Namma Metro New Line: ಹೊಸ ಯೋಜನೆಗೆ ಬೇಕಿದೆ 830ಕ್ಕೂ ಹೆಚ್ಚು ಆಸ್ತಿಗಳ ಜಾಗ
ಬೆಂಗಳೂರು, ಡಿಸೆಂಬರ್ 24: ಬೆಂಗಳೂರು ನಮ್ಮ ಮೆಟ್ರೋ ಯೋಜನೆಗಳಲ್ಲಿ ಮಹತ್ವದ್ದಾಗಿರುವ ಹೆಬ್ಬಾಳ-ಸರ್ಜಾಪುರ ಲೈನ್ ಕಾಮಗಾರಿ ಆರಂಭಕ್ಕೆ ರಾಜ್ಯ ಸರ್ಕಾರ ಡಿಸೆಂಬರ್ 7ರಂದು ಅನುಮೋದನೆ ನೀಡಿದೆ. ಯೋಜನೆ ಕಾರ್ಯಗತಗೊಳಿಸಲು BRMCL ಸೂಕ್ತ ಪ್ಲಾನ್ ಮಾಡಿಕೊಂಡಿದೆ. ಈಗಾಗಲೇ ನೂರಾರು ಎಕರೆ ಜಾಗ ಗುರುತಿಸಲಾಗಿದೆ. ಅದರಲ್ಲಿ ಖಾಸಗಿ ಜಾಗಗಳು ಇದ್ದು, ಯೋಜನೆ ಸಾಕಾರಕ್ಕೆ ಅವುಗಳು ಅಗತ್ಯವಿವೆ.
ನಮ್ಮ ಮೆಟ್ರೋ ಅಧಕಾರಿಗಳು ಗುರುತಿಸಿರುವ 160 ಎಕರೆ ಪ್ರದೇಶದಲ್ಲಿನ ಒಟ್ಟು 830ಕ್ಕೂ ಹೆಚ್ಚು ಆಸ್ತಿಗಳು ನೂತನ ಮಾರ್ಗ ನಿರ್ಮಾಣ, ನಿಲ್ದಾಣ ನಿರ್ಮಿಸಲು ಅಗತ್ಯವಿದೆ. ಕೆಲವೆಡೆ ದೊಡ್ಡ ದೊಡ್ಡ ಆಸ್ತಿಗಳಿದ್ದು, ಅವು ಖಾಸಗಿ ವ್ಯಕ್ತಗಳಿಗೆ ಸೇರಿವೆ. ಹೆಬ್ಬಾಳ ಕೆರೆಯ ಪಕ್ಕದಲ್ಲಿ ಒಟ್ಟು ಸುಮಾರು 45 ಎಕರೆ ಜಾಗವನ್ನು ಬಿಎಂಆರ್ಸಿಎಲ್ ಈಗಾಗಲೇ ಗುರುತಿಸಿದೆ ಎಂದು 'ಡಿಎಚ್' ವರದಿ ಮಾಡಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಸೇರಿದ ಜಾಗ ಬಿಎಂಆರ್ಸಿಎಲ್ಗೆ ಬಿಟ್ಟುಕೊಡುವಂತೆ ಸಾಕಷ್ಟು ಮನವಿ, ಒತ್ತಾಯ ಕೇಳಿ ಬಂದಿವೆ. ಅದರ ನಡುವೆ ಯೋಜನೆಗೆ ಸರ್ಕಾರವೇ ಒಪ್ಪಿಗೆ ನೀಡಿದ್ದರಿಂದ ಜಾಗ ಸಮಸ್ಯೆ ಆಗುವುದಿಲ್ಲ ಎನ್ನಲಾಗಿದೆ. ಆದರೆ ಖಾಸಗಿ ವ್ಯಕ್ತಿಗಳಿಗೆ ಸಂಬಂಧಿಸಿದ 830 ಎಕರೆ ಆಸ್ತಿಗಳು ಈ ಮಾರ್ಗ ನಿರ್ಮಾಣಕ್ಕೆ ಬೇಕಿದೆ. ಈ ಬಗ್ಗೆ ನಮ್ಮ ಮೆಟ್ರೋ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ.
28000 ಕೋಟಿ ರೂ, 28 ಮೆಟ್ರೋ ನಿಲ್ದಾಣಗಳು
ಹೆಬ್ಬಾಳ-ಸರ್ಜಾರಪುರ ಮಾರ್ಗವು 36.5 ಕೀ.ಮೀ ಇದ್ದು, ಮೆಟ್ರೋ ಯೋಜನೆ ಮೂರನೇ ಹಂತದ ಭಾಗವಾಗಿದೆ. ಇದರಲ್ಲಿ ಒಟ್ಟು 28 ನಿಲ್ದಾಣಗಳು ನಿರ್ಮಾಗೊಳ್ಳಲಿವೆ. ಅದರಲ್ಲಿ ಎತ್ತರಿಸಿದ (22.14ಕಿ.ಮೀ) ಮಾರ್ಗದಲ್ಲಿ 17 ನಿಲ್ದಾಣ ಹಾಗೂ ಸುರಂಗ (14.45 ಕಿ.ಮೀ.) ಮಾರ್ಗದಲ್ಲಿ 11 ನಿಲ್ದಾಣಗಳು ತಲೆಎತ್ತಲಿವೆ. ಯೋಜನೆಯ ವೆಚ್ಚ ಒಟ್ಟು 28000 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಇದೆಲ್ಲ ಯೋಜನೆಗಳು ಅಂದುಕೊಂಡಂತೆ ನೆರವೇರಲು ಮೊದಲು ಗುರುತಿಸಿದ ಭೂಮಿ ಸ್ವಾಧಿನವಾಗಬೇಕು. ಅದರ ಆರಂಭಿಕ ಪ್ರಕ್ರಿಯೆ ಶುರುವಾಗಿವೆ. ಸುಮಾರು 482 ಕಟ್ಟಡಗಳು ಮಾರ್ಗದಲ್ಲಿ ಇವೆ. ಅದರಲ್ಲಿ 314 ವಸತಿ, 37 ವಾಣಿಜ್ಯ ಮತ್ತು 63 ಕೈಗಾರಿಕಾ ಆಸ್ತಿಗಳಿವೆ ಎಂದು BMRCL ಗುರುತಿಸಿದೆ.
ಹೆಬ್ಬಾಳದಲ್ಲಿ ಬಹು ಸಾರಿಗೆ ಹಬ್
ಬೆಂಗಳೂರಿನ ಹೃದಯಭಾಗದಿಂದ ಅಂದರೆ ಮೇಕ್ರಿ ವೃತ್ತ, ಕೆ.ಆರ್. ವೃತ್ತ, ಗಾಲ್ಫ್ ಕೋರ್ಸ್, ಡೈರಿ ವೃತ್ತ, ಕೋರಮಂಗಲ, ಸರ್ಜಾಪುರ ಹೀಗೆ ಮುಖ್ಯ ಬಡಾವಣೆಗಳ ಹಾದು ಹೋಗುತ್ತದೆ. ಈ ಸರ್ಜಾಪುರ ಮೆಟ್ರೋ ಮಾರ್ಗವು ನಿರ್ಮಾಣಗೊಳ್ಳುತ್ತಿರುವ ನೀಲಿ ಮಾರ್ಗವನ್ನು ಸಂಧಿಸಲಿದೆ.
ಮೇಲಿನ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬಿಎಂಆರ್ಸಿಎಲ್ ಸರ್ಜಾಪುರದಲ್ಲಿ ಸ್ಟೇಬ್ಲಿಂಗ್ ಡಿಪೋ ಹಾಗೂ ಮೆಟ್ರೋ ಸಿಬ್ಬಂದಿ ವಸತಿ ಗೃಹ ನಿರ್ಮಾಣಕ್ಕೆಂದೇ ಒಟ್ಟು 55 ಎಕರೆ ಜಾಗ ಗುರುತಿಸಿದೆ. ಹೆಬ್ಬಾಳವು ಬಹು ಸಾರಿಗೆ ಕೇಂದ್ರವಾಗಲಿದೆ. ಇಲ್ಲಿ ಬಿಎಂಟಿಸಿ ನಿಲ್ದಾಣ, ಮೆಟ್ರೋ ನಿಲ್ದಾಣ ಸೇರಿದಂತೆ ಬಹು ಸಾರಿಗೆ ಮೂಲ ಸೌಕರ್ಯ ನಿರ್ಮಾಣಗೊಳ್ಳಲಿವೆ. ಅದಕ್ಕಾಗಿ ಅಧಿಕಾರಿಗಳು 45 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳುವುದು ಬಾಕಿ ಇದೆ.
ಈ ಮಾರ್ಗದ ಇಬ್ಲೂರಿನಲ್ಲಿ ಇಂಟರ್ ಚೇಂಜ್ ಮೆಟ್ರೋ ನಿಲ್ದಾಣ ಬರಲಿದೆ. ಒಟ್ಟಾರೆ ರಾಜ್ಯ ಸರ್ಕಾರವು ಬಿಎಂಆರ್ಸಿಎಲ್ಗೆ ಪೂರ್ವ-ನಿರ್ಮಾಣ ಚಟುವಟಿಕೆಗಳನ್ನು ಕೈಗೊಳ್ಳಲು ಹಾಗೂ ಭೂಮಿ ಸ್ವಾಧೀನಕ್ಕೆ ಅನುಮತಿಸಿದೆ. ಬಿಎಂಆರ್ಸಿಎಲ್ ಮತ್ತ ಸರ್ಕಾರದ ಮಧ್ಯೆ ಔಪಚಾರಿಕ ಸಂವಹನ ನಡೆಯುವುದು ಬಾಕಿ ಇದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications