Bengaluru- Mysuru Expressway: ಶ್ರೀರಂಗಪಟ್ಟಣ ಸಮೀಪ ಟೋಲ್ ಆರಂಭ- ಅಂಕಿಅಂಶ ತಿಳಿಯಿರಿ
ಬೆಂಗಳೂರು, ಜುಲೈ 01: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಶನಿವಾರ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಎರಡನೇ ಭಾಗದಲ್ಲಿ ಟೋಲ್ ಸಂಗ್ರಹಿಸಲು ಆರಂಭಿಸಿದೆ. ಮಂಡ್ಯದ ಶ್ರೀರಂಗಪಟ್ಟಣ ಸಮೀಪದ ಗಣಗನೂರು ಟೋಲ್ ಪ್ಲಾಜಾದಲ್ಲಿ ಶನಿವಾರ ಬೆಳಗ್ಗೆ ಟೋಲ್ ಸಂಗ್ರಹ ಆರಂಭವಾಗಿದೆ.
ಗಣಗನೂರು ಟೋಲ್ ಪ್ಲಾಜಾದಲ್ಲಿ ಟೋಲ್ ಸಂಗ್ರಹವನ್ನು ಎನ್ಎಚ್ಎಐ ಇತ್ತೀಚೆಗೆ ಸೂಚಿಸಿದೆ, ಇದರ ಪರಿಣಾಮವಾಗಿ ಎಕ್ಸ್ಪ್ರೆಸ್ವೇಯಲ್ಲಿ ಪ್ರಯಾಣ ದುಬಾರಿಯಾಗಿದೆ. ಇತ್ತೀಚಿನ ಟೋಲ್ ದರಗಳು ಇಲ್ಲಿವೆ.

ಇದೇ ವೇಳೆ ಗಣಗನೂರು ಟೋಲ್ ಬಳಿ ಕನ್ನಡ ಪರ ಸಂಘಟನೆಗಳ ಕೆಲ ಸದಸ್ಯರು ಶನಿವಾರ ಸಣ್ಣಪುಟ್ಟ ಪ್ರತಿಭಟನೆ ನಡೆಸಿದರು. ಕೆಲವು ಪ್ರಯಾಣಿಕರು ಫಾಸ್ಟ್ಟ್ಯಾಗ್ ಸ್ಕ್ಯಾನಿಂಗ್ನಲ್ಲಿ ದೋಷಗಳ ಬಗ್ಗೆ ದೂರು ನೀಡಿದ್ದು, ಅದನ್ನು ಸರಿಪಡಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.

ಪ್ರವೇಶ-ನಿಯಂತ್ರಿತ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಮಾರ್ಚ್ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡಿತು. ಮಾರ್ಚ್ 27 ರ ಅಧಿಸೂಚನೆಯಲ್ಲಿ 22 ಪ್ರತಿಶತದಷ್ಟು ಟೋಲ್ ಅನ್ನು ಪರಿಷ್ಕರಿಸಿತು. ಬೆಂಗಳೂರು ಮತ್ತು ನಿಡಘಟ್ಟ (ಕಣಿಮಿಣಿಕೆ ಮತ್ತು ಶೇಷಗಿರಿ ಹಳ್ಳಿ ಟೋಲ್ ಪ್ಲಾಜಾಗಳು) ನಡುವೆ ಜೂನ್ನಲ್ಲಿ ಸಂಗ್ರಹವನ್ನು ಪ್ರಾರಂಭಿಸಿತು.

ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ 119 ಕಿಮೀ (74 ಮೈಲಿ) ಉದ್ದವಾಗಿದೆ. ಇದು ಆರು-ಪಥದ, ಎತ್ತರಿಸಿದ ಪ್ರವೇಶ-ನಿಯಂತ್ರಿತ ಎಕ್ಸ್ಪ್ರೆಸ್ವೇ ಆಗಿದೆ. ಇದನ್ನು ₹ 8,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದನ್ನು ಎರಡು ಹಂತಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ.












Click it and Unblock the Notifications