Bengaluru: ನಿತ್ಯ 3 ಲಕ್ಷ ಲೀ. ನೀರು ಮರುಬಳಕೆ ಮಾಡುವ ಅಪಾರ್ಟ್ಮೆಂಟ್ಸ್, 6000 ಲಿ. ಶುದ್ಧ ನೀರು ಉತ್ಪಾದನೆ
ಬೆಂಗಳೂರು, ಸೆಪ್ಟಂಬರ್ 05: ರಾಜಧಾನಿ, ಐಟಿ ನಗರಿ ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ನಿವಾರಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಯೊಂದು ನಡೆದಿದೆ. ನಗರದ ಐದು ಪ್ರಮುಖ ಅಪಾರ್ಟ್ಮೆಂಟ್ಸ್ (ವಸತಿ ಸಮುಚ್ಚಯ) 'ಬೋಸಾನ್ ವೈಟ್ವಾಟರ್' ಎಂಬ ಜಲ ಉಪಯುಕ್ತ ಕಂಪನಿಯೊಂದಿಗೆ ಕೈಜೋಡಿಸಿ, ತ್ಯಾಜ್ಯ ನೀರನ್ನು ಮರುಬಳಕೆ ಮಾಡುವ ಮೂಲಕ ಪ್ರತಿನಿತ್ಯ ಬರೋಬ್ಬರಿ 3 ಲಕ್ಷ ಲೀಟರ್ ನೀರನ್ನು ಉಳಿತಾಯ ಮಾಡುತ್ತಿವೆ. ಇದು ಜಲ ಸಂರಕ್ಷಣೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಈ ಯೋಜನೆಯಡಿಯಲ್ಲಿ, ಪ್ರತಿಯೊಂದು ಅಪಾರ್ಟ್ಮೆಂಟ್ನಲ್ಲಿ ಅತ್ಯಾಧುನಿಕ 11 ಹಂತದ ಶುದ್ಧೀಕರಣ ಪ್ರಕ್ರಿಯೆಯ ಮೂಲಕ ಎಸ್ಟಿಪಿ (ತ್ಯಾಜ್ಯ ನೀರು ಸಂಸ್ಕರಣಾ ಘಟಕ) ಯಿಂದ ಸಂಸ್ಕರಿಸಲ್ಪಟ್ಟ ಹೆಚ್ಚುವರಿ ನೀರನ್ನು ಉತ್ತಮ ಗುಣಮಟ್ಟದ ಮರುಬಳಕೆ ಯೋಗ್ಯ ನೀರನ್ನಾಗಿ ಪರಿವರ್ತಿಸಲಾಗುತ್ತಿದೆ. ಇದರಿಂದ ಪ್ರತಿ ಅಪಾರ್ಟ್ಮೆಂಟ್ ದಿನಕ್ಕೆ ಸುಮಾರು 60,000 ಲೀಟರ್ ಶುದ್ಧ ನೀರನ್ನು ಉತ್ಪಾದಿಸಲಿದೆ.

ಈ ನೂತನ ಯೋಜನೆಗೆ ಸೇರ್ಪಡೆಗೊಂಡಿರುವ ಅಪಾರ್ಟ್ಮೆಂಟ್ ಸಮುಚ್ಚಯಗಳಲ್ಲಿ ಹೊರಮಾವಿನಲ್ಲಿರುವ ಡಿಎಸ್ಆರ್ ವಾಟರ್ಸ್ಕೇಪ್ಸ್, ಸುಂಕದಕಟ್ಟೆಯಲ್ಲಿರುವ ದಿ ಟ್ರೀ ಬೈ ಪ್ರಾವಿಡೆಂಟ್, ವೈಟ್ಫೀಲ್ಡ್ನಲ್ಲಿರುವ ಎಸ್ಜೆಆರ್ ಬ್ರೂಕ್ಲಿನ್, ರಾಯಸಂದ್ರಲ್ಲಿರುವ ಎಂಜೆ ಅಮೇಡಿಯಸ್ ಹಾಗೂ ಜಿಗಣಿಯಲ್ಲಿರುವ ಡಿಎಲ್ಎಫ್ ವುಡ್ಲ್ಯಾಂಡ್ ಹೈಟ್ಸ್ ಸೇರಿವೆ.
ನಿತ್ಯ 10 ಲಕ್ಷ ಲೀ. ನೀರು ಉಳಿತಾಯ
ಈಗಾಗಲೇ 18 ಇತರ ವಸತಿ ಸಮುಚ್ಚಯಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಬೋಸಾನ್ ವೈಟ್ವಾಟರ್, ಈ ಎಲ್ಲಾ ಅಪಾರ್ಟ್ಮೆಂಟ್ಗಳಿಂದ ಒಟ್ಟಾಗಿ ಪ್ರತಿದಿನ 10 ಲಕ್ಷ ಲೀಟರ್ಗಿಂತಲೂ ಹೆಚ್ಚು ನೀರನ್ನು ಉಳಿತಾಯ ಮಾಡುತ್ತಿದೆ. ಉತ್ಪಾದನೆಯಾದ ಶುದ್ಧ ನೀರನ್ನು ಬೋಸಾನ್ ವೈಟ್ವಾಟರ್ ತನ್ನ ಟ್ಯಾಂಕರ್ ಜಾಲದ ಮೂಲಕ ಸಮೀಪದ ಕೈಗಾರಿಕೆಗಳಿಗೆ ಪೂರೈಸುತ್ತದೆ.
ಬೋಸಾನ್ ವೈಟ್ವಾಟರ್ನ ಈ ಮರುಬಳಕೆ ವ್ಯವಸ್ಥೆಯನ್ನು ಅಪಾರ್ಟ್ಮೆಂಟ್ ಆವರಣದಲ್ಲಿಯೇ ಸ್ಥಾಪಿಸಲಾಗುತ್ತದೆ. ಸಾಮಾನ್ಯವಾಗಿ, ಅಪಾರ್ಟ್ಮೆಂಟ್ಗಳು ತಮ್ಮ ಎಸ್ಟಿಪಿಯಿಂದ ಸಂಸ್ಕರಿಸಿದ ನೀರಿನ ಸ್ವಲ್ಪ ಭಾಗವನ್ನು ತೋಟಗಾರಿಕೆಗೆ ಬಳಸಿ, ಉಳಿದ ನೀರನ್ನು ವಿಲೇವಾರಿ ಮಾಡಲು ಹೆಚ್ಚುವರಿ ಹಣ ಖರ್ಚು ಮಾಡುತ್ತವೆ. ಆದರೆ, ಬೋಸಾನ್ ವ್ಯವಸ್ಥೆಯು ಈ ಹೆಚ್ಚುವರಿ ನೀರನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಶುದ್ಧೀಕರಿಸಿ, ಉತ್ತಮ ಗುಣಮಟ್ಟದ ನೀರನ್ನಾಗಿ ಪರಿವರ್ತಿಸುತ್ತದೆ. ಈ ನೀರನ್ನು ಸ್ಥಳದಲ್ಲೇ ಸಂಗ್ರಹಿಸಿ ಕೈಗಾರಿಕೆಗಳಿಗೆ ಸರಬರಾಜು ಮಾಡಲಾಗುತ್ತದೆ.
ಈ ವ್ಯವಸ್ಥೆಯಿಂದ ಅಪಾರ್ಟ್ಮೆಂಟ್ಗಳಿಗೆ ಹಲವು ಅನುಕೂಲಗಳಿವೆ. ಮೊದಲನೆಯದಾಗಿ, ನೀರಿನ ಕೊರತೆಯಿರುವ ಸಮಯದಲ್ಲಿ ಇದು ನೀರಿನ ಭರವಸೆ ಒದಗಿಸುತ್ತದೆ. ಎರಡನೆಯದಾಗಿ, ಸಂಸ್ಕರಿಸದ ನೀರಿನ ಅತಿಯಾದ ಬಳಕೆಯಿಂದ ಕಟ್ಟಡಗಳಿಗೆ ಆಗಬಹುದಾದ ಹಾನಿ ತಡೆಯುತ್ತದೆ. ಅಂತಿಮವಾಗಿ, ಅಪಾರ್ಟ್ಮೆಂಟ್ಗಳು 'ಶೂನ್ಯ ದ್ರವ ತ್ಯಾಜ್ಯ' ಕಟ್ಟಡಗಳಾಗಲು ಸಹಾಯ ಮಾಡುವುದರ ಜೊತೆಗೆ, ಪರಿಸರ ನಿಯಮಗಳನ್ನು ಪಾಲಿಸಲು ಅನುವು ಮಾಡಿಕೊಡುತ್ತದೆ.
