ಕೋವಿಡ್-19 ಸಂದರ್ಭದಲ್ಲಿ ಯಾವ ಔಷಧ ಸೇಲ್? ಪತ್ತೆಗೆ APP
ಬೆಂಗಳೂರು, ಸೆ.1: ಕೋವಿಡ್ -19 ಸೋಂಕುಗಳನ್ನು ನಿಯಂತ್ರಿಸುವ ಪೂರ್ವಭಾವಿ ಕ್ರಮವಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ, ಶೀತ, ಜ್ವರ, ನೋಯುತ್ತಿರುವ ಗಂಟಲು, ಕೆಮ್ಮು ಇತ್ಯಾದಿಗಳಿಗೆ ಔಷಧಿಗಳನ್ನು ಖರೀದಿಸುವ ಜನರ ದಾಖಲೆಯನ್ನು ಇಡುವುದು ಔಷಧಾಲಯಗಳು ಮತ್ತು ವೈದ್ಯಕೀಯ ಮಳಿಗೆಗಳಿಗೆ ಕಡ್ಡಾಯವಾಗಿದೆ. ಈಗ ಈ ಕೆಲಸಗಳು ಇನ್ನಷ್ಟು ಸರಳವಾಗಿಸಲು ಉಚಿತ ಆ್ಯಂಡ್ರಾಯ್ಡ್ ಆ್ಯಪ್ ಅನ್ನು ಪರಿಚಯಿಸಲಾಗಿದೆ.
ಆರೋಗ್ಯ ಸಚಿವ ಬಿ.ಶ್ರೀರಾಮುಲು ಮತ್ತು ಎಚ್ಸಿಜಿ ಆಸ್ಪತ್ರೆಯ ಮುಖ್ಯಸ್ಥ ಡಾ.ವಿಶಾಲ್ ರಾವ್ ಮಂಗಳವಾರ "AnekammPos" (ಅನೆಕಾಮ್ಪೋಸ್) ಆ್ಯಪ್ ಬಿಡುಗಡೆಗೊಳಿಸಿದರು.
ಈ ಆ್ಯಪ್ ಅನ್ನು ಔಷಧಾಲಯ ಮತ್ತು ವೈದ್ಯಕೀಯ ಮಳಿಗೆಗಳು ಡಿಜಿಟಲ್ ವಿಧಾನದ ಮೂಲಕ ಎಲ್ಲಾ ಮಾರಾಟಗಳ ಮಾಹಿತಿ ಇಡಬಹುದು ಮತ್ತು ಈ ದತ್ತಾಂಶವನ್ನು ಇತರ ರಾಜ್ಯಗಳೊಂದಿಗೆ ಸುಲಭವಾಗಿ ಹಂಚಿಕೊಳ್ಳಬಹುದು. ಈ ಆ್ಯಪ್ ತುಂಬಾ ಸರಳ, ಸುಭದ್ರ ಮತ್ತು ಬಳಸಲು ಸುಲಭ. ದತ್ತಾಂಶಗಳು ಕ್ಲೌಡ್ನಲ್ಲಿ ಭದ್ರವಾಗಿ ಶೇಖರಣೆಯಾಗಲಿದೆ ಮತ್ತು ಮಳಿಗೆಗಳು ಪ್ರತಿನಿತ್ಯ ರಾಜ್ಯಗಳಿಗೆ ವರದಿ ಸಲ್ಲಿಸಬಹುದು.

"ಭಾರತವು ಸಾಕಷ್ಟು ಸಣ್ಣ ವೈದ್ಯಕೀಯ ಮಳಿಗೆಗಳನ್ನು ಹೊಂದಿದೆ ಮತ್ತು ಮಾರಾಟವನ್ನು ಡಿಜಿಟಲ್ ರೀತಿಯಲ್ಲಿ ಪತ್ತೆಹಚ್ಚಲು ಅವರಿಗೆ ಸಮರ್ಥನೀಯ ತಂತ್ರಜ್ಞಾನವಿಲ್ಲ" ಎಂದು ಅನೆಕಾಮ್ ಸ್ಥಾಪಕ ಮತ್ತು ಪ್ರವರ್ತಕ ವೆಂಕಟ್ ನಲ್ಲಪತಿ ಅಭಿಪ್ರಾಯಪಟ್ಟಿದ್ದಾರೆ. ಇದು ಉಚಿತ ಆ್ಯಪ್ ಆಗಿದ್ದು, ಡೇಟಾವನ್ನು ತ್ವರಿತವಾಗಿ ಮತ್ತು ಸುಲಭವಾಗಿ ಸಂಗ್ರಹಿಸಲು ನೆರವಾಘುತ್ತದೆ. ಈ ಅಪ್ಲಿಕೇಶನ್ ಬಳಸಲು ಪ್ರಾರಂಭಿಸಿದ ನಂತರ ಹೆಚ್ಚಿನ ಕಾಗದ ಆಧಾರಿತ ರಿಪೋಸ್ಟ್ ಗಳ ಅಗತ್ಯವಿಲ್ಲ. ಅಲ್ಲದೆ, ಇದು ಅನೇಕ ವರದಿಗಳನ್ನು ರಚಿಸಲು ಮತ್ತು ವಿವಿಧ ಪಾವತಿಗಳನ್ನು ಸ್ವೀಕರಿಸಲು ಅನುವು ಮಾಡಿಕೊಡುತ್ತದೆ.
ಕೋವಿಡ್ -19 ಪರಿಸ್ಥಿತಿಯ ನಂತರವೂ, ಸರ್ಕಾರಗಳು ಈ ದತ್ತಾಂಶ ಸಂಗ್ರಹಿಸುವ ಪ್ರಕ್ರಿಯೆಯನ್ನು ಮುಂದುವರಿಸಬಹುದು. ಅನೆಕಾಮ್ಹಾಸ್ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದ್ದು, ಇದನ್ನು ಮಳಿಗೆಗಳಿಗೆ ಉಚಿತ ಪಿಒಎಸ್ ವ್ಯವಸ್ಥೆಯಾಗಿ ಬಳಸಬಹುದು. ಅನೆಕಾಮ್ ಕಳೆದ ಕೆಲವು ವರ್ಷಗಳಿಂದ ಈ ಕ್ಷೇತ್ರದಲ್ಲಿದ್ದಾರೆ ಮತ್ತು ಪ್ರಸ್ತುತ ಸಾವಿರಾರು ವಿಶ್ವಾಸಾರ್ಹ ವ್ಯಾಪಾರಿಗಳು ಈ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದಾರೆ. ಆನ್ಲೈನ್ ಆದೇಶದ ವೈಶಿಷ್ಟ್ಯವೂ ಶೀಘ್ರದಲ್ಲೇ ಸಕ್ರಿಯಗೊಳಿಸಲಾಗುವುದು.

ಅನೆಕಾಮ್ ಅನ್ನು ಪ್ರಸ್ತುತ ಭಾರತದಲ್ಲಿ 5,000 ಕ್ಕೂ ಹೆಚ್ಚು ವ್ಯಾಪಾರಿಗಳು ಬಳಸುತ್ತಿದ್ದಾರೆ. ಉಚಿತ ಅನೆಕಮ್ ಆ್ಯಪ್ ಅನ್ನು ಬಳಸಿಕೊಂಡು ವ್ಯಾಪಾರಿಗಳು ತಮ್ಮ ಅಂಗಡಿಯನ್ನು ನಿರ್ವಹಿಸಲು ಸಾಕಷ್ಟು ಹಣ, ಸಮಯ ಮತ್ತು ಶ್ರಮವನ್ನು ಉಳಿಸುತ್ತಿದ್ದಾರೆ. ಇದರಿಂದ ಜಿಎಸ್ಟಿ ಪಾವತಿ ಕೂಢ ಸುಲಭವಾಗಿದೆ. "ನಮ್ಮ ಅಪ್ಲಿಕೇಶನ್ ಪ್ರತಿ ವ್ಯವಹಾರಕ್ಕೆ ಹೊಂದಿಕೊಳ್ಳಲು ಕ್ರಿಯಾತ್ಮಕವಾಗಿರುವುದರಿಂದ, ಔಷಧಾಲಯಗಳು, ಆಸ್ಪತ್ರೆಗಳು, ಶಾಲೆಗಳು, ರೆಸ್ಟೋರೆಂಟ್, ಸಲೂನ್, ಪೆಟ್ರೋಲ್ ಬಂಕ್, ಚಿಲ್ಲರೆ ಅಂಗಡಿಗಳು ಇತ್ಯಾದಿಗಳಲ್ಲಿ ತ್ವರಿತ ಮತ್ತು ಸುಲಭವಾಗಿ ಬಳಸಬಹುದು" ಎಂದು ಅನೆಕಾಮ್ನ ಮುಖ್ಯ ಮಾರುಕಟ್ಟೆ ಅಧಿಕಾರಿ ಅನುರಾಗ್ ಎಸ್ ವಿವರಿಸುತ್ತಾರೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications