ವೆಬ್ ಲೋಕಕ್ಕೆ ಕಾಲಿಟ್ಟ ಬಸವನಗುಡಿ ಸತೀಶ್ ಸ್ಟೋರ್ಸ್
ಬೆಂಗಳೂರು, ಜ.14: ಹಬ್ಬದ ಸಂದರ್ಭದಲ್ಲಿ ಡಿವಿಜಿ ರಸ್ತೆಯಲ್ಲಿ ಕಾಲಿಡಲು ಆಗುವುದಿಲ್ಲ ಎಂದು ಗೊಣಗಾಡುತ್ತಾ ಶಾಪಿಂಗ್ ಮಾಡುವ ಬೆಂಗಳೂರಿಗರಿಗೆ ಒಂದೊಳ್ಳೆ ಸುದ್ದಿ ಇಲ್ಲಿದೆ. ಬಸವನಗುಡಿಯ ಜನಪ್ರಿಯ ಮಳಿಗೆ ಸತೀಶ್ ಸ್ಟೋರ್ಸ್ ಈಗ ಆನ್ ಲೈನ್ ಪ್ರಪಂಚಕ್ಕೆ ಕಾಲಿಟ್ಟಿದೆ.
ಗಾಂಧಿ ಬಜಾರ್ ಸರ್ಕಲ್ ನಿಂದ ಅನತಿ ದೂರದಲ್ಲಿರುವ ಡಿವಿಜಿ ರಸ್ತೆಯ #2ನೇ ಅಂಗಡಿಯೇ ಸತೀಶ್ ಸ್ಟೋರ್. ಅರಿಶಿನ, ಕುಂಕುಮ, ಕ್ಯಾಲೆಂಡರ್, ಹೂ ಬತ್ತಿ, ಪೂಜಾ ಸಾಮಾಗ್ರಿಗಳು, ಅಲಂಕಾರಿಕ ವಸ್ತುಗಳು ಸೇರಿದಂತೆ ಇಡೀ ಅಂಗಡಿಯ ಬಗ್ಗೆ ವೆಬ್ ಸೈಟ್ ನಲ್ಲಿ ಮಾಹಿತಿ ಇದೆ. [ಆನ್ ಲೈನ್ ಶಾಪಿಂಗು ಎಂಬ ಮೋಹ, ದಾಹ]
ಮದುವೆ, ಹುಟ್ಟುಹಬ್ಬ ಮುಂತಾದ ಶುಭ ಸಂದರ್ಭಗಳಿಗೆ ಬೇಕಾದ ವಸ್ತುಗಳನ್ನು ಖರೀದಿಸಬಹುದು. ತಂಜಾವೂರು ಶೈಲಿ ಚಿತ್ರಕಲೆ, ರುದ್ರಾಕ್ಷಿಗಳು, ಜಾತಕ ಸೇರಿದಂತೆ ಎಲ್ಲವನ್ನು ಆನ್ ಲೈನ್ ಮೂಲಕ ಪಡೆದುಕೊಳ್ಳಬಹುದು ಎಂದು ಅಂಗಡಿ ಮಾಲೀಕರು ಹೇಳಿದರು.

ಇ-ಶಾಪಿಂಗ್: ಆನ್ ಲೈನ್ ನಲ್ಲಿ ತಮ್ಮ ಮಳಿಗೆಯ ಉತ್ಪನ್ನಗಳ ಬಗ್ಗೆ ಮಾಹಿತಿಯಷ್ಟೇ ನೀಡಿಲ್ಲ. ಗ್ರಾಹಕರು ಇ ಶಾಪಿಂಗ್ ಕೂಡಾ ಮಾಡಬಹುದು. ನೀವು ಆನ್ ಲೈನ್ ಮೂಲಕ ಖರೀದಿಸಿ ವಸ್ತುಗಳು ನಿಮ್ಮ ಮನೆಗೆ ತಲುಪಿಸುತ್ತಾರೆ. ಸದ್ಯಕ್ಕೆ ಹೋಂ ಡೆಲಿವರಿ ಸೌಲಭ್ಯ ಸ್ವಲ್ಪ ವಿಳಂಬವಾಗಿದ್ದು 2 ದಿನದೊಳಗೆ ನಿಮ್ಮ ವಸ್ತು ನಿಮ್ಮ ಕೈ ಸೇರಲಿದೆ. [ಭಾರತದ ಇ ಕಾಮರ್ಸ್ ಕ್ಷೇತ್ರಕ್ಕೆ ಬೃಹತ್ ಬಂಡವಾಳ]
ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಎಳ್ಳು ಬೆಲ್ಲ, ಸಕ್ಕರೆ ಅಚ್ಚು, ಪೂಜಾ ವಸ್ತುಗಳು ಇನ್ನಿತರ ವಸ್ತುಗಳನ್ನು ಆನ್ ಲೈನ್ ಮೂಲಕ ಖರೀದಿಸಬಹುದು. ಎಳ್ಳು ಬೆಲ್ಲ ರೆಡಿಮೇಟ್ ಮಿಸ್ಕ್ ಬೆಲೆ ಕೆಜಿಗೆ 250 ರು ಇದೆ ರೇಟ್ ಸ್ವಲ್ಪ ಜಾಸ್ತಿ ಎನಿಸಿದರೂ ಮನೆಯಲ್ಲೇ ಕುಳಿತು ಆರ್ಡರ್ ಮಾಡಿ ಪಡೆದುಕೊಳ್ಳಬಹುದು.

ವೆಬ್ ಸೈಟ್ ವಿಳಾಸ: http://satishstores.com/ ಹಾಗೂ http://satishstoresonline.com/online/
ವಿಳಾಸ: ಸತೀಶ್ ಸ್ಟೋರ್ಸ್ (ಫೇಸ್ ಬುಕ್ ಪುಟ ಇಲ್ಲಿದೆ)
#2, ಡಿ.ವಿ.ಜಿ ರಸ್ತೆ
ಗಾಂಧಿ ಬಜಾರ್
ಬೆಂಗಳೂರು-560 004
ಸಂಪರ್ಕ ಸಂಖ್ಯೆ: 90085 55999
ಹೋಂ ಡೆಲಿವರಿ : +91-80-2660 0405
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications