ಮೆಟ್ರೋ ಪಿಲ್ಲರ್ ಕುಸಿತ: ದೋಷ ಪರಿಶೀಲಿಸಲು ಹೈದರಾಬಾದ್ನಿಂದ ಬೆಂಗಳೂರಿಗೆ ಬಂದಿಳಿಯಿತು ಐಐಟಿ ತಜ್ಞರ ತಂಡ- ಮಾಹಿತಿ ತಿಳಿಯಿರಿ
ಬೆಂಗಳೂರು, ಜನವರಿ 13: ಮಂಗಳವಾರ ಮುಂಜಾನೆ ಎಚ್ಬಿಆರ್ ಲೇಔಟ್ನಲ್ಲಿ ಮೆಟ್ರೋ ಪಿಲ್ಲರ್ ಕುಸಿದು ಮಹಿಳೆ ಮತ್ತು ಆಕೆಯ ಮಗು ಸಾವನ್ನಪ್ಪಿದ್ದರು. ನಿರ್ಮಾಣ ಹಂತದಲ್ಲಿರುವ ಮೆಟ್ರೋ ಪಿಲ್ಲರ್ಗಳ ರಚನಾತ್ಮಕ ದೋಷಗಳನ್ನು ಪರಿಶೀಲಿಸಲು ಮತ್ತು ಅಧ್ಯಯನ ಮಾಡಲು ಐಐಟಿ ಹೈದರಾಬಾದ್ನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರ ತಂಡ ಶುಕ್ರವಾರ ಬೆಂಗಳೂರಿಗೆ ಆಗಮಿಸಿದೆ.
ಸಾವಿನ ಕಾರಣದ ಬಗ್ಗೆ ತನಿಖೆ ನಡೆಸುತ್ತಿರುವ ಬೆಂಗಳೂರು ನಗರ ಪೊಲೀಸರು ಪ್ರಕರಣ ಸಲುವಾಗಿ ತಜ್ಞರನ್ನು ಸಂಪರ್ಕಿಸಲು ನಿರ್ಧರಿಸಿದ್ದಾರೆ.
'ಐಐಟಿ ಹೈದರಾಬಾದ್ನ ಇಬ್ಬರು ಪ್ರಾಧ್ಯಾಪಕರು ಶುಕ್ರವಾರ ನಗರಕ್ಕೆ ಆಗಮಿಸಿ ಸೈಟ್ ಅನ್ನು ಅಧ್ಯಯನ ಮಾಡಿ ನಮಗೆ ವರದಿಯನ್ನು ನೀಡಿದರು. ನಾವು ಅವರಿಗೆ ಪತ್ರ ಬರೆದ ತಕ್ಷಣ ಅವರು ಒಪ್ಪಿಗೆ ನೀಡಿದ್ದರು' ಎಂದು ಬೆಂಗಳೂರು ನಗರ ಪೊಲೀಸ್ ಅಧಿಕಾರಿಯೊಬ್ಬರು 'ಡೆಕ್ಕನ್ ಹೆರಾಲ್ಡ್' ಪತ್ರಿಕೆಗೆ ಖಚಿತಪಡಿಸಿದ್ದಾರೆ.

