ಬೆಂಗಳೂರು: ಈ 112 ಮರಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ
ಬಸವೇಶ್ವರ ವೃತ್ತ ಮತ್ತು ಹೆಬ್ಬಾಳ ನಡುವಿನ ಸ್ಟೀಲ್ ಫ್ಲೈ ಓವರ್ ಗಾಗಿ ಧರೆಗುರುಳಲಿರುವ ಮೊದಲ ಹಂತದ 112 ಮರಗಳನ್ನು ಉಳಿಸಿಕೊಳ್ಳಲು ಕೇವಲ 8 ದಿನಗಳಷ್ಟೆ ಬಾಕಿ ಉಳಿದಿವೆ.
ಬೆಂಗಳೂರು, ಫೆಬ್ರವರಿ 8: ಬಸವೇಶ್ವರ ವೃತ್ತ ಮತ್ತು ಹೆಬ್ಬಾಳ ನಡುವಿನ ಸ್ಟೀಲ್ ಫ್ಲೈ ಓವರ್ ಗಾಗಿ ಧರೆಗುರುಳಲಿರುವ 112 ಮರಗಳನ್ನು ಉಳಿಸಿಕೊಳ್ಳಲು ಕೇವಲ 8 ದಿನಗಳಷ್ಟೆ ಬಾಕಿ ಉಳಿದಿವೆ.
ಈ ಹಿಂದೆ ಫ್ಲೈ ಓವರ್ ಗಾಗಿ 800 ಹಳೆಯ ಮರಗಳು ಧರೆಗುರುಳುವುದನ್ನು ವಿರೋಧಿಸಿ ಬೆಂಗಳೂರು ಜನತೆ ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದರು. ಆದರೆ ಇತ್ತೀಚೆಗೆ ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯದ ಅಧ್ಯಯನದಲ್ಲಿ ಹೊಸ ವಿಚಾರ ಬೆಳಕಿಗೆ ಬಂದಿತ್ತು. ಯೋಜನೆಯ ನೀಲನಕ್ಷೆ ಮಾಡುವಾಗ ಬಿಡಿಎ ಹೇಳಿದ್ದ 812 ರ ಬದಲಿಗೆ 2,244 ಮರಗಳು ಸ್ಟೀಲ್ ಫ್ಲೈ ಓವರ್ ಗಾಗಿ ಧರೆಗುರುಳಲಿವೆ ಎಂದು ಅಧ್ಯಯನ ಹೇಳಿತ್ತು. ಈ ಮರಗಳೆಲ್ಲಾ 60-80 ವರ್ಷ ಹಳೆಯದಾಗಿವೆ.[ಸ್ಟೀಲ್ ಫ್ಲೈ ಓವರ್ ವಿರುದ್ದದ ಪ್ರತಿಭಟನೆಗೆ ಆಮ್ ಆದ್ಮಿ ಪಾರ್ಟಿ ಬೆಂಬಲ]

ಮೊದಲಿಗೆ ಅರಮನೆ ಮೈದಾನದ ಮುಂಭಾಗದಲ್ಲಿರುವ ಜಯಮಹಲ್ ರಸ್ತೆಯಲ್ಲಿರುವ 112 ಮರಗಳನ್ನು ಕಡಿಯಲು ಬಿಬಿಎಂಪಿ ನಿರ್ಧರಿಸಿದೆ. ಇದಕ್ಕೆ ಆಕ್ಷೇಪಗಳೇನಾದರೂ ಇದ್ದರೆ ಸಲ್ಲಿಸಲು 10 ದಿನಗಳ ಸಮಯವನ್ನು ಬಿಬಿಎಂಪಿ ನೀಡಿದೆ. ಇದೀಗ ಎರಡು ದಿನ ಕಳೆದಿದ್ದು 8 ದಿನಗಳಷ್ಟೆ ಬಾಕಿ ಉಳಿದಿವೆ.
ತಮ್ಮ ಆಕ್ಷೇಪ ಮತ್ತು ದೂರುಗಳನ್ನು [email protected] ಗೆ ಈ-ಮೇಲ್ ಮಾಡಬಹುದು. ಫೋನ್ ಮೂಲಕ ದೂರು ಸಲ್ಲಿಸುವವರು 9480685381 ಗೆ ದೂರುಗಳನ್ನು ಸಲ್ಲಿಸಬಹುದು. ಈ ಕುರಿತು ಚೇಂಜ್ ಡಾಟ್ ಆರ್ಗ್ ನಲ್ಲಿ ಬೆಂಗಳೂರು ನಿವಾಸಿ ಸ್ಟಾನ್ಲೇ ಪಿಂಟೋ ಪಿಟಿಷನ್ ಸಲ್ಲಿಸಿದ್ದಾರೆ. ಈಗಾಗಲೇ ಇದಕ್ಕೆ ನೂರಾರು ಜನ ಬೆಂಬಲ ಸೂಚಿಸಿದ್ದು ಮರಗಳನ್ನು ಉಳಿಸಿಕೊಳ್ಳಲಿ ಇನ್ನೂ ಒಂದಷ್ಟು ಜನ ಬೆಂಬಲ ಬೇಕಾಗಿದೆ.[ಸ್ಟೀಲ್ ಫ್ಲೈ ಓವರ್ ನಿಂದ ತೆರಿಗೆ ಹಣ ಲೂಟಿ : ಎಎಪಿ]
ಈಗಾಗಲೇ ಬಿಬಿಎಂಪಿಯ ರಸ್ತೆ ನಿರ್ಮಾಣ ವಿಭಾಗವು ಅರಣ್ಯ ವಿಭಾಗಕ್ಕೆ ಮರಗಳನ್ನು ತೆರವು ಮಾಡಲು ಅನುಮತಿ ನೀಡುವಂತೆ ಕೇಳಿಕೊಂಡಿದೆ. ಇದರ ಮಧ್ಯದಲ್ಲಿ ಜನರಿಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಹೇಳಿದೆ. ಏನಾಗುತ್ತದೋ ನೋಡಬೇಕು.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ











Click it and Unblock the Notifications