ರವಿಗೆ ಹಳ್ಳಿಗೆ ಹೋಗಿ ಹಣ್ಣು ಬೆಳೆಯುವ ಕನಸು!
ಪ್ರತಿದಿನ ಬಸವನಗುಡಿ ಕ್ಷೇತ್ರದಲ್ಲಿ 4 ರಿಂದ 6 ಗಂಟೆ ಓಡಾಟ ನಡೆಸಿ ಜನರ ಕುಂದುಕೊರತೆ ಆಲಿಸುವ ರವಿ ಸುಬ್ರಮಣ್ಯ ಅವರು ಕಳೆದ 10 ವರ್ಷಗಳಿಂದ 'ಸಂಕಲ್ಪ' ಎಂಬ ಸಂಸ್ಥೆಯನ್ನು ಕಟ್ಟಿದ್ದು, ಅದರ ಮುಖಾಂತರ ಸಮಾಜಸೇವೆಯಲ್ಲೂ ತೊಡಗಿದ್ದಾರೆ. ಸಂಸ್ಥೆಯ ಮುಖಾಂತರ ಮಹಿಳೆಯರಿಗೆ, ಮಕ್ಕಳ ಅಭ್ಯುದಯಕ್ಕಾಗಿ ಹೆಚ್ಚಿನ ಒತ್ತು ನೀಡಲಾಗಿದೆ. ಅಲ್ಲಿ ಉಚಿತ ಪಾಠ ಹೇಳಿಕೊಡುವುದು, ಮಹಿಳೆಯರಿಗಾಗಿ ವಿಶೇಷ ವಸ್ತು ಪ್ರದರ್ಶನ ಮುಂತಾದವನ್ನು ನಡೆಸಲಾಗುತ್ತದೆ.
ಇದಲ್ಲದೆ, ಹದಿನೈದು ದಿವಸಗಳಿಗೊಮ್ಮೆ ರೆವೆನ್ಯೂ ಅದಾಲತ್ ನಡೆಸುವುದು, ಪ್ರತಿ ತಿಂಗಳ ಮೂರನೇ ಶನಿವಾರ 'ಅಭಯ' ಎಂಬ ನಿವಾಸಿಗಳ ಕ್ಷೇಮಾಭ್ಯುದಯ ಸಂಸ್ಥೆಯ ಸಹಯೋಗದೊಂದಿಗೆ ಜನರ ಕುಂದುಕೊರತೆ ಆಲಿಸುವ ಕಾರ್ಯಕ್ರಮ ಕೂಡ ರವಿ ಸುಬ್ರಮಣ್ಯ ಪಾಲಿಸಿಕೊಂಡು ಬರುತ್ತಿದ್ದಾರೆ.
ಮನೆಗಳಿಂದ ಕಸಗಳನ್ನು ಸಂಗ್ರಹಿಸಲು ಗರ್ಭಿಣಿಯನ್ನು, ಅಶಕ್ತ ಮಹಿಳೆಯರನ್ನು ಬಿಬಿಎಂಪಿ ನಿಯೋಜಿಸಿದ್ದಕ್ಕೆ ಭಾರೀ ಬೇಸರ ವ್ಯಕ್ತಪಡಿಸುತ್ತಾರೆ ರವಿ ಸುಬ್ರಮಣ್ಯ. ಮಾನವೀಯತೆ ಇರುವವರು ಯಾರೂ ಇಂಥ ಕೆಲಸ ಮಾಡುವುದಿಲ್ಲ. ಮನೆಗಳಿಂದ ಕಸ ಸಂಗ್ರಹಿಸಲು ಟಿಪ್ಪರ್ ಅಥವಾ ಆಟೋಗಳನ್ನು ಬಳಸಬೇಕು. ನಂತರ ದೊಡ್ಡ ಲಾರಿಗೆ ವರ್ಗಾಯಿಸಬೇಕು. ಅಲ್ಲದೆ, ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ಕನ್ನು ಸಂಪೂರ್ಣವಾಗಿ ಬಸವನಗುಡಿಯಲ್ಲಿ ನಿಷೇಧಿಸಬೇಕು ಎಂಬುದು ರವಿಯವರ ಸಲಹೆ.

ಇಷ್ಟೆಲ್ಲ ಚಟುವಟಿಕೆಗಳಲ್ಲಿ ತೊಡಗಿರುತ್ತೀರಲ್ಲ, ಬಿಡುವಿನ ಸಮಯಕ್ಕಾದರೂ ಸಮಯ ಮೀಸಲಿಡುತ್ತೀರಾ ಅಂತ ಮಾನವ ಸಂಪನ್ಮೂಲ ವಿಷಯದಲ್ಲಿ ಎಂಬಿಎ ಪದವಿ ಪಡೆದಿರುವ ರವಿಯವರಿಗೆ ಕೇಳಿದರೆ, ಅಯ್ಯೋ ಅದಕ್ಕೆಲ್ಲ ಎಲ್ಲಿ ಸಮಯ, ಬಿಡುವಿಲ್ಲದ ರಾಜಕೀಯ ಜೀವನದಲ್ಲಿ ನಾನೇ ಕಳೆದುಹೋಗಿದ್ದೇನೆ ಎಂದು ನಗುತ್ತಾರೆ ರವಿ.
ಅಂದ ಹಾಗೆ ನಿಮಗೆ ಗೊತ್ತಿರಲಿ, ರವಿ ಸುಬ್ರಮಣ್ಯ ಅವರು ವೀಣಾ ಪಾರಂಗತರು. ಅಲ್ಲದೆ, ವೇದ (ಋಗ್ವೇದ) ಪಠಿಸುವ ಪರಿಪಾಠವೂ ಅವರಿಗಿದೆ. ಸಂಪೂರ್ಣವಾಗಿ ರಾಜಕೀಯದಲ್ಲಿ ಅವರು ಕಳೆದುಹೋಗಿದ್ದರೂ, ಮನದಲ್ಲೆಲ್ಲೋ ಬಿತ್ತನೆ ಮಾಡುತ್ತ ರೈತನಾಗುವ ಕನಸಿನ ಬೀಜವನ್ನು ಬಿತ್ತುತ್ತಿದ್ದಾರೆ. ಅಂದಹಾಗೆ, ಅವರ ಪಿತ್ರಾರ್ಜಿತ ಆಸ್ತಿ ಚಿಕ್ಕಮಗಳೂರಿನಲ್ಲಿದೆ. ಅಲ್ಲಿ, ಕಾಫಿ, ಮಾವು, ನಿಂಬೆ, ಸಪೋಟ, ಸೀಬೆ ಮುಂತಾದ ಹಣ್ಣಿನ ತೋಟವನ್ನು ಅಭಿವೃದ್ಧಿಪಡಿಸುವ ಚಿಂತೆಯಲ್ಲಿದ್ದಾರೆ. [ಫೇಸ್ ಬುಕ್ | ಟ್ವಿಟ್ಟರ್]
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications