ಬಿಡದಿವರೆಗೂ ಮೆಟ್ರೋ ಸಂಪರ್ಕ ಕಲ್ಪಿಸುವಂತೆ ಬಿಡಿಎ ಮನವಿ
ಬೆಂಗಳೂರು, ಜನವರಿ 2 : ಬಿಡದಿ, ಕೆಂಪೇಗೌಡ ಬಡಾವಣೆ ಇರುವ ಪ್ರದೇಶಗಳನ್ನು ಮೂರನೇ ಹಂತದ ಮೆಟ್ರೋ ಯೋಜನೆಯಲ್ಲಿ ಸೇರಿಸುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಬಿಡಿಎ ಪ್ರಸ್ತಾವನೆ ಸಲ್ಲಿಸಿದೆ.
ಎರಡನೇ ಹಂತದ ಮೆಟ್ರೋ ಮಾರ್ಗ: ಹಳಿ ಅಳವಡಿಸಲು ಭರದ ಸಿದ್ಧತೆ
ಪ್ರಸ್ತುತ ಆರ್.ವಿ. ಕಾಲೇಜು ವರೆಗೆ 2 ನೇ ಹಂತದ ಮೆಟ್ರೋ ಸಂಪರ್ಕವಿದೆ. ಇದರಿಂದ ವಲಗೇರಹಳ್ಳಿ ಭಾಗದಲ್ಲಿರುವ ಬಿಡಿಎ ಫ್ಲ್ಯಾಟ್ ಪಡೆದವರಿಗೆ ಹೆಚ್ಚು ಅನುಕೂಲವಾಗುತ್ತಿದೆ. ಅಲ್ಲದೆ ಮೆಟ್ರೋ ಸಂಪರ್ಕ ಇರುವ ಪ್ರದೇಶಗಳಲ್ಲಿ ಹೆಚ್ಚು ಬೇಡಿಕೆಯೂ ಇದೆ.
ಕಣಿಮಿಣಿಕೆ, ಕೊಮ್ಮಘಟ್ಟದಲ್ಲಿಯೂ ಬಿಡಿಎ ವಿವಿಧ ಮಾದರಿಯ ವಸತಿ ಸಮುಚ್ಛಯಗಳನ್ನು ನಿರ್ಮಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಸಂಚಾರ ಅನುಕೂಲತೆ ದೃಷ್ಟಿಯಿಂದ ಮೆಟ್ರೋ ಸಂಪರ್ಕ ಕಲ್ಪಿಸಲು ಪ್ರಸ್ತಾವನೆ ಸಲ್ಲಿಸಿದೆ.
ಮೈಸೂರು ರಸ್ತೆ ಹಾಗೂ ಮಾಗಡಿ ರಸ್ತೆ ಭಾಗದಲ್ಲಿ ಬಿಡಿಎಯ ನಾಡಪ್ರಭು ಕೆಂಪೇಗೌಡ ಬಡಾವಣೆ ಸಿದ್ಧಗೊಳ್ಳುತ್ತಿರುವುದರಿಂದ ಮೂರನೇ ಹಂತದ ಯೋಜನೆಯಲ್ಲಿ ಈ ಭಾಗಗಳನ್ನು ಸಂಪರ್ಕಿಸುವಂತೆ ವಿನ್ಯಾಸ ಮಾಡಬೇಕೆಂದು ಮನವಿ ಮಾಡಿದೆ.
ಮೆಟ್ರೋ ರೈಲು: ನೇರಳೆ-ಹಸಿರು ಮಾರ್ಗದಲ್ಲಿ ರೈಲು ಸಂಚಾರ ಹೆಚ್ಚಳ
ಹೊಸೂರು ಭಾಗದ ಸರ್ಜಾಪುರ ರಸ್ತೆ ಭಾಗ, ದೊಡ್ಡನೆಕ್ಕುಂದಿ,ಕೋನದಾಸಪುರ ಭಾಗಗಳೂ ವಸತಿ ಪ್ರದೇಶಗಳಾಗಿ ಗುರುತಿಸಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಹಂತದ ಯೋಜನೆಗಳಿಗೆ ಈ ಭಾಗಗಳನ್ನು ಸೇರಿಸುವಂತೆ ಬಿಡಿಎ ಮನವಿ ಮಾಡಿದೆ.