ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಡದಿವರೆಗೂ ಮೆಟ್ರೋ ಸಂಪರ್ಕ ಕಲ್ಪಿಸುವಂತೆ ಬಿಡಿಎ ಮನವಿ

|
Google Oneindia Kannada News

ಬೆಂಗಳೂರು, ಜನವರಿ 2 : ಬಿಡದಿ, ಕೆಂಪೇಗೌಡ ಬಡಾವಣೆ ಇರುವ ಪ್ರದೇಶಗಳನ್ನು ಮೂರನೇ ಹಂತದ ಮೆಟ್ರೋ ಯೋಜನೆಯಲ್ಲಿ ಸೇರಿಸುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಬಿಡಿಎ ಪ್ರಸ್ತಾವನೆ ಸಲ್ಲಿಸಿದೆ.

ಎರಡನೇ ಹಂತದ ಮೆಟ್ರೋ ಮಾರ್ಗ: ಹಳಿ ಅಳವಡಿಸಲು ಭರದ ಸಿದ್ಧತೆಎರಡನೇ ಹಂತದ ಮೆಟ್ರೋ ಮಾರ್ಗ: ಹಳಿ ಅಳವಡಿಸಲು ಭರದ ಸಿದ್ಧತೆ

ಪ್ರಸ್ತುತ ಆರ್.ವಿ. ಕಾಲೇಜು ವರೆಗೆ 2 ನೇ ಹಂತದ ಮೆಟ್ರೋ ಸಂಪರ್ಕವಿದೆ. ಇದರಿಂದ ವಲಗೇರಹಳ್ಳಿ ಭಾಗದಲ್ಲಿರುವ ಬಿಡಿಎ ಫ್ಲ್ಯಾಟ್ ಪಡೆದವರಿಗೆ ಹೆಚ್ಚು ಅನುಕೂಲವಾಗುತ್ತಿದೆ. ಅಲ್ಲದೆ ಮೆಟ್ರೋ ಸಂಪರ್ಕ ಇರುವ ಪ್ರದೇಶಗಳಲ್ಲಿ ಹೆಚ್ಚು ಬೇಡಿಕೆಯೂ ಇದೆ.

BDA proposes include Bidadi in Phase-3 Metro

ಕಣಿಮಿಣಿಕೆ, ಕೊಮ್ಮಘಟ್ಟದಲ್ಲಿಯೂ ಬಿಡಿಎ ವಿವಿಧ ಮಾದರಿಯ ವಸತಿ ಸಮುಚ್ಛಯಗಳನ್ನು ನಿರ್ಮಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಸಂಚಾರ ಅನುಕೂಲತೆ ದೃಷ್ಟಿಯಿಂದ ಮೆಟ್ರೋ ಸಂಪರ್ಕ ಕಲ್ಪಿಸಲು ಪ್ರಸ್ತಾವನೆ ಸಲ್ಲಿಸಿದೆ.

ಮೈಸೂರು ರಸ್ತೆ ಹಾಗೂ ಮಾಗಡಿ ರಸ್ತೆ ಭಾಗದಲ್ಲಿ ಬಿಡಿಎಯ ನಾಡಪ್ರಭು ಕೆಂಪೇಗೌಡ ಬಡಾವಣೆ ಸಿದ್ಧಗೊಳ್ಳುತ್ತಿರುವುದರಿಂದ ಮೂರನೇ ಹಂತದ ಯೋಜನೆಯಲ್ಲಿ ಈ ಭಾಗಗಳನ್ನು ಸಂಪರ್ಕಿಸುವಂತೆ ವಿನ್ಯಾಸ ಮಾಡಬೇಕೆಂದು ಮನವಿ ಮಾಡಿದೆ.

ಮೆಟ್ರೋ ರೈಲು: ನೇರಳೆ-ಹಸಿರು ಮಾರ್ಗದಲ್ಲಿ ರೈಲು ಸಂಚಾರ ಹೆಚ್ಚಳಮೆಟ್ರೋ ರೈಲು: ನೇರಳೆ-ಹಸಿರು ಮಾರ್ಗದಲ್ಲಿ ರೈಲು ಸಂಚಾರ ಹೆಚ್ಚಳ

ಹೊಸೂರು ಭಾಗದ ಸರ್ಜಾಪುರ ರಸ್ತೆ ಭಾಗ, ದೊಡ್ಡನೆಕ್ಕುಂದಿ,ಕೋನದಾಸಪುರ ಭಾಗಗಳೂ ವಸತಿ ಪ್ರದೇಶಗಳಾಗಿ ಗುರುತಿಸಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಹಂತದ ಯೋಜನೆಗಳಿಗೆ ಈ ಭಾಗಗಳನ್ನು ಸೇರಿಸುವಂತೆ ಬಿಡಿಎ ಮನವಿ ಮಾಡಿದೆ.

English summary
Bengaluru Development Authority has submitted a proposal to Namma metro (BMRCL) to include Bidadi, Nadaprabhu Kempegowda layout and other outskirts areas into phase-3 Metro projects.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X