ಈ ಕುರಿತು ಮಾತನಾಡಿದ ಬೋಸಾನ್ ವೈಟ್ವಾಟರ್ನ ಸಿಇಒ ಮತ್ತು ಸಹ-ಸಂಸ್ಥಾಪಕರಾದ ವಿಕಾಸ್ ಬ್ರಹ್ಮಾವರ್, "ಹೆಚ್ಚುವರಿ ಎಸ್ಟಿಪಿ ನೀರು ಅಪಾರ್ಟ್ಮೆಂಟ್ಗಳಿಗೆ ಒಂದು ಹೊರೆಯಾಗಿದೆ ಮತ್ತು ಅದರ ಸರಿಯಾದ ವಿಲೇವಾರಿಗೆ ಪ್ರಸ್ತುತ ಯಾವುದೇ ಮಾರ್ಗಗಳಿಲ್ಲ. ನಾವು ಈ ಹೊಣೆಯನ್ನು ಒಂದು ಸಂಪನ್ಮೂಲವಾಗಿ ಪರಿವರ್ತಿಸುವ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುತ್ತೇವೆ. ನಮ್ಮ ವ್ಯವಸ್ಥೆಯು ಎಸ್ಟಿಪಿ ನೀರನ್ನು ಶುದ್ಧೀಕರಿಸಿ, ಆಂತರಿಕ ಬಳಕೆಗೆ ಯೋಗ್ಯವಾಗಿಸುತ್ತದೆ. ಉಳಿದ ನೀರನ್ನು 'ಪ್ರತಿ ಲೀಟರ್ಗೆ ಪಾವತಿ' ಆಧಾರದ ಮೇಲೆ ಕೈಗಾರಿಕೆಗಳಿಗೆ ಪೂರೈಸಲಾಗುತ್ತದೆ. ಈ ವಿಧಾನದಿಂದ, ಅಪಾರ್ಟ್ಮೆಂಟ್ ಸಮುದಾಯಗಳ ಮೇಲೆ ಆರ್ಥಿಕ ಹೊರೆ ಹಾಕದೆ ಜಲ ಮರುಬಳಕೆಯನ್ನು ವಿಸ್ತರಿಸಲು ನಮಗೆ ಸಾಧ್ಯವಾಗುತ್ತಿದೆ," ಎಂದು ಹೇಳಿದರು.
ಎಸ್ಜೆಆರ್ ಬ್ರೂಕ್ಲಿನ್ ಅಪಾರ್ಟ್ಮೆಂಟ್ನ ಸಂಘದ ಸದಸ್ಯರಾದ ಸೆಲ್ವಪಾಂಡಿ ಅವರು, "ನಮ್ಮಲ್ಲಿನ ಹೆಚ್ಚುವರಿ ಎಸ್ಟಿಪಿ ನೀರು ವ್ಯರ್ಥವಾಗದೆ ಸದುಪಯೋಗವಾಗಬೇಕೆಂಬುದು ನಮ್ಮ ಆಶಯವಾಗಿತ್ತು. ಬೋಸಾನ್ನ ಈ ದೃಷ್ಟಿಕೋನದ ಭಾಗವಾಗುವುದು ಸುಸ್ಥಿರತೆಯ ಬಗೆಗಿನ ನಮ್ಮ ಬದ್ಧತೆಗೆ ಅನುಗುಣವಾಗಿದೆ. ಇದು ಪರಿಸರ ಸೇರಿದಂತೆ ಇದರಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಮೌಲ್ಯವನ್ನು ಸೃಷ್ಟಿಸುತ್ತದೆ ಎಂದು ನಾವು ಭಾವಿಸುತ್ತೇವೆ," ಎಂದು ಹರ್ಷ ವ್ಯಕ್ತಪಡಿಸಿದರು.
ಬೋಸಾನ್ ವೈಟ್ವಾಟರ್ ಬಗ್ಗೆ
ಬೋಸಾನ್ ವೈಟ್ವಾಟರ್ ಬೆಂಗಳೂರು ಮೂಲದ ಒಂದು ಜಲ ಉಪಯುಕ್ತತಾ ಕಂಪನಿಯಾಗಿದ್ದು, ಸಂಸ್ಕರಿಸಿದ ಚರಂಡಿ ನೀರನ್ನು ವಸತಿ ಮತ್ತು ವಾಣಿಜ್ಯ ಬಳಕೆಗೆ ಯೋಗ್ಯವಾದ ಉತ್ತಮ ಗುಣಮಟ್ಟದ ನೀರನ್ನಾಗಿ ಪರಿವರ್ತಿಸಲು ಸಮರ್ಪಿತವಾಗಿದೆ. ಇದರ 11-ಹಂತದ ಶುದ್ಧೀಕರಣ ಪ್ರಕ್ರಿಯೆ ಮತ್ತು IoT-ಚಾಲಿತ ಮೇಲ್ವಿಚಾರಣಾ ವ್ಯವಸ್ಥೆಯು ಜಲ ಚಕ್ರವನ್ನು ಉತ್ತೇಜಿಸಿ, ಸಮುದಾಯಗಳು 'ಶೂನ್ಯ ದ್ರವ್ಯ ತ್ಯಾಜ್ಯ' ಗುರಿಯನ್ನು ಸಾಧಿಸಲು ನೆರವಾಗುತ್ತದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್












Click it and Unblock the Notifications