ಬಾಹುಬಲಿ-2 ಸಿನಿಮಾ ಟಿಕೆಟ್ ಬೆಲೆ 400, 500, 600: ಇದೆಂಥ ಹಗಲು ದರೋಡೆ?
ಬಾಹುಬಲಿ-2 ಸಿನಿಮಾದ ಟಿಕೆಟ್ ಮುಂಗಡ ಬುಕ್ಕಿಂಗ್ ಅರಂಭಿಸಿದ್ದು, 400, 500 ಹಾಗೂ 600 ರುಪಾಯಿ ವಸೂಲಿ ಮಾಡಲಾಗುತ್ತಿದೆ. ಇಂಥ ಹಗಲು ದರೋಡೆಯನ್ನು ಪ್ರಶ್ನಿಸುವವರಿಲ್ಲವೆ?
ಬೆಂಗಳೂರು, ಏಪ್ರಿಲ್ 25: ಮಲ್ಟಿಪ್ಲೆಕ್ಸ್ ಗಳಲ್ಲಿ ಸದ್ಯದಲ್ಲೇ ನಿಯಮ ಜಾರಿಯಾಗುತ್ತದೆ. ಗರಿಷ್ಠ ದರ 200 ರುಪಾಯಿ ಆಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿಳ್ಳೆ, ಚಪ್ಪಾಳೆ ಹಾಕಿ ಸಂಭ್ರಮ ಪಟ್ಟೆವು. ಆದರೆ ಏಪ್ರಿಲ್ 28ರಂದು ಬಿಡುಗಡೆ ಆಗಲಿರುವ ಬಾಹುಬಲಿ-2 ಸಿನಿಮಾಗೆ ಮುಂಗಡ ಬುಕ್ಕಿಂಗ್ ಶುರುವಾಗಿದ್ದು, ಟಿಕೆಟ್ ದರಗಳನ್ನು ಗಮನಿಸಿದ್ದೀರಾ?
ಊರ್ವಶಿ ಚಿತ್ರಮಂದಿರದಲ್ಲಿ 400, 500 ಹಾಗೂ 600 ರುಪಾಯಿ ಇದೆ. ಹಾಗೂ ಹಲವು ಪ್ರದರ್ಶನದ ಟಿಕೆಟ್ ಗಳು ಮಾರಾಟವಾಗಿವೆ. ರಾಜರಾಜೇಶ್ವರಿ ನಗರದ ಗೋಪಾಲನ್ ಮಾಲ್ ನಲ್ಲಿ ಎಲ್ಲ ಪ್ರದರ್ಶನದ ದರಗಳಿಗೆ 400 ರುಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ಅಷ್ಟೇ ಅಲ್ಲ. ಒಂದೇ ತೆರೆಯ ಸಾಮಾನ್ಯ ಚಿತ್ರಮಂದಿರಗಳಲ್ಲೂ ಟಿಕೆಟ್ ಬೆಲೆ 200, 300 ರುಪಾಯಿ ನಿಗದಿ ಮಾಡಿದ್ದಾರೆ.[ಹೋರಾಟಗಾರರೇ, ಬಾಹುಬಲಿ ಪ್ರಕರಣ ಮುಗೀತಲ್ಲ? ಈಗ ಇತ್ತ ಗಮನ ಹರಿಸಿ...]

ರಜನೀಕಾಂತ್ ಸಿನಿಮಾ ಕಬಾಲಿಗೂ ಹೀಗೇ ಆಗಿತ್ತು. ಬಾಹುಬಲಿ-2 ಸಿನಿಮಾ ದೊಡ್ಡ ಬಜೆಟ್ ನದೇ ಇರಬಹುದು. ಹಾಗಂತ ತೀರಾ ಕಡಿಮೆ ಬಜೆಟ್ ನಲ್ಲಿ ಆಗಿರುವ ಸಿನಿಮಾಗೆ ಟಿಕೆಟ್ ದರ ಮಾಮೂಲಿಗಿಂತ ಕಡಿಮೆ ತೆಗೆದುಕೊಳ್ತಾರಾ? ಅದೇ ರೀತಿ ಸಾವಿರಾರು ಕೋಟಿ ವೆಚ್ಚದಲ್ಲಿ ತಯಾರಾಗಿರುವ ಫಾಸ್ಟ್ ಅಂಡ್ ಫ್ಯೂರಿಯಸ್-8 ಗೆ ಟಿಕೆಟ್ ದರ ಎಷ್ಟು ನಿಗದಿ ಮಾಡಬೇಕು.

ಇಂಥ ವಿಚಾರಗಳು ಬಂದಾಗ ಪ್ರೇಕ್ಷಕರ ಪರವಾಗಿ ಯಾರಾದರೂ ಧ್ವನಿ ಎತ್ತಲೇಬೇಕಲ್ವ? ತಮಿಳು ನಿರ್ದೇಶಕ ಶಂಕರ್, ತೆಲುಗು ನಿರ್ದೇಶಕ ರಾಜಮೌಳಿ ಸಿನಿಮಾ ಹಾಗೂ ರಜನೀಕಾಂತ್ ಅಭಿನಯದ ಸಿನಿಮಾ ಎಂದು ಟಿಕೆಟ್ ಬೆಲೆಯನ್ನು ಹೀಗೆ ಏಕಾಏಕಿ ಏರಿಸುವುದು ಎಷ್ಟು ಸರಿ?[ಕನ್ನಡಿಗರ ಕ್ಷಮೆಕೋರಿ ಸತ್ಯರಾಜ್ ಆಡಿರುವ ಮಾತುಗಳಿವು!]

ಊರ್ವಶಿ ಚಿತ್ರಮಂದಿರದಲ್ಲಿ ಫಾಸ್ಟ್ ಅಂಡ್ ಫ್ಯೂರಿಯಸ್ ಸಿನಿಮಾ ಪ್ರದರ್ಶನವಾಗುತ್ತಿದೆ. ಅದರ ಟಿಕೆಟ್ ದರವನ್ನು ಆನ್ ಲೈನ್ ನಲ್ಲಿ ಗಮನಿಸಿ, 150, 200 ಹಾಗೂ 100 ರುಪಾಯಿ ಇದೆ. ಆದರೆ ಬಾಹುಬಲಿ ಬಿಡುಗಡೆ ಆಗುತ್ತಿದೆ ಅಂದಾಕ್ಷಣ ಏಕಿಷ್ಟು ಬೆಲೆ ನಿಗದಿಪಡಿಸಲಾಗಿದೆ ಎಂದು ಪ್ರಶ್ನಿಸಬೇಕಿದೆ.

ದೊಡ್ಡ ಬಜೆಟ್ ನ ಸಿನಿಮಾ ಮಾಡಿ ಎಂದು ಯಾವ ಪ್ರೇಕ್ಷಕರೂ ಕೇಳುವುದಿಲ್ಲ. ಪ್ರೇಕ್ಷಕರಲ್ಲಿ ಕುತೂಹಲ ಇದೆ ಎಂಬ ಕಾರಣಕ್ಕೆ ಮನಸ್ಸಿಗೆ ಬಂದಂತೆ ದರ ಏರಿಸುವುದನ್ನು ಕೇಳುವವರೇ ಇಲ್ಲವಲ್ಲಾ? ನಾವೆಂಥ ಅಸಹಾಯಕರು, ಕೈಲಾಗದವರು..
-
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರುಗೆ ಆರ್ ಅಶೋಕ್ ತೀವ್ರ ಟೀಕೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
ಲವ್ ಮಾಕ್ಟೇಲ್ 3 ವಿವಾದ: ನನ್ನ ಕಥೆಯ ದ್ವಿತೀಯಾರ್ಧ ನಕಲು: ಸಿನಿಮಾ ಬರಹಗಾರರೇ ಎಚ್ಚರ ಎಂದ ನಿರ್ದೇಶಕ ರಾಘವೇಂದ್ರ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Dhurandhar 2: ಬಾಕ್ಸ್ ಆಫೀಸ್ನಲ್ಲಿ 'ಧುರಂಧರ್ 2' ಸುನಾಮಿ: 3 ದಿನಕ್ಕೆ 500 ಕೋಟಿ ಕ್ಲಬ್ ಸೇರಿದ ರಣವೀರ್ ಸಿಂಗ್ ಸಿನಿಮಾ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Aditya Dhar: ರಣವೀರ್ ಸಿಂಗ್ ಹಿಂದಿಕ್ಕಿ IMDb ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ 'ಧುರಂಧರ್ 2' ನಿರ್ದೇಶಕ ಆದಿತ್ಯ ಧರ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್












Click it and Unblock the Notifications