ಬಸವನಗುಡಿ ಹೆರಿಟೇಜ್ ಕಾರಿಡಾರ್, ಏನಿದು?
ಮಲ್ಲೇಶ್ವರದಂತೆ ಬಸವನಗುಡಿ ಕೂಡ ಬೆಂಗಳೂರಿನ ಅತ್ಯಂತ ಪುರಾತನ ಪ್ರದೇಶ. ಜಯನಗರ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಬಸವನಗುಡಿ, ಬೆಂಗಳೂರಿನ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ರಾಜಧಾನಿ. ಮಾಸ್ತಿ, ನಿಸಾರ್, ಅನಕೃ, ಲಂಕೇಶ್, ಡಿವಿಜಿಯಂಥ ಘಟಾನುಘಟಿ ಲೇಖಕರು ಜೀವಿಸಿದ ಪ್ರದೇಶ ಒಂದೆಡೆಯಾದರೆ, ವೆಸ್ಟ್ ಆಂಜನೇಯ, ದೊಡ್ಡ ಗಣೇಶ, ಪರಿಷೆ ಬಸವಣ್ಣ, ರಾಮಾಂಜನೇಯ, 700 ವರ್ಷ ಹಳೆಯ ಗವಿಗಂಗಾಧರೇಶ್ವರ, ಕುಮಾರಸ್ವಾಮಿ ಮುಂತಾದ ದೇವರುಗಳಿಗೆ ಆಲಯವಾಗಿದೆ ಬಸವನಗುಡಿ. ಇನ್ನು ಬಂಡಿಮಹಾಕಾಳಿ, ಗಂಗಮ್ಮನಂಥ ಗುಡಿಗಳು ಲೆಕ್ಕವಿಲ್ಲದಷ್ಟು ಗಲ್ಲಿಗಲ್ಲಿಗಳಲ್ಲಿ ಸಿಗುತ್ತವೆ.
ಹೀಗಾಗಿ, ಬಸವನಗುಡಿಯನ್ನು ಹೆರಿಟೇಜ್ ಕಾರಿಡಾರ್ ಮಾಡಬೇಕೆಂಬುದು ರವಿ ಸುಬ್ರಮಣ್ಯ ಅವರ ಮಹತ್ವಾಕಾಂಕ್ಷೆಯ ಯೋಜನೆ. ಐಟಿಬಿಟಿಗಾಗಿ ಬೆಂಗಳೂರು ಹೆಸರಾದಂತೆ, ವೆಸ್ಟ್ ಆಂಜನೇಯನಿಂದ ಹಿಡಿದು 44ರಿಂದ 5 ಎಕರೆಗೆ ಇಳಿದಿರುವ ಕೆಂಪಾಂಬುದಿ ಕೆರೆಯವರೆಗೆ ಬಸವನಗುಡಿ ಕ್ಷೇತ್ರವನ್ನು ಹೆರಿಟೇಜ್ ಕಾರಿಡಾರ್ ಅನ್ನಾಗಿ ಮಾಡಿ ಜನಪ್ರಿಯಗೊಳಿಸಬೇಕು ಎಂಬುದು ಅವರು ಕನಸು. ಇಂಥ ಐತಿಹಾಸಿಕ ಸ್ಥಳಗಳನ್ನು ಬ್ಯೂಗಲ್ ರಾಕ್ ನಿಂದ ಹಿಡಿದು ಎಲ್ಲ ಪ್ರದೇಶಗಳನ್ನು ಪ್ರವಾಸಿಗರು ಸುತ್ತಲು ಅನುವಾಗುವಂತೆ ವ್ಯವಸ್ಥೆ ಮಾಡುವ ಯೋಜನೆಗೆ ರವಿ ಮುಂದಾಗಿದ್ದಾರೆ.

ಐಟಿಬಿಟಿ ಸಿಟಿಯಾದ ಬೆಂಗಳೂರಿಗೆ ವಿದೇಶಿಯರು ಮತ್ತು ದೇಶದ ಎಲ್ಲಕಡೆಯಿಂದ ಜನರು ಬರುತ್ತಾರೆ. ಅವರಿಗೆ ಬೆಂಗಳೂರು ಅಂದರೆ ಕಮರ್ಶಿಯಲ್ ಪ್ರದೇಶದ ಪರಿಚಯ ಮಾಡುವಂಥದ್ದಲ್ಲ. ಅವರಿಗೆ ನಮ್ಮ ಸಾಂಸ್ಕೃತಿಕ, ಧಾರ್ಮಿಕ ಬೆಂಗಳೂರಿನ ಪರಿಚಯ ಕೂಡ ಮಾಡಿಕೊಡಬೇಕು. ಅದಕ್ಕಾಗಿ ಬಸವನಗುಡಿಯನ್ನು ಹೆರಿಟೇಜ್ ಕಾರಿಡಾರನ್ನಾಗಿ ಪರಿವರ್ತಿಸಬೇಕೆಂಬ ಯೋಜನೆ ಹಾಕಿಕೊಳ್ಳಲಾಗಿದೆ.
ಬಿಬಿಎಂಪಿ ಆಯುಕ್ತರಾಗಿದ್ದಾಗ ಭರತ್ ಲಾಲ್ ಮೀನಾ ಅವರು ಕೂಡ ಈ ಕನಸಿಗೆ ಚಾಲನೆ ನೀಡಿದ್ದರು. ಅದನ್ನು ಸಾಕಾರಗೊಳಿಸುವ ಕೆಲಸಕ್ಕೆ ರವಿ ಸುಬ್ರಮಣ್ಯ ಮುಂದಾಗಿದ್ದಾರೆ. ಅಲ್ಲದೆ, ಕಾರ್ತೀಕ ಮಾಸದ ಕೊನೆಯ ಸೋಮವಾರ ನಡೆಯುವ ಐತಿಹಾಸಿಕ ಕಡ್ಲೆಕಾಯಿ ಪರಿಷೆಗೆ ಹೊಸ ರೂಪುರೇಷೆ ನೀಡುವ ಕುರಿತು ಕೂಡ ಚಿಂತನೆ ನಡೆದಿದೆ. ಬೆಂಗಳೂರು ದಕ್ಷಿಣ ಲೋಕಸಭೆ ಸಂಸದ ಅನಂತಕುಮಾರ್ ಅವರು ಕೂಡ ಕಡ್ಲೆಕಾಯಿ ಪರಿಷೆಗೆ ಅಂತಾರಾಷ್ಟ್ರೀಯ ಮಾನ್ಯತೆ ನೀಡುವ ಕುರಿತು ಮಾತನಾಡಿದ್ದಾರೆ. ಅನಂತ್ ಕುಮಾರ್ ಆಹ್ವಾನದ ಮೇರೆಗೆ ಸದ್ಯದಲ್ಲೆ ದೆಹಲಿಗೆ ಹೋಗುತ್ತಿದ್ದೇನೆ. ಹೆರಿಟೇಜ್ ಕಾರಿಡಾರಿಗೆ ಕೇಂದ್ರದ ಬೆಂಬಲ ಮತ್ತು ಸಹಕಾರ ಕುರಿತು ಚರ್ಚಿಸುವವರಿದ್ದೇವೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications