ಹಣಗಳ್ಳರನ್ನು ಹಿಡಿಯಲು ನರೇಂದ್ರ ಮೋದಿ ಯತ್ನಿಸುತ್ತಿದ್ದರೆ, ಅದೇ ರಂಗೋಲಿ ಕೆಳಗೆ ತೂರಲು ಯತ್ನಿಸುವವರಿಗೇನೂ ಕಮ್ಮಿಯಿಲ್ಲ. ಬೆಂಗಳೂರಿನಲ್ಲಿ ನಕಲಿ ನೋಟು ತಯಾರಿಸಿ ಮದ್ಯ ಕೊಳ್ಳಲು ಯತ್ನಿಸಿದವರು ಸರಳ ಹಿಂದಿದ್ದಾರೆ.
ಬೆಂಗಳೂರು, ಡಿಸೆಂಬರ್ 21 : ಹೊಸ ಎರಡು ಸಾವಿರ ರುಪಾಯಿ ಮೌಲ್ಯದ ನಕಲಿ ನೋಟುಗಳನ್ನು ಬಳಸಿ ವಹಿವಾಟು ಮಾಡಲು ಯತ್ನಿಸಿದ ನಾಲ್ವರನ್ನು ಬೆಂಗಳೂರಿನ ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಹೊಸ ನೋಟಿನಂತೆಯೇ ಕಾಣುತ್ತಿದ್ದ 2000 ರುಪಾಯಿ ನೋಟಿನ ಕಲರ್ ಝೆರಾಕ್ಸ್ ಮಾಡಿಸಿ, ಅದನ್ನೇ ಬಳಸಿ ಗುಂಡು ಕೊಳ್ಳಲೆತ್ನಿಸಿದ ನಾಲ್ವರನ್ನು ಪೊಲಿಸರು ಬಂಧಿಸಿದ್ದಾರೆ. ಅವರಲ್ಲಿ ಓರ್ವನ ವಯಸ್ಸು 19 ವರ್ಷ.
ಜ್ಞಾನಭಾರತಿ ಪೊಲೀಸ್ ಸ್ಟೇಷನ್ ಮಿತಿಯಲ್ಲಿರುವ ವೈನ್ ಅಂಗಡಿಗೆ ಬಂದ ನಾಲ್ವರು ನಕಲಿ ನೋಟು ನೀಡಿ ಮದ್ಯ ಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆ ನೋಟು ನಕಲಿ ಎಂದು ತಿಳಿಯುತ್ತಿದ್ದಂತೆ ವೈನ್ ಶಾಪ್ ಮಾಲಿಕ ತಕರಾರು ಎತ್ತಿದ್ದಾರೆ. [ಪ್ಲಾಸ್ಟಿಕ್ ನೋಟಿನ ಸಾಧಕ-ಬಾಧಕಗಳೇನು?]

ಕೆಲಸ ಕೆಟ್ಟಿತೆಂದು ನಾಲ್ವರು ಓಡಲು ಯತ್ನಿಸಿದಾಗ ಅವರನ್ನು ಬೆನ್ನತ್ತಿ ಮದ್ಯದಂಗಡಿ ಮಾಲಿಕ ಓರ್ವನನ್ನು ಬಂಧಿಸಿ ಪೊಲೀಸರಿಗೆ ತಿಳಿಸಿದ್ದಾರೆ. ವಿಚಾರಿಸಿದಾಗ ಬನ್ನೇರುಘಟ್ಟ ರಸ್ತೆಯಲ್ಲಿರುವ ತಮ್ಮ ಸ್ನೇಹಿತನ ಅಂಗಡಿಯಲ್ಲಿ ಕಲರ್ ಝೆರಾಕ್ಸ್ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
22 ವರ್ಷದ ಶಶಾಂಕ್ ಮತ್ತು 19 ವರ್ಷದ ಮಧುಕುಮಾರ್ ಅವರನ್ನು ನಕಲಿ ನೋಟು ಛಾಪಿಸಿದ್ದಕ್ಕಾಗಿ, ಮತ್ತು 27 ವರ್ಷದ ನಟರಾಜ್ ಹಾಗಿ 21 ವರ್ಷದ ಕಿರಣ್ ಕುಮಾರ್ ನನ್ನು ಆ ನಕಲಿ ನೋಟು ಬಳಸಿ ಕೊಳ್ಳಲು ಯತ್ನಿಸಿದ್ದಕ್ಕಾಗಿ ಬಂಧಿಸಲಾಗಿದೆ. ಅವರಿಂದ ಛಾಪಿಸಿದ 25 ನೋಟುಗಳಲ್ಲಿ 8ನ್ನು ಮಾತ್ರ ವಶಪಡಿಸಿಕೊಳ್ಳಲಾಗಿದೆ. [ಸರ್ಜಿಕಲ್ ಸ್ಟ್ರೈಕ್ ಅಂದ್ರೆ... ಹಿಂಗಿರಬೇಕು! ಸೂಪರ್!]
-
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು












Click it and Unblock the Notifications