ಶಿವಾನಂದ ಫ್ಲೈ ಓವರ್‌ನಲ್ಲಿ ಏರಿಳಿತವಿದೆ ಎಂದು ಒಪ್ಪಿಕೊಂಡ ಬಿಬಿಎಂಪಿ

ಬೆಂಗಳೂರು, ಆಗಸ್ಟ್‌ 24: ಶಿವಾನಂದ ಸರ್ಕಲ್‌ನಲ್ಲಿ ಫ್ಲೈಓವರ್‌ನ ಒಂದು ಬದಿಯನ್ನು ಸಾಮಾನ್ಯ ಸಂಚಾರಕ್ಕಾಗಿ ಪುನಃ ತೆರೆದ ಬಿಬಿಎಂಪಿ, ಮೇಲ್ಸೇತುವೆಯು ಏರಿಳಿತಗಳನ್ನು (ಅಸಮ ಮೇಲ್ಮೈ) ಹೊಂದಿದೆ ಎಂದು ಒಪ್ಪಿಕೊಂಡಿದೆ.

ಆದರೆ ಗುಣಮಟ್ಟ ಮತ್ತು ವಿಶೇಷಣಗಳ ಪ್ರಕಾರ ಕಾಮಗಾರಿಯ ಗುಣಮಟ್ಟವನ್ನು ಕಾಯ್ದುಕೊಂಡಿದೆ ಎಂದು ಹೇಳಿದೆ. ಫ್ಲೈ ಓವರ್‌ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶಕ್ಕೆ ಕಾರಣವಾದ ಈ ಮೇಲ್ಸೇತುವೆ ಕುರಿತು ಪ್ರಕಟವಾದ ವರದಿಗಳ ಹಿನ್ನೆಲೆಯಲ್ಲಿ ಕಾಮಗಾರಿಯ ಗುಣಮಟ್ಟದ ಬಗ್ಗೆ ಮೂರನೇ ವ್ಯಕ್ತಿಯ ಪರಿಶೀಲನೆ ನಡೆಸುವುದಾಗಿ ನಾಗರಿಕ ಸಂಸ್ಥೆ ಬಿಬಿಎಂಪಿ ಈಗ ಭರವಸೆ ನೀಡಿದೆ.

ಯಾವುದೇ ಹೊಸ ಡಾಂಬರಿನ ಮೇಲ್ಮೈಯಲ್ಲಿ ವಾಹನಗಳ ಚಲನೆಯಾದಾಗ, ಬಳಕೆಗೆ ಹಾಕಿದ ನಂತರ ಡಾಂಬರು ಸುಮಾರು 5 ಮಿಮೀ ವರೆಗೆ ಮತ್ತಷ್ಟು ಬಲಗೊಳ್ಳುತ್ತದೆ. ಆದ್ದರಿಂದ, ಫ್ಲೈಓವರ್‌ನ ಡಾಂಬರೀಕರಣದ ಕೆಲಸವನ್ನು 20 ಮೀ ಅಂತರದಲ್ಲಿರುವ ವಿಸ್ತರಣಾ ಕೀಲುಗಳ ಮಟ್ಟಕ್ಕಿಂತ 5 ಮಿಮೀ ಎತ್ತರದಲ್ಲಿ ನಿರ್ವಹಿಸಲಾಗಿದೆ.

ಶಿವಾನಂದ ಮೇಲ್ಸೇತುವೆಯಲ್ಲಿ ಉಬ್ಬುಗಳನ್ನು ಉಂಟುಮಾಡುವ ವಿಸ್ತರಣೆ ಜಾಯಿಂಟ್‌ಗಳಲ್ಲಿ ಏರಿಳಿತಗಳು ಕಂಡು ಬಂದಿವೆ. ಸುಮಾರು 15 ರಿಂದ 30 ದಿನಗಳ ಕಾಲ ಫ್ಲೈಓವರ್ ಬಳಸಿದ ನಂತರ ಏರಿಳಿತಗಳು ಕಡಿಮೆಯಾಗುತ್ತವೆ. ಈ ಸಮಸ್ಯೆಯನ್ನು ಹೊರತುಪಡಿಸಿ, ರಸ್ತೆ ಗುಣಮಟ್ಟವು ಉತ್ತಮ ಸ್ಥಿತಿದಲ್ಲಿದೆ ಎಂದು ಬಿಬಿಎಂಪಿಯ ಮುಖ್ಯ ಎಂಜಿನಿಯರ್ ಮಾಹಿತಿ ನೀಡಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹರೇ ಕೃಷ್ಣ ರಸ್ತೆ ಮತ್ತು ಕುಮಾರ ಕೃಪಾ ರಸ್ತೆ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಮಾನದಂಡದ ಪ್ರಕಾರ ಕೈಗೊಳ್ಳಲಾಗಿದೆ ಎಂದು ಹೇಳಿದೆ. ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಇನ್‌ಫ್ರಾ ಸಪೋರ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್‌ಗಳು ಮತ್ತು ಬ್ಯೂರೋ ವೆರಿಟಾಸ್‌ನ ಥರ್ಡ್ ಪಾರ್ಟಿ ಏಜೆನ್ಸಿ ಪರೀಕ್ಷಾ ವರದಿಗಳೊಂದಿಗೆ ಬಿಬಿಎಂಪಿಯಿಂದ ಇದರ ಗುಣಮಟ್ಟವನ್ನು ಖಾತ್ರಿಪಡಿಸಲಾಗಿದೆ.

ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ

ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ

ಪ್ರಸ್ತುತ ಮೇಲ್ಸೇತುವೆ ಕಾಮಗಾರಿ ಎಲ್ಲ ಹಂತಗಳಲ್ಲಿಯೂ ಪೂರ್ಣಗೊಂಡಿಲ್ಲ. ಆದರೆ ಸರ್ವಿಸ್ ರಸ್ತೆ ಕಾಮಗಾರಿಗೆ ಅವಕಾಶ ಕಲ್ಪಿಸಲು ಮೇಲ್ಸೇತುವೆಯ ಒಂದು ಬದಿಯಲ್ಲಿ ವಾಹನಗಳಿಗೆ ತಾತ್ಕಾಲಿಕವಾಗಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ರಸ್ತೆ ಕಾಮಗಾರಿ ಪ್ರಗತಿಯಲ್ಲಿ ಇದೆ. ನಾವು ಪ್ರಸ್ತುತ ಏರಿಳಿತಗಳನ್ನು ಅಧ್ಯಯನ ಮಾಡುತ್ತಿದ್ದೇವೆ. ಒಂದು ನಿರ್ದಿಷ್ಟ ಅವಧಿಯ ನಂತರವೂ ಏರಿಳಿತಗಳು ಮುಂದುವರಿದರೆ, ಅಗತ್ಯವಿದ್ದಲ್ಲಿ ಅದನ್ನು ತಗ್ಗಿಸಲು ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಬಿಬಿಎಂಪಿ ತಿಳಿಸಿದೆ.

ತಾಂತ್ರಿಕ ಸಲಹಾ ಸಮಿತಿಯಿಂದ ಸುಖಾಂತ್ಯ

ತಾಂತ್ರಿಕ ಸಲಹಾ ಸಮಿತಿಯಿಂದ ಸುಖಾಂತ್ಯ

ಈ ಹಿನ್ನೆಲೆಯಲ್ಲಿ ಕಾಮಗಾರಿಯ ಗುಣಮಟ್ಟದ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಇನ್ಫ್ರಾ ಸಪೋರ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್‌ಗಳಿಗೆ ಬಿಬಿಎಂಪಿ ಸೂಚನೆ ನೀಡಿದೆ. ಶಿವಾನಂದ ಮೇಲ್ಸೇತುವೆಗೆ ಕೇವಲ 4.5 ಮೀಟರ್‌ಗಳ ಕ್ಲಿಯರೆನ್ಸ್ ಮಾತ್ರ ಇದೆ ಎಂಬ ದೂರಿನ ಮೇರೆಗೆ ಬಿಬಿಎಂಪಿಯು ಫ್ಲೈಓವರ್‌ನ ಎತ್ತರವನ್ನು ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ತೆರವುಗೊಳಿಸಿ ಅದನ್ನು ಹೈಕೋರ್ಟ್ ಅನುಮೋದಿಸಿದೆ ಎಂದು ಹೇಳಿದೆ.

4.5 ಮೀಟರ್‌ಗಳ ಎತ್ತರಕ್ಕೆ ಕ್ಲಿಯರೆನ್ಸ್‌

4.5 ಮೀಟರ್‌ಗಳ ಎತ್ತರಕ್ಕೆ ಕ್ಲಿಯರೆನ್ಸ್‌

ಭಾರೀ ವಾಹನಗಳ ಸಂಚಾರವನ್ನು ಸಿಬಿಡಿ ಪ್ರದೇಶದಲ್ಲಿ ಮತ್ತು ಹೊರ ವರ್ತುಲ ರಸ್ತೆಯ ಪ್ರದೇಶದೊಳಗೆ ನಿರ್ಬಂಧಿಸಲಾಗಿದೆ. ಆದ್ದರಿಂದ ಒಆರ್‌ಆರ್‌ನ ಮಿತಿಯಲ್ಲಿ ನಿರ್ಮಿಸಲಿರುವ ಯಾವುದೇ ರಚನೆಗಳನ್ನು 4.5 ಮೀಟರ್‌ಗಳ ಎತ್ತರಕ್ಕೆ ಕ್ಲಿಯರೆನ್ಸ್‌ನೊಂದಿಗೆ ವಿನ್ಯಾಸಗೊಳಿಸಬೇಕು ಎಂದು ಟಿಎಕೆ
ಅಭಿಪ್ರಾಯಪಟ್ಟಿದೆ. ಅದರಂತೆ, ಎಲ್ಲಾ ಫ್ಲೈಓವರ್‌ಗಳು ಮತ್ತು ಅಂಡರ್‌ಪಾಸ್‌ಗಳನ್ನು 4.5 ಮೀಟರ್‌ಗಳ ಲಂಬವಾದ ಕ್ಲಿಯರೆನ್ಸ್‌ನೊಂದಿಗೆ ವಿನ್ಯಾಸಗೊಳಿಸಲಾಗುತ್ತಿದೆ ಎಂದು ಬಿಬಿಎಂಪಿ ತಿಳಿಸಿದೆ.

ಕಳಪೆ ಗುಣಮಟ್ಟದ ಕಾಮಗಾರಿ ಆರೋಪ

ಕಳಪೆ ಗುಣಮಟ್ಟದ ಕಾಮಗಾರಿ ಆರೋಪ

ಸಂಚಾರ ಪ್ರಾರಂಭವಾದ ಒಂದು ವಾರದ ನಂತರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಶಿವಾನಂದ ವೃತ್ತದಲ್ಲಿ ಉಕ್ಕಿನ ಮೇಲ್ಸೇತುವೆಯನ್ನು ಮುಚ್ಚಿತ್ತು. ಭಾನುವಾರ ಬಿಬಿಎಂಪಿಯು ಫ್ಲೈಓವರ್‌ನ ಎರಡೂ ಬದಿಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದು, ಕಳಪೆ ಗುಣಮಟ್ಟದ ಕಾಮಗಾರಿಯ ಬಗ್ಗೆ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+