ಕೈಕೊಂಡ್ರಹಳ್ಳಿ ಕೆರೆ ಒತ್ತುವರಿ ತೆರವುಗೊಳಿಸಲು ಬಿಬಿಎಂಪಿ ವಿಫಲ

ಬೆಂಗಳೂರು, ಸೆಪ್ಟೆಂಬರ್‌ 08: ಮಳೆನೀರು, ಚರಂಡಿಗಳ ಅತಿಕ್ರಮಣದ ಬಗ್ಗೆ ಬೆಂಗಳೂರು ಉಂಟಾಗಿರುವ ಪ್ರವಾಹವು ಗಮನ ಸೆಳೆಯುತ್ತಿದ್ದಂತೆ ಕೈಕೊಂಡ್ರಹಳ್ಳಿ ಕೆರೆಯ ಬಫರ್ ವಲಯವನ್ನು ಉಲ್ಲಂಘಿಸುವ ಕಟ್ಟಡಗಳ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ಆಪಾದನೆ ಕೇಳಿ ಬಂದಿದೆ.

ಎಸ್‌ಜೆಆರ್‌ ವಾಟರ್‌ಮಾರ್ಕ್‌ ಕಟ್ಟಡವನ್ನು ಕೆಡವಲು ಬಿಬಿಎಂಪಿ ಆದೇಶ ಹೊರಡಿಸಿ ನಾಲ್ಕು ವರ್ಷಗಳೇ ಕಳೆದಿದ್ದರೂ ಅಧಿಕಾರಿಗಳು ಆದೇಶ ಜಾರಿ ಮಾಡದೆ ತಪ್ಪಿಸಿಕೊಂಡಿದ್ದಾರೆ ಎಂಬ ಆಪಾದನೆ ಈಗ ಕೇಳಿ ಬಂದಿದೆ. ಮಹದೇವಪುರ ಪರಿಸರ ಸಂರಕ್ಷಣಾ ಮಟ್ಟು ಅಭಿವೃದ್ಧಿ ಸಮಿತಿಯವರು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT)ಗೆ ಈ ವಿಷಯವನ್ನು ಕೊಂಡೊಯ್ದ ನಂತರ, ಅಂದಿನ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಜನವರಿ 1, 2018 ರಂದು ಎಸ್‌ಜೆಆರ್‌ ವಾಟರ್‌ಮಾರ್ಕ್‌ಗೆ ನೀಡಲಾದ ಕಟ್ಟಡ ಪರವಾನಗಿ ಮತ್ತು ಆಕ್ಯುಪೆನ್ಸಿ ಪ್ರಮಾಣಪತ್ರವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಎನ್. ಮಂಜುನಾಥ್ ಪ್ರಸಾದ್ ತಮ್ಮ ಆದೇಶದಲ್ಲಿ ಎರಡು ನಿರ್ಮಾಣಗಳಲ್ಲಿ ಹಲವಾರು ಅವ್ಯವಹಾರಗಳನ್ನು ಗುರುತಿಸಿದ್ದಾರೆ. ಎಸ್‌ಜೆಆರ್ ವಾಟರ್‌ಮಾರ್ಕ್‌ನ ಸಂದರ್ಭದಲ್ಲಿ ಎಂಟು ಮೀಟರ್ ಡ್ರೈವ್‌ವೇ 30 ಮೀಟರ್ ಲೇಕ್ ಬಫರ್ ವಲಯದೊಳಗೆ ಇರುವುದರಿಂದ ಕಟ್ಟಡದ ಯೋಜನೆಯು ಹಸಿರು ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ತಿಳಿದು ಬಂದಿದೆ.

ಆಯುಕ್ತರಿಂದ ಪರವಾನಗಿ ರದ್ದು

ಆಯುಕ್ತರಿಂದ ಪರವಾನಗಿ ರದ್ದು

ಕೆರೆ ಬಫರ್ ವಲಯದೊಳಗೆ ಈ ನಿರ್ಮಾಣಗಳು ಕಟ್ಟಡದ ಯೋಜನೆ ಮತ್ತು ಪರವಾನಗಿ ಮಂಜೂರಾತಿಯು ವಲಯ ನಿಯಂತ್ರಣದ ಅಡಿಯಲ್ಲಿ ನಿಗದಿಪಡಿಸಿದ ಬಫರ್ ವಲಯ ಮಿತಿಗಳಿಗೆ ವಿರುದ್ಧವಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಮಳೆನೀರು ಚರಂಡಿಯನ್ನು (ಎಸ್‌ಡಬ್ಲ್ಯುಡಿ) ಅತಿಕ್ರಮಿಸಿದ ಕೆ ಎನ್ ಮೋಹನ್ ಎಂಬುವವರ ಕಟ್ಟಡದ ಯೋಜನೆ ಮತ್ತು ಪರವಾನಗಿಯನ್ನು ಆಯುಕ್ತರು ರದ್ದುಗೊಳಿಸಿದ್ದಾರೆ. ಸರ್ವೆ ಸಂಖ್ಯೆ 45/1 ಮತ್ತು 45/2 ರ ಮಾಲೀಕರು ದಕ್ಷಿಣ ಭಾಗದ ಗಡಿಯಲ್ಲಿರುವ ರಾಜಕಾಲುವೆ (ಎಸ್‌ಡಬ್ಲ್ಯೂಡಿ) ಮತ್ತು ಟ್ಯಾಂಕ್ ಬಂಡ್ ಅನ್ನು ಮರೆಮಾಡಿಕೊಂಡು ಅತಿಕ್ರಮಿಸಿದ್ದಾರೆ ಎಂದು ಅವರು ಹೇಳಿದ್ದಾರೆ

ಬಿಬಿಎಂಪಿ ಆಯುಕ್ತರ ಆದೇಶ ಪ್ರಶ್ನೆ

ಬಿಬಿಎಂಪಿ ಆಯುಕ್ತರ ಆದೇಶ ಪ್ರಶ್ನೆ

ಅತಿಕ್ರಮಣ ಹೇಗಿದೆಯೆಂದರೆ, ಸರ್ಜಾಪುರ ಮುಖ್ಯರಸ್ತೆಯ ದಕ್ಷಿಣ ಭಾಗದ ಜಮೀನುಗಳು ರಾಜಕಾಲುವೆ ಮತ್ತು ಕೆರೆ ವಲಯ ಮುಚ್ಚುವಂತೆ ಅಕ್ರಮಣ ಮಾಡಲಾಗಿದೆ. ಆಯುಕ್ತರಿಂದ ಲಿಖಿತ ಅನುಮತಿಯಿಲ್ಲದೆ ನಿರ್ಮಾಣವನ್ನು ಮುಂದುವರೆಸಿದೆ ಎಂದು ತೋರಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಎರಡೂ ಪಕ್ಷಗಳು ಕರ್ನಾಟಕ ಹೈಕೋರ್ಟ್‌ನಲ್ಲಿ ಬಿಬಿಎಂಪಿ ಆಯುಕ್ತರ ಆದೇಶವನ್ನು ಪ್ರಶ್ನಿಸಿ ತಡೆ ಪಡೆದಿದ್ದರೆ, ಸುಪ್ರೀಂ ಕೋರ್ಟ್ 2018 ರ ನವೆಂಬರ್‌ನಲ್ಲಿ ಹೈಕೋರ್ಟ್‌ನ ಆದೇಶದ ಕಾರ್ಯಾಚರಣೆಗೆ ತಡೆ ನೀಡಿ ಮಧ್ಯಂತರ ಆದೇಶವನ್ನು ನೀಡಿತು. ಬಿಬಿಎಂಪಿಗೆ ಹಾದಿ ಸುಗಮವಾಗಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.

ಬಿಬಿಎಂಪಿ ಕಾನೂನು ಸುವ್ಯವಸ್ಥೆಯಿಂದ ವಿಳಂಬ

ಬಿಬಿಎಂಪಿ ಕಾನೂನು ಸುವ್ಯವಸ್ಥೆಯಿಂದ ವಿಳಂಬ

ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ''ಸ್ಟೇ ಇಲ್ಲದ ಹೊರತು ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಂತೆ ಮುಖ್ಯಮಂತ್ರಿಗಳು ಸ್ಪಷ್ಟ ಸೂಚನೆ ನೀಡಿದ್ದಾರೆ. ಕೈಕೊಂಡ್ರಹಳ್ಳಿಯಲ್ಲಿನ ಉಲ್ಲಂಘನೆಗೆ ಸಂಬಂಧಿಸಿದಂತೆ ನಾನು ಮುಖ್ಯ ಎಂಜಿನಿಯರ್‌ಗಳಿಗೆ ವಿಷಯ ತಿಳಿಸಿದ್ದೇನೆ ಎಂದರು. ಎನ್‌ಜಿಟಿಯಲ್ಲಿ ಎಂಎಪಿಎಸ್‌ಎಎಸ್ ಅನ್ನು ಪ್ರತಿನಿಧಿಸಿದ್ದ ವಕೀಲ ಪಿ ರಾಮಪ್ರಸಾದ್, ಬಿಬಿಎಂಪಿ ಕಾನೂನು ಸುವ್ಯವಸ್ಥೆಯಿಂದ ನಿಂತಿದೆ ಎಂದು ತೋರಿಸಲು ಸ್ಪಷ್ಟ ಅವಕಾಶವಿದೆ ಎಂದು ಹೇಳಿದರು.

ನೋಯ್ಡಾ ಗೋಪುರ ಕೆಡವಿದಂತೆ ಕೆಡವಬೇಕು

ನೋಯ್ಡಾ ಗೋಪುರ ಕೆಡವಿದಂತೆ ಕೆಡವಬೇಕು

ಸುಪ್ರೀಂ ಕೋರ್ಟ್ ರಕ್ಷಣೆಗೆ ಬಂದರೂ ಬಿಬಿಎಂಪಿ ಉದಾಹರಣೆ ನೀಡಲು ವಿಫಲವಾಗಿದೆ. ಕೊಚ್ಚಿಯ ಮರಡು ಫ್ಲಾಟ್‌ಗಳು ಮತ್ತು ನೋಯ್ಡಾದ ಅವಳಿ ಗೋಪುರಗಳನ್ನು ಕೆಡವಿದಂತೆಯೇ ಬೆಂಗಳೂರಿನಲ್ಲಿರುವ ಕೆರೆಗಳು ಮತ್ತು ಎಸ್‌ಡಬ್ಲ್ಯೂಡಿಗಳನ್ನು ಅತಿಕ್ರಮಿಸುವ ಎಲ್ಲಾ ನಿರ್ಮಾಣಗಳನ್ನು ತೆಗೆದುಹಾಕಬೇಕು. ಕಾನೂನನ್ನು ಅನುಸರಿಸುವ ಜನರ ಮನೆಗಳು ಜಲಾವೃತವಾಗದಂತೆ ನೋಡಿಕೊಳ್ಳಿ ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+