Bengaluru D.K. Shivakumar: ಬೆಂಗಳೂರು - ಹೈದರಾಬಾದ್ ಸ್ಪರ್ಧಿಗಳಲ್ಲ.. ಆದರೆ: ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು ?
Bengaluru D.K. Shivakumar: ಬೆಂಗಳೂರಿಗೆ ಕರ್ನಾಟಕದ ಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜಧಾನಿ ಹಾಗೂ ನಗರಗಳಿಂದ ಪೈಪೋಟಿ ಶುರುವಾಗಿದೆ. ಅದರಲ್ಲೂ ತೆಲಂಗಾಣದ ರಾಜಧಾನಿ ಹೈದರಾಬಾದ್ - ಬೆಂಗಳೂರಿನ ಐಟಿ - ಸಿಲಿಕಾನ್ ಸಿಟಿ ಎನ್ನುವ ಖ್ಯಾತಿಗೆ ಭಾರೀ ಪೈಪೋಟಿ ನೀಡುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿರುವಾಗಲೇ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಮಹತ್ವದ ಮೆಸೇಜ್ ಹಂಚಿಕೊಂಡಿದ್ದಾರೆ.
ಬೆಂಗಳೂರು ಅಭಿವೃದ್ಧಿಯ ವೇಗದಲ್ಲಿದೆ. ಅದರಲ್ಲೂ ಕೆಲವೊಂದು ಆರೋಪ - ಪ್ರತ್ಯಾರೋಪಗಳ ಹೊರತಾಗಿಯೂ ಜಾಗತಿಕವಾಗಿ ಬೆಂಗಳೂರು ಸದಾ ಮುಂಚೂಣಿಯಲ್ಲಿದೆ. ಅದರಲ್ಲೂ ಐಟಿ - ಬಿಟಿಯಲ್ಲಿ ದೇಶದ ರಾಜಧಾನಿಯಾಗಿ ಬೆಂಗಳೂರು ಮುಂದುವರಿಯುತ್ತಿದೆ. ಆದರೆ, ಈಚೆಗೆ ಹೈದರಾಬಾದ್ ನಗರವು ಬೆಂಗಳೂರಿಗೆ ಭಾರೀ ಪೈಪೋಟಿಯನ್ನು ನೀಡುತ್ತಿದೆ. ಅದರಲ್ಲೂ ಐಟಿ ಕ್ಷೇತ್ರದಲ್ಲಿ ಕಳೆದ ಎರಡು ಮೂರು ದಶಕದ ಅವಧಿಯಿಂದಲೂ ಬೆಂಗಳೂರು ಹಾಗೂ ಹೈದರಾಬಾದ್ ನಗರಗಳ ನಡುವೆ ಭಾರೀ ಪೈಪೋಟಿ ಇದೆ.

ಇನ್ನು ಈಚೆಗೆ UnearthIQ ನಡೆಸಿದ ಅಧ್ಯಯನ ವರದಿಯ ವರದಿಯಂತೆ ವೆಚ್ಚದ ಅನುಕೂಲತೆ, ಮೂಲಸೌಕರ್ಯ ಮತ್ತು ಬ್ಯುಸಿನೆಸ್ - ಪ್ರೋ ಪರಿಸರ ವ್ಯವಸ್ಥೆ ಸೇರಿದಂತೆ ಹಲವು ವಿಷಯಗಳಲ್ಲಿ ಬೆಂಗಳೂರಿಗಿಂತ ಹೈದರಾಬಾದ್ ಪೂರಕವಾಗಿದೆ. ಭಾರತದಲ್ಲಿ GCC ಗಳಲ್ಲಿ ಬೆಂಗಳೂರು ನಗರವನ್ನು ಹೈದರಾಬಾದ್ ಹಿಂದಿಕ್ಕಿತ್ತು. 2025ನೇ ಸಾಲಿನಲ್ಲಿ ಎಲ್ಲಾ ಹೊಸ GCC ಗಳಲ್ಲಿ ಹೈದರಾಬಾದ್ ರಾಜ್ಯವು ಶೇಕಡಾ 46 ರಷ್ಟನ್ನು ಹೊಂದಿದ್ದರೆ, 2025ನೇ ಸಾಲಿನಲ್ಲಿ ಕರ್ನಾಟಕದ ಬೆಂಗಳೂರು 2025ನೇ ಸಾಲಿನ ಜನವರಿ-ನವೆಂಬರ್ ರಲ್ಲಿ ಶೇ33 ರಷ್ಟು Gcc ಹೊಂದಿದೆ ಎಂದು ಹೇಳಲಾಗಿತ್ತು.
ಬೆಂಗಳೂರು - ಹೈದರಾಬಾದ್ ಪರಸ್ಪರ ಸ್ಪರ್ಧಿಸುತ್ತಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್
ಹೈದರಾಬಾದ್ ಮತ್ತು ಬೆಂಗಳೂರು ಪರಸ್ಪರ ಸ್ಪರ್ಧಿಸುತ್ತಿಲ್ಲ, ಬದಲಾಗಿ ಜಾಗತಿಕವಾಗಿ ಪೈಪೋಟಿ ನಡೆಸುತ್ತಿವೆ. ನೀವು ಹೆಚ್ಚು ದೂರ ನಡೆಯಲು ಬಯಸಿದರೆ, ಒಟ್ಟಿಗೆ ನಡೆಯಿರಿ ಮತ್ತು ಎರಡು ನಗರಗಳು ಅದನ್ನೇ ಮಾಡುತ್ತಿವೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ತೆಲಂಗಾಣ ರೈಸಿಂಗ್ 2047 ಗ್ಲೋಬಲ್ ಶೃಂಗಸಭೆ ಅವರು ಬೆಂಗಳೂರು - ಹೈದರಾಬಾದ್ ನಡುವಿನ ಪ್ರಗತಿಯ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ಅಭಿನಂದನೆ ಸೂಚಿಸಲು ಇಚ್ಛಿಸುತ್ತೇನೆ. ಅವರು ತೆಲಂಗಾಣದ ಮುಖ್ಯಮಂತ್ರಿಯಾಗಿ ಎರಡು ವರ್ಷ ಪೂರೈಸಿದ್ದಾರೆ. ನನ್ನ ಗೆಳಯನಿಗೆ ಬೆಂಬಲ ಕೊಡುವುದಕ್ಕೆ ಬಂದಿದ್ದೇನೆ. ಅವರು ಇನ್ನಷ್ಟು ಸ್ಟ್ರಾಂಗ್ ಆಗುವುದಕ್ಕೆ ಬೆಂಬಲ ಕೊಡಲು ನಾನಿಲ್ಲಿ ಬಂದಿದ್ದೇನೆ. ತೆಲಂಗಾಣ ಹೆಚ್ಚು ಬೆಳೆಯುತ್ತಿದೆ. ದಕ್ಷಿಣ ಭಾರತದಲ್ಲಿ ಇರುವಷ್ಟು ಮಾನವ ಸಂಪನ್ಮೂಲ ಇನ್ನೇಲ್ಲೂ ಇಲ್ಲ. ಭಾರತದಲ್ಲಿ ಇರುವಷ್ಟು ಪ್ರತಿಭಾವಂತರು ವಿಶ್ವದ ಬೇರೆಲ್ಲೂ ಇಲ್ಲ. ನಾವು ಇಡೀ ವಿಶ್ವಕ್ಕೆ ಮಾದರಿಯಾಗಿದ್ದೇವೆ ಎಂದು ಅವರು ಹೇಳಿದ್ದಾರೆ.
ತೆಲಂಗಾಣ ಗ್ಲೋಬಲ್ ಪರಿಕಲ್ಪನೆಯನ್ನು ಹೊಂದಿದೆ. ಭಾರತದ ಸಾಹಸವನ್ನು ಪರಿಚಯಿಸುವಾಗ ಬೆಂಗಳೂರು - ಹೈದರಾಬಾದ್ ಹೆಸರನ್ನು ಉಲ್ಲೇಖಿಸದೆ ವಿವರಿಸಲು ಸಾಧ್ಯವೇ ಇಲ್ಲ. ಕೆಲವರು ಬೆಂಗಳೂರು ಹಾಗೂ ಹೈದರಾಬಾದ್ ಪ್ರತಿಸ್ಪರ್ಧಿಗಳು ಎನ್ನುವಂತೆ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸತ್ಯ ಬಲಿಷ್ಠವಾಗಿದೆ ನಾವು ಪ್ರತಿಸ್ಪರ್ಧಿಗಳಲ್ಲ ಪರಸ್ಪರ ಸಹಕಾರದಿಂದ ಸಾಗುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
Hyderabad and Bengaluru are not competing with each other but globally. If you want to walk far, walk together and that is what two cities are doing.
— DK Shivakumar (@DKShivakumar) December 8, 2025
Glimpses from my speech at the Telangana Rising Global Summit today. pic.twitter.com/Lx0OMzIGsa
ನೀವು ವೇಗವಾಗಿ ಓಡಬೇಕಾದರೆ ಒಬ್ಬರೇ ಓಡಿ.. ನೀವು ಅತ್ಯಂತ ದೂರ ಸಾಗಬೇಕಾದರೆ ಒಟ್ಟಾಗಿ ಸಾಗಿ ಎನ್ನುವ ಸಂದೇಶವನ್ನೂ ಸಹ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಇದೇ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.
-
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಗ್ರೇಟರ್ ಬೆಂಗಳೂರು ಚುನಾವಣೆ 2026: ಕರಡು ಮತದಾರರ ಪಟ್ಟಿ ದೂರು ಸಲ್ಲಿಕೆ ಅವಧಿ ವಿಸ್ತರಣೆ, ಅಂತಿಮ ಪಟ್ಟಿ ಮುಂದೂಡಿಕೆ -
ಬೆಂಗಳೂರಲ್ಲಿ ಗೇಲ್ ಗ್ಯಾಸ್ ಯೋಜನೆಗೆ ವೇಗ: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೇಳಿದ್ದೇನು -
E-Bike: ಗ್ರಾಮೀಣ ಆರೋಗ್ಯ ಸೇವೆಗೆ ಇ-ಬೈಕ್ ವೇಗ: ಮನೆ ಬಾಗಿಲಿಗೆ ವೈದ್ಯಕೀಯ ನೆರವು, ಏನಿದು ಯೋಜನೆ -
ವಿವಿಧ ರಾಜ್ಯಗಳ ಚುನಾವಣೆ ಬಳಿಕ ಪ್ರಧಾನಿ ಭೇಟಿಗೆ ಸರ್ವಪಕ್ಷ ಸಂಸದರ ನಿಯೋಗ ತೀರ್ಮಾನ: ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ












Click it and Unblock the Notifications