ಬಸವನಗುಡಿ ಹೆರಿಟೇಜ್ ಕಾರಿಡಾರ್, ಏನಿದು?
ಮಲ್ಲೇಶ್ವರದಂತೆ ಬಸವನಗುಡಿ ಕೂಡ ಬೆಂಗಳೂರಿನ ಅತ್ಯಂತ ಪುರಾತನ ಪ್ರದೇಶ. ಜಯನಗರ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಬಸವನಗುಡಿ, ಬೆಂಗಳೂರಿನ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ರಾಜಧಾನಿ. ಮಾಸ್ತಿ, ನಿಸಾರ್, ಅನಕೃ, ಲಂಕೇಶ್, ಡಿವಿಜಿಯಂಥ ಘಟಾನುಘಟಿ ಲೇಖಕರು ಜೀವಿಸಿದ ಪ್ರದೇಶ ಒಂದೆಡೆಯಾದರೆ, ವೆಸ್ಟ್ ಆಂಜನೇಯ, ದೊಡ್ಡ ಗಣೇಶ, ಪರಿಷೆ ಬಸವಣ್ಣ, ರಾಮಾಂಜನೇಯ, 700 ವರ್ಷ ಹಳೆಯ ಗವಿಗಂಗಾಧರೇಶ್ವರ, ಕುಮಾರಸ್ವಾಮಿ ಮುಂತಾದ ದೇವರುಗಳಿಗೆ ಆಲಯವಾಗಿದೆ ಬಸವನಗುಡಿ. ಇನ್ನು ಬಂಡಿಮಹಾಕಾಳಿ, ಗಂಗಮ್ಮನಂಥ ಗುಡಿಗಳು ಲೆಕ್ಕವಿಲ್ಲದಷ್ಟು ಗಲ್ಲಿಗಲ್ಲಿಗಳಲ್ಲಿ ಸಿಗುತ್ತವೆ.
ಹೀಗಾಗಿ, ಬಸವನಗುಡಿಯನ್ನು ಹೆರಿಟೇಜ್ ಕಾರಿಡಾರ್ ಮಾಡಬೇಕೆಂಬುದು ರವಿ ಸುಬ್ರಮಣ್ಯ ಅವರ ಮಹತ್ವಾಕಾಂಕ್ಷೆಯ ಯೋಜನೆ. ಐಟಿಬಿಟಿಗಾಗಿ ಬೆಂಗಳೂರು ಹೆಸರಾದಂತೆ, ವೆಸ್ಟ್ ಆಂಜನೇಯನಿಂದ ಹಿಡಿದು 44ರಿಂದ 5 ಎಕರೆಗೆ ಇಳಿದಿರುವ ಕೆಂಪಾಂಬುದಿ ಕೆರೆಯವರೆಗೆ ಬಸವನಗುಡಿ ಕ್ಷೇತ್ರವನ್ನು ಹೆರಿಟೇಜ್ ಕಾರಿಡಾರ್ ಅನ್ನಾಗಿ ಮಾಡಿ ಜನಪ್ರಿಯಗೊಳಿಸಬೇಕು ಎಂಬುದು ಅವರು ಕನಸು. ಇಂಥ ಐತಿಹಾಸಿಕ ಸ್ಥಳಗಳನ್ನು ಬ್ಯೂಗಲ್ ರಾಕ್ ನಿಂದ ಹಿಡಿದು ಎಲ್ಲ ಪ್ರದೇಶಗಳನ್ನು ಪ್ರವಾಸಿಗರು ಸುತ್ತಲು ಅನುವಾಗುವಂತೆ ವ್ಯವಸ್ಥೆ ಮಾಡುವ ಯೋಜನೆಗೆ ರವಿ ಮುಂದಾಗಿದ್ದಾರೆ.

ಐಟಿಬಿಟಿ ಸಿಟಿಯಾದ ಬೆಂಗಳೂರಿಗೆ ವಿದೇಶಿಯರು ಮತ್ತು ದೇಶದ ಎಲ್ಲಕಡೆಯಿಂದ ಜನರು ಬರುತ್ತಾರೆ. ಅವರಿಗೆ ಬೆಂಗಳೂರು ಅಂದರೆ ಕಮರ್ಶಿಯಲ್ ಪ್ರದೇಶದ ಪರಿಚಯ ಮಾಡುವಂಥದ್ದಲ್ಲ. ಅವರಿಗೆ ನಮ್ಮ ಸಾಂಸ್ಕೃತಿಕ, ಧಾರ್ಮಿಕ ಬೆಂಗಳೂರಿನ ಪರಿಚಯ ಕೂಡ ಮಾಡಿಕೊಡಬೇಕು. ಅದಕ್ಕಾಗಿ ಬಸವನಗುಡಿಯನ್ನು ಹೆರಿಟೇಜ್ ಕಾರಿಡಾರನ್ನಾಗಿ ಪರಿವರ್ತಿಸಬೇಕೆಂಬ ಯೋಜನೆ ಹಾಕಿಕೊಳ್ಳಲಾಗಿದೆ.
ಬಿಬಿಎಂಪಿ ಆಯುಕ್ತರಾಗಿದ್ದಾಗ ಭರತ್ ಲಾಲ್ ಮೀನಾ ಅವರು ಕೂಡ ಈ ಕನಸಿಗೆ ಚಾಲನೆ ನೀಡಿದ್ದರು. ಅದನ್ನು ಸಾಕಾರಗೊಳಿಸುವ ಕೆಲಸಕ್ಕೆ ರವಿ ಸುಬ್ರಮಣ್ಯ ಮುಂದಾಗಿದ್ದಾರೆ. ಅಲ್ಲದೆ, ಕಾರ್ತೀಕ ಮಾಸದ ಕೊನೆಯ ಸೋಮವಾರ ನಡೆಯುವ ಐತಿಹಾಸಿಕ ಕಡ್ಲೆಕಾಯಿ ಪರಿಷೆಗೆ ಹೊಸ ರೂಪುರೇಷೆ ನೀಡುವ ಕುರಿತು ಕೂಡ ಚಿಂತನೆ ನಡೆದಿದೆ. ಬೆಂಗಳೂರು ದಕ್ಷಿಣ ಲೋಕಸಭೆ ಸಂಸದ ಅನಂತಕುಮಾರ್ ಅವರು ಕೂಡ ಕಡ್ಲೆಕಾಯಿ ಪರಿಷೆಗೆ ಅಂತಾರಾಷ್ಟ್ರೀಯ ಮಾನ್ಯತೆ ನೀಡುವ ಕುರಿತು ಮಾತನಾಡಿದ್ದಾರೆ. ಅನಂತ್ ಕುಮಾರ್ ಆಹ್ವಾನದ ಮೇರೆಗೆ ಸದ್ಯದಲ್ಲೆ ದೆಹಲಿಗೆ ಹೋಗುತ್ತಿದ್ದೇನೆ. ಹೆರಿಟೇಜ್ ಕಾರಿಡಾರಿಗೆ ಕೇಂದ್ರದ ಬೆಂಬಲ ಮತ್ತು ಸಹಕಾರ ಕುರಿತು ಚರ್ಚಿಸುವವರಿದ್ದೇವೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications