ಬಿಬಿಎಂಪಿಯ ₹35 ಕೋಟಿ ಹಣದಲ್ಲಿ ಮರುಜೀವ ಪಡೆಯಲಿವೆ ಈ ಕೆರೆಗಳು
ಬೆಂಗಳೂರು, ಅಕ್ಟೋಬರ್ 30: ಬೆಂಗಳೂರಿನಲ್ಲಿರುವ ನೂರಾರು ಕೆರೆಗಳಿಗೆ ಜೀವ ಕಳೆ ತುಂಬಲು ಸಜ್ಜಾಗಿರುವ ಬಿಬಿಎಂಪಿ ಅದಕ್ಕೆಂದೆ ಕೋಟ್ಯಂತರ ರೂಪಾಯಿ ಅನುದಾನ ಹಂಚಿಕೆ ಮಾಡಿದೆ. ಈ ಮೂಲಕ ಬಿಬಿಎಂಪಿಯು ಇರುವ ಸಂಪನ್ಮೂಲಗಳನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ತೋರಿ ಬರುತ್ತಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಪ್ರಸಕ್ತ 2023-24ರ ಸಾಲಿನಲ್ಲಿ ನಗರದ ಒಟ್ಟು 174 ಕೆರೆಗಳು ಮತ್ತು 15 ಒಳಚರಂಡಿ ಸಂಸ್ಕರಣಾ ಘಟಕಗಳ (ಎಸ್ಟಿಪಿ) ನಿರ್ವಹಣೆಗೆ 35 ಕೋಟಿ ರೂಪಾಯಿ ಹಂಚಿಕೆ ಮಾಡಿದೆ. ಇದರಲ್ಲಿ ಕೆಲವು ಕೆರೆಗಳು ಅಭಿವೃದ್ಧಿಗೊಳ್ಳಲಿದ್ದರೆ, ಕೆಲವು ಮರು ಜೀವ ಪಡೆಯಲಿವೆ ಎಂದು ಡಿಎಚ್ ವರದಿ ಮಾಡಿದೆ.

ವಿಶೇಷವೆಂದರೆ ನಗರದ ಹೊರ ವಲಯದಲ್ಲಿರುವ ಕೆರೆಗಳಿಗೆ ಬಿಬಿಎಂಪಿ ಅಧಿಕ ಅನುದಾನ ನೀಡಿದೆ ಎಂಬುದು ಅಂಕಿ ಅಂಶಗಳಿಂದ ಗೊತ್ತಾಗಿದೆ. ಕೇಂದ್ರ ವ್ಯಾಪಾರ ಜಿಲ್ಲೆಗಳ (ಸಿಬಿಡಿ) ಪ್ರದೇಶಗಳಲ್ಲಿನ ಜಲ ಮೂಲಗಳಿಗೆ ಆದ್ಯತೆ ನೀಡಲಾಗುತ್ತಿದೆ. ಎಂಟು ವಲಯಗಳ ಪೈಕಿ ಮಹದೇವಪುರ ವಲಯ ವ್ಯಾಪ್ತಿಯ 53 ಕೆರೆಗಳು 9 ಕೋಟಿ ರೂ.ಪಡೆದಿವೆ.
ಬಿಬಿಎಂಪಿ ಗುರುತಿಸಿದ ಕೆರೆಗಳು ಇವು
ಅದೇ ರೀತಿ ಬೊಮ್ಮನಹಳ್ಳಿ ವಲಯದಲ್ಲಿ 42 ಕೆರೆಗಳು, ರಾಜರಾಜೇಶ್ವರಿ ನಗರದ 33, ಯಲಹಂಕದ 24 ಕೆರೆಗಳನ್ನು ಅಭಿವೃದ್ಧಿ ಯೋಜನೆಗೆ ಬಿಬಿಎಂಪಿ ಗುರುತಿಸಿದೆ. ಇನ್ನೂ ದೊಡ್ಡಬೊಮ್ಮಸಂದ್ರ, ಕೋಗಿಲು,ಕಚರಕನಹಳ್ಳಿ, ಯಲಹಂಕ, ದಾಸರಹಳ್ಳಿ, ಕಗ್ಗದಾಸಪುರದ ಕೆಲವು ಕೆರೆಗಳಿಗೆ ಬೇಲಿ ಹಾಕಲು, ದುರಸ್ತಿ ಕಾರ್ಯಗಳು ಇದೇ ಅನುದಾನ ವ್ಯಾಪ್ತಿಗೆ ಬರಲಿವೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 202 ಕೆರೆಗಳು ಇವೆ. ಇದರಲ್ಲಿ 19 ಕೆರೆಗಳು ಒತ್ತುವರಿಯಿಂದ ಮೂಲಕ ಕೆರೆಯ ಲಕ್ಷಣಗಳನ್ನು ಕಳೆದುಕೊಂಡಿವೆ. ಇವುಗಳೇನಾ ಕೆರೆಗಳು ಎಂಬಂತಿವೆ. ಹೀಗಾಗಿ 27 ಕೆರೆಗಳು ಪುನಶ್ಚೇತನ ಕಾಮಗಾರಿಗೆ ಹಣದ ಕೊರತೆಯಿಂದ ತೀವ್ರ ಸಂಕಷ್ಟದಲ್ಲಿವೆ. ಕೆರೆ ನಿರ್ವಹಣೆ ಚಟುವಟಿಕೆಗಳ ಮೇಲ್ವಿಚಾರಣೆಗೆ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲು 10 ಲಕ್ಷ ರೂಪಾಯಿ ವಿನಿಯೋಗಿಸಲಾಗುತ್ತಿದೆ.

ಉದ್ಯಾನ ಅಭಿವೃದ್ಧಿಗೂ ಹಣ ಬಿಡುಗಡೆ
ಇನ್ನೂ ರಾಜ್ಯ ಸರ್ಕಾರ ಕಳೆದ ವರ್ಷ ನಗರದ ಕೆರೆಗಳ ಅಭಿವೃದ್ಧಿಗೆ ಅನುದಾನ ಹಂಚಿಕೆ ಮಾಡಿತ್ತು. 1,240 ಉದ್ಯಾನವನಗಳ ನಿರ್ವಹಣೆಗೆ 15 ಕೋಟಿ ರೂಪಾಯಿ ಮೀಸಲಿಟ್ಟಿತ್ತು. ಬಿಬಿಎಂಪಿಯು ನಗರದಾದ್ಯಂತ 1,240 ನೆರೆಹೊರೆಯ ಉದ್ಯಾನವನಗಳ ವಾರ್ಷಿಕ ನಿರ್ವಹಣೆಗೆ 15 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ.
ಯಶವಂತಪುರ, ಯಲಹಂಕ, ಬೊಮ್ಮನಹಳ್ಳಿ, ಸಿವಿ ರಾಮನ್ ನಗರ, ಪದ್ಮನಾಭನಗರ ಮತ್ತು ಶಾಂತಿನಗರ ಕ್ಷೇತ್ರಗಳು ತಲಾ 60 ಕ್ಕೂ ಹೆಚ್ಚು ಉದ್ಯಾನವನಗಳಿವೆ. ಚಾಮರಾಜಪೇಟೆ (10), ಗಾಂಧಿನಗರ (21), ಕೆಆರ್ ಪುರಂ (21), ಚಿಕ್ಕಪೇಟೆ (22), ಪುಲಕೇಶಿನಗರ (22), ಮತ್ತು ಮಹದೇವಪುರ (23)ದಲ್ಲಿ ಅತೀ ಕಡಿಮೆ ಉದ್ಯಾನವನಗಳಿರುವ ಕ್ಷೇತ್ರಗಳಾಗಿವೆ.
ಇತ್ತೀಚೆಗೆ ಬೆಂಗಳೂರಿನ ನಾಗರಿಕ ಸಂಸ್ಥೆಯು ಸ್ವಯಂಸೇವಕರನ್ನು ನಗರದ ಕೆರೆಗಳು ಮತ್ತು ಉದ್ಯಾನವನಗಳನ್ನ ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಒತ್ತಾಯಿಸಿದ್ದರು. ಅದರ ಬೆನ್ನಲ್ಲೆ ಬಿಬಿಎಂಪಿ ಕೆರೆಗಳ ಅಭಿವೃದ್ಧಿಗೆ ಹಣ ನೀಡಿದೆ.
-
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
Property Mutation: ಆಸ್ತಿ ನೋಂದಣಿ ನಂತರ ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆ: ಸಚಿವ ಕೃಷ್ಣ ಬೈರೇಗೌಡ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
Karnataka: ಧಾರ್ಮಿಕ ಮೆರವಣಿಗೆ, ಜಯಂತಿಗಳಲ್ಲಿ DJ ಸದ್ದಿಗೆ ಬ್ರೇಕ್? 'ಐಟಂ ಸಾಂಗ್' ಬ್ಯಾನ್ ಮಾಡಲು ರಾಜ್ಯ ಸರ್ಕಾರ ಒಲವು -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
RCB: ಆರ್ಸಿಬಿಯಲ್ಲಿ ಜೋಶ್ ಹ್ಯಾಜಲ್ವುಡ್ ಸ್ಥಾನ ತುಂಬುವ ಆಟಗಾರ ಇವರೇ ನೋಡಿ -
ಶೆಲ್ ಬಂಕ್ನಲ್ಲಿ ಪೆಟ್ರೋಲ್ ದರ ಏರಿಕೆ: ಬೆಂಗಳೂರಿನಲ್ಲಿ 10 ದಿನಗಳಲ್ಲಿ 4.50 ರೂಪಾಯಿ ಹೆಚ್ಚಳ; ಇಲ್ಲಿದೆ ದರಪಟ್ಟಿ -
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್












Click it and Unblock the Notifications