ಇದಕ್ಕೂ ಮುನ್ನ ಐಐಎಸ್ಸಿಗೆ ರಚನಾತ್ಮಕ ದೋಷಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ ಬೆಂಗಳೂರು ಪೊಲೀಸರ ಉನ್ನತ ಶ್ರೇಣಿಯು ಐಐಎಸ್ಸಿ ತಜ್ಞರಿಗೆ ತಮ್ಮ ಅಧ್ಯಯನವನ್ನು ತಡೆಹಿಡಿಯುವಂತೆ ವಿನಂತಿಸಿದೆ ಮತ್ತು ಐಐಟಿ ಹೈದರಾಬಾದ್ ತಂಡಕ್ಕೆ ಕಾರ್ಯವನ್ನು ಹಸ್ತಾಂತರಿಸಿದೆ.
ಪಿಲ್ಲರ್ ಮತ್ತು ಸೈಟ್ನ ಆರಂಭಿಕ ಅಧ್ಯಯನವನ್ನು ಮಾಡಲು BMRCL ನಿಂದ ನಿಯೋಜಿಸಲ್ಪಟ್ಟ IISc ಅನ್ನು ತ್ವರಿತವಾಗಿ ಬದಲಾಯಿಸುವ ಹಿಂದಿನ ಕಾರಣವೇನು ಎಂಬುದರ ಬಗ್ಗೆ ಉನ್ನತ ಅಧಿಕಾರಿ ವಿವರಿಸಿದ್ದಾರೆ, 'ಈ ಪಿಲ್ಲರ್ಗಳ ವಿನ್ಯಾಸದಲ್ಲಿ IISc ತೊಡಗಿಸಿಕೊಂಡಿದೆ ಎಂದು ಭಾವಿಸೋಣ (ಇದು ನಮಗೆ ತಿಳಿದಿಲ್ಲ), ನಂತರ ನಿಸ್ಸಂಶಯವಾಗಿ ಅವರು ನಕಾರಾತ್ಮಕ ಅಭಿಪ್ರಾಯವನ್ನು ನೀಡುವುದಿಲ್ಲ. ಅವರು (BMRCL ಮತ್ತು IISc) ಭಿನ್ನಾಭಿಪ್ರಾಯ ಹೊಂದಿದ್ದರೂ (ಬೇರೆ ಕಾರಣಕ್ಕಾಗಿ) ಅವರ ಅಭಿಪ್ರಾಯ ನಿಷ್ಪಕ್ಷವಾಗಿರುವುದಿಲ್ಲ. ಅಂದರೆ, ಅವರು ನಕಾರಾತ್ಮಕ ಅಭಿಪ್ರಾಯವನ್ನು ನೀಡಿದರೆ ಅದು ನಿಷ್ಪಕ್ಷಪಾತವಾಗುವುದಿಲ್ಲ. ಯಾವುದೇ ರೀತಿಯಲ್ಲಿ, ಇದು ನಮ್ಮ ಉದ್ದೇಶವನ್ನು ಪೂರೈಸುವುದಿಲ್ಲ. ಇದಕ್ಕಾಗಿಯೇ ನಾವು ಹೈದರಾಬಾದ್ ಐಐಟಿ ತಂಡಕ್ಕೆ ಪತ್ರ ಬರೆದಿದ್ದೇವೆ' ಎಂದು ತಿಳಿಸಿದ್ದಾರೆ.

ಈ ಕ್ರಮವು ಐಐಎಸ್ಸಿಯಂತಹ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತದೆ ಅಲ್ಲವೇ ಎಂಬ ಪ್ರಶ್ನೆಗೆ ಅಧಿಕಾರಿ ವಿವರಿಸಿದ್ದಾರೆ. 'ಅದು ಹಾಗಲ್ಲ. ಇದು ಯಾರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿಲ್ಲ. ಮುಂದಿನ ಸೂಚನೆಗಳವರೆಗೆ ತನಿಖೆಯನ್ನು ನಡೆಸುವಂತೆ ನಾವು IISc ತಂಡಕ್ಕೆ ಮೌಖಿಕವಾಗಿ ವಿನಂತಿಸಿದ್ದೇವೆ. IISc ತಂಡ ನಿನ್ನೆ ಅಪಘಾತ ಸ್ಥಳಕ್ಕೆ ಭೇಟಿ ನೀಡಿತ್ತು. ಆದರೆ BMRCL ನ ಕೋರಿಕೆಯ ಮೇರೆಗೆ ಇದನ್ನು ಮಾಡಲಾಗಿದೆಯೇ ಹೊರತು ಬೆಂಗಳೂರು ನಗರ ಪೊಲೀಸರು ಕೋರಿಕೆ ಮೇರಿಗೆ ಅಲ್ಲ. ಸಂಪೂರ್ಣ ವೃತ್ತಿಪರರಾಗಿರುವುದರಿಂದ, IISc ತಜ್ಞರು ನಮ್ಮ ನಿರ್ಧಾರವನ್ನು ಪ್ರಶ್ನಿಸಲಿಲ್ಲ. ಅವರು ಕಾಯಲು ನಿರ್ಧರಿಸಿದ್ದಾರೆ. ನಾವು ಅದನ್ನು ಅವರಿಗೆ ತಿಳಿಸುತ್ತೇವೆ ಮತ್ತು ಅವರು ಅರ್ಥಮಾಡಿಕೊಳ್ಳುತ್ತಾರೆ ಎಂಬುದಾಗಿ ನನಗೆ ಖಾತ್ರಿಯಿದೆ' ಎಂದು ಉನ್ನತ ಪೋಲೀಸ್ ಅಧಿಕಾರಿ ತಿಳಿಸಿದ್ದಾರೆ. ಸೇರಿಸಲಾಗಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ?












Click it and Unblock the Notifications