ಬಿಬಿಎಂಪಿ ಪಾಪಗಳನ್ನೆಲ್ಲ ತೊಳೆಯಬೇಕಿದೆ : ರವಿ
ಬಿಬಿಎಂಪಿಯಲ್ಲಿರುವ ಸದ್ಯದ ವ್ಯವಸ್ಥೆ, ಭ್ರಷ್ಟಾಚಾರ, ಶಾಸಕನಿಗೆ ಏನೂ ಮಾಡಲಾಗದಂಥ ಸ್ಥಿತಿ ನೋಡಿ ಬೇಸತ್ತು ಹೋಗಿರುವ ರವಿ ಸುಬ್ರಮಣ್ಯ ಅವರು, ಆಡಳಿತ ಯಂತ್ರವನ್ನು ಸರಿದಾರಿಗೆ ತರಲು ಇಡೀ ಬಿಬಿಎಂಪಿಯನ್ನು ಬೇಲೌಟ್ ಮಾಡಿ ಹೊಸ ತಂಡವನ್ನು ಕಟ್ಟಬೇಕು, ಭ್ರಷ್ಟತೆ ತಡೆಯಲು ಹೊಸ ಕಾನೂನನ್ನು ರೂಪಿಸಬೇಕು, ಎಲ್ಲ 28 ಶಾಸಕರಿಗೆ ಅಭಿವೃದ್ಧಿ ಕೈಗೊಳ್ಳಲು ಮುಕ್ತಹಸ್ತ ಕೊಡಬೇಕು ಎಂದು ಹೇಳಿದರು.
ವಸ್ತುಸ್ಥಿತಿ ಏನೆಂದರೆ, ಬೆಂಗಳೂರಿನ ಸಮಸ್ಯೆಗಳು ಕರ್ನಾಟಕ ವಿಧಾನಸಭೆಯಲ್ಲಿ ಚರ್ಚೆಯೇ ಆಗುವುದಿಲ್ಲ. ಅಕ್ಷರಶಃ ಶಾಸಕರ ಮಾತಿಗೆ ಕಿಮ್ಮತ್ತಿಲ್ಲ. ಹೀಗಾಗಿ, ನವೆಂಬರ್ 25ರಂದು ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಈ ಕುರಿತು ಮನವಿ ಸಲ್ಲಿಸಿದ್ದೇನೆ. ಡಿಸೆಂಬರ್ 9ರಿಂದ ಬೆಳಗಾವಿ ಸುವರ್ಣ ವಿಕಾಸಸೌಧದಲ್ಲಿ ಆರಂಭವಾಗುವ ಹನ್ನೆರಡು ದಿನಗಳ ಚಳಿಗಾಲದ ಅಧಿವೇಶನದಲ್ಲಿ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಚರ್ಚೆಯಾಗುವ ಸಂಭವವಿದೆ ಎಂದರು.

ಇಡೀ ಬೆಂಗಳೂರಿನ ಸಮಸ್ಯೆಯ ಮೂಲ ಅಡಗಿರುವುದೇ ಬಿಬಿಎಂಪಿಯಲ್ಲಿ. ಬಿಬಿಎಂಪಿಗೆ ಎರಡೂವರೆ ಸಾವಿರ ಕೋಟಿ ಆದಾಯವಿರುವಾಗ ಒಂಬತ್ತು ಸಾವಿರ ಕೋಟಿ ರು. ಬಜೆಟ್ ಮಂಡಿಸುತ್ತದೆ. ಅಭಿವೃದ್ಧಿಗೆ ಎಲ್ಲಿಂದ ಬಂಡವಾಳ ತರುತ್ತದೆ? ಇಡೀ ವ್ಯವಸ್ಥೆಯಲ್ಲಿ ಗಬ್ಬುವಾಸನೆ ತುಂಬಿಕೊಂಡಿದೆ, ಉಸಿರುಗಟ್ಟುವ ವಾತಾವರಣ ಮನೆಮಾಡಿದೆ. ಬೆಂಗಳೂರಿನ ಅಭಿವೃದ್ಧಿ ಬಿಬಿಎಂಪಿಯ ಸ್ಥಾಯಿ ಸಮಿತಿಯ ಹಿಡಿತದಲ್ಲಿದೆ. ಬೆಂಗಳೂರಿನ 198 ವಾರ್ಡುಗಳ ಪ್ರತಿನಿಧಿಗಳ ಜೇಬಿನಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ.
ಪರಿಸ್ಥಿತಿ ಹೀಗಿರುವಾಗ, ಗೃಹ ನಿರ್ಮಾಣ ಅಕ್ರಮ, ನಕಲಿ ಪ್ರಮಾಣಪತ್ರಗಳ ಹಾವಳಿ, ಆಸ್ತಿ ತೆರಿಗೆ ಅಕ್ರಮಗಳು ಬೆಂಗಳೂರನ್ನು ಅಭಿವೃದ್ಧಿ ಪಥದಿಂದ ಹಿಂದಕ್ಕೆ ಎಳೆಯುತ್ತಿವೆ. ಇದು ಯಾವ ಸ್ಥಿತಿ ತಲುಪಿದೆಯೆಂದರೆ, 'ಮಾಮೂಲು' ಕೊಡದಿದ್ದರೆ ಇಲ್ಲಿ ಯಾವ ಕೆಲಸವೂ ನಡೆಯುವುದಿಲ್ಲ. ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಭ್ರಷ್ಟಾಚಾರ ತಡೆಯಲು ಸಹಕರಿಸಬೇಕು. ಆದರೆ, ಅದಾಗುತ್ತಿಲ್ಲ, ಇದು ನಿಜಕ್ಕೂ ವಿಪರ್ಯಾಸದ ಸಂಗತಿ ಎಂದು ಶಾಸಕರೇ ಬೇಸರದಿಂದ ತಲೆ ಅಲ್ಲಾಡಿಸಿದರು.
ಮತ್ತೊಂದು ಸಂಗತಿಯೆಂದರೆ, ಮೂರು ಬಾರಿ ಟೆಂಡರ್ ಕರೆದರೂ ಬಿಬಿಎಂಪಿಯ ಯಾವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಕಾಂಟ್ರಾಕ್ಟರುಗಳು ಮುಂದೆ ಬರುತ್ತಿಲ್ಲ. ಮಾರಾಟ ತೆರಿಗೆ, ಆಸ್ತಿ ತೆರಿಗೆ ಮತ್ತಿತರ ಹಾಳುಮೂಳು ತೆರಿಗೆಗಳನ್ನು ಕಟ್ಟಿ ಲಾಭ ಮಾಡಿಕೊಳ್ಳಲು ಯಾರು ತಾನೆ ಮುಂದೆ ಬರುತ್ತಾನೆ ಎಂದು ರವಿ ಪ್ರಶ್ನಿಸುತ್ತಾರೆ. ಕಾಮಗಾರಿ ಪೂರ್ತಿಗೊಳಿಸಿದ್ದಕ್ಕೆ ಹಣ ಕೂಡ ಸರಿಯಾಗಿ ಕಾಂಟ್ರಾಕ್ಟರುಗಳಿಗೆ ಸಂದಾಯವಾಗುತ್ತಿಲ್ಲ ಎಂದು ಅವರು ಸಮಸ್ಯೆಯ ಗಂಟನ್ನು ಬಿಚ್ಚಿಟ್ಟರು.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications