B-Khata: 15 ದಿನದಲ್ಲಿ ಎ-ಖಾತಾ ಭರವಸೆ ಎಲ್ಲಿ?, ಹಣ ಕಟ್ಟಿ ರಶೀದಿಗೆ ಪಾಲಿಕೆ ಕಚೇರಿಗೆ ಅಲೆಯುತ್ತಿರುವ ನಾಗರಿಕರು
ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಆಸ್ತಿಗಳ ಪರಿವರ್ತನೆಯಲ್ಲಿ ಉಂಟಾಗುವ ತೊಂದರೆ ನಿವಾರಣೆಗೆ ಸರ್ಕಾರ ಬಿ-ಖಾತಾ ಗಳನ್ನು ನಿಯಮಗಳಡಿ ಪರಿವರ್ತಿಸಿ ಎ-ಖಾತಾ ನೀಡುವ ಉಪ್ರಕಮ ಆರಂಭಿಸಿತ್ತು. ನವೆಂಬರ್ನಲ್ಲಿ ಶುರುವಾದ ಈ ಕಾರ್ಯಕ್ರಮಕ್ಕೆ ಒಂದೆರಡು ವಾರಗಳ ಹಿಂದಷ್ಟೇ ಎ- ಖಾತಾ ವಿತರಣೆ ಮಾಡಲಾರಂಭಿಸಿದೆ. ಇನ್ನೂ ಅರ್ಜಿ ಹಾಕಿ 1.67 ಲಕ್ಷ ರೂಪಾಯಿ ಪಾವತಿಸಿದಗೂ ಸಹ ಅರ್ಜಿ ಸ್ಟೇಟಸ್ ಬದಲಾಗಿಲ್ಲ. ಹಣ ಪಾವತಿ ರಶೀದಿ, ಅರ್ಜಿ ಸ್ಟೇಟಸ್ ಅಪ್ಡೇಟ್ ನೀಡದೇ ಪಾಲಿಕೆ ಸಿಬ್ಬಂದಿ ಸಾರ್ವಜನಿಕರನ್ನು ಸತಾಯಿಸುತ್ತಿರುವುದು ಬೆಳಕಿಗೆ ಬಂದಿದೆ.
ಅನಧಿಕೃತ ಆಸ್ತಿಗಳ ಬಿ-ಖಾತಾ ವನ್ನು ಕಾನೂನು ಬದ್ಧಗೊಳಿಸಲು, ಮಾರಾಟ, ನೋಂದಣಿ ಇನ್ನಿತರ ಅವಕಾಶಗಳಿಗೆ ಅನುಕೂಲವಾಗುವಂತೆ ಎ-ಖಾತಾ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ. ಇದಕ್ಕಾಗಿ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆದರೆ ಅರ್ಜಿ ಹಾಕಿದವರ ಪೈಕಿ ಹಲವರು ಒಂದಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲಿ ವಾರ್ಡ್ 161ರ ವ್ಯಾಪ್ತಿಗೆ ಬರುವ ಹೊಸಕೆರೆಹಳ್ಳಿ ನಿವಾಸಿ ಎಮ್. ಶ್ರೀನಿವಾಸ್ ಅವರು ಒಬ್ಬರು.

ಶುಲ್ಕ ಕಟ್ಟಿದ್ದಕ್ಕೆ ರಶಿದಿಯೇ ಇಲ್ಲ, ಅಧಿಕಾರಿಗಳ ನಿರ್ಲಕ್ಷ್ಯ
'ನಮ್ಮ ಬಿ-ಖಾತಾ ಸ್ವತ್ತಿನ ಮನೆಗೆ ಎ-ಖಾತಾಗೆ ವರ್ಗಾವಣೆ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದೇನೆ. ಈ ಸ್ವತ್ತು ನನ್ನ ಪತ್ನಿ ಸ್ವಾತಿ ಎನ್.ಕೆ. ಹೆಸರಿನಲ್ಲಿ ಇದೆ. ಕಳೆದ ಶುಕ್ರವಾರ, ಅಂದರೆ ಫೆಬ್ರವರಿ 12ರಂದು ನಿಯಮದಂತೆ ಶೇ.5ರಷ್ಟು ಮೊತ್ತವನ್ನು 1,67,771.45 (ಒಂದು ಲಕ್ಷದ ಅರವತ್ತೇಳು ಸಾವಿರದ ಏಳು ನೂರಾ ಎಪ್ಪತ್ತೊಂದು) ರೂಪಾಯಿ ಆನ್ ಲೈನ್ ಮೂಲಕ ಪಾವತಿ ಮಾಡಿದ್ದೇನೆ. ಆದರೆ ಏಳು ದಿನಗಳ ನಂತರವೂ ಆ ಪಾವತಿಯು 'ಪೆಂಡಿಂಗ್' ಎಂಬ ಸ್ಟೇಟಸ್ ತೋರಿಸುತ್ತಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪಾಲಿಕೆ ಕಚೇರಿಗೆ ತೆರಳಿ ಸಿಬ್ಬಂದಿ, ಅಧಿಕಾರಿಗಳನ್ನು ಪ್ರಶ್ನಿಸಿದರೂ ನನಗೆ ಯಾವುದೇ ಸ್ಪಷ್ಟತೆಯೇ ಸಿಗುತ್ತಿಲ್ಲ. ಹಾಗಾದರೆ ಅರ್ಜಿ ವಿಲೇವಾರಿ, ಹಣ ಪಾವತಿ ಸಂದರ್ಭದಲ್ಲಿ, ಖಾತಾ ವಿತರಣೆ ಪ್ರಕ್ರಿಯೆ ವೇಳೆ ಪಾಲಿಕೆ ಹೊಣೆಗಾರರಲ್ಲವೇ. ಅರ್ಜಿ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಲು ಸರ್ಕಾರ ಸಹಾಯವಾಣಿ, ಇತರ ವ್ಯವಸ್ಥೆ ಮಾಡಿಕೊಂಡಿಲ್ಲವೇ? ಎಂದು ಅವರು ಪಶ್ನಿಸಿದ್ದಾರೆ. ನಮ್ಮ ಹಣ ಎಲ್ಲಿ ಹೋಯಿತು, ಮರಳಿ ಕೈ ಸೇರುತ್ತಾ? ಅಥವಾ ಪಾಲಿಕೆ ರಶೀದಿ ನೀಡುತ್ತಾ? ಯಾವುದಕ್ಕೂ ಸ್ಪಷ್ಟತೆ ಇಲ್ಲದಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ವಾರ ಕಳೆದರೂ ಹಣ ಪಾವತಿ ಪೆಂಡಿಂಗ್
ಅರ್ಜಿ ಸಲ್ಲಿಕೆ ವೇಳೆ ಪಾವತಿಸಿದ್ದ ಹಣವು ನಮ್ಮ ಖಾತೆಯಿಂದ ಡೆಬಿಟ್ ಆಗಿದೆ. ಆದರೆ ಆ ಮೊತ್ತಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕಡೆಯಿಂದ ಯಾವುದೇ ರಸೀದಿ ಜನರೇಟ್ ಆಗಿಲ್ಲ. ಆ ಹಣವು ಆನ್ ಲೈನ್ ಸ್ಟೇಟಸ್ ಪೆಂಡಿಂಗ್ ಅಂತಲೇ ತೋರಿಸುತ್ತಿದೆ. ಇಷ್ಟು ದೊಡ್ಡ ಮೊತ್ತ ಹೀಗೆ ಒಂದು ವಾರ ಕಳೆದರೂ ಯಾವ ಸ್ಥಿತಿಯಲ್ಲಿದೆ ಎಂಬುದು ಗೊತ್ತಾಗುತ್ತಿಲ್ಲ. ಇನ್ನು ಯಾರು ಈ ಸಮಸ್ಯೆಯನ್ನು ಬಗೆಹರಿಸಬಹುದು ತಿಳಿಯುತ್ತಿಲ್ಲ' ಎಂದು ಅವರು ಆತಂಕ ವ್ಯಕ್ತಪಡಿಸಿದರು. ಇದರೊಂದಿಗೆ ಅವರು ಹಣ ಪಾವತಿಸಿದ್ದು ಸೇರಿ ಕೆಲವು ದಾಖಲೆಗಳನ್ನು ಹಿಡಿದು ಕಚೇರಿಗೆ ಅಲೆದರೂ, ಸಿಬ್ಬಂದಿಯಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರು ತೊಂದರೆ ಅನುಭವಿಸುಂತಾಗಿದೆ' ಎಂದು ಅವರು ದೂರಿದರು.
ಪಾಲಿಕೆ ಅಧಿಕಾರಿಗಳೇ ಸಮಸ್ಯೆಗೆ ಪರಿಹಾರ ಕೊಡಿ?
'ಹೊಸಕೆರೆ ಹಳ್ಳಿಯ ನಮ್ಮ ಆಸ್ತಿಯ ಇಪಿಐಡಿ ಸಂಖ್ಯೆ- 2320169004. ಅದರ ಆಸ್ತಿ ತೆರಿಗೆ ಪಾವತಿ ಸಂಖ್ಯೆ- 8000188789, ಇನ್ನೂ ಪೇ ಯು ಮೂಲಕ ಪಾವತಿಸಿದ ಶುಲ್ಕ ಪಾವತಿಸಿದ ಐಡಿ ಸಂಖ್ಯೆ 27277109848 ಜೊತೆಗೆ ಒಂದಷ್ಟು ಸ್ಕ್ರೀನ್ ಶಾಟ್ ಗಳನ್ನು ಹಂಚಿಕೊಂಡಿದ್ದಾರೆ. ಪರಿಹಾರಕ್ಕಾಗಿ ಪಾಲಿಕೆಗೆ ಇ-ಮೇಲ್ ಸಹ ಮಾಡಿದ್ದಾಗಿ' ಅವರು ತಿಳಿಸಿದ್ದಾರೆ. ಇದು ಇವರೊಬ್ಬ ಸಮಸ್ಯೆಯಲ್ಲ, ಹೊಸ ನಿವೇಶನಗಳಿಗೆ ಎ-ಖಾತಾ ನೀಡದಿರುವುದು, ಸಕಾಲಕ್ಕೆ ಬಿ-ಖಾತಾಗಳು ಎ ಖಾತಾ ಆಗಿ ಪರಿವರ್ತನೆ ಆಗದಿರುವುದು ಸೇರಿ ಹಲವು ಸಮಸ್ಯೆಗಳನ್ನು ಕೆಲವು ಎದುರಿಸುತ್ತಿದ್ದಾರೆ.
'ಜನಸಾಮಾನ್ಯರಿಗಾಗಿ ಜಾರಿಗೆ ತಂದ ಯೋಜನೆಯನ್ನು ನಂಬಿ ಅರ್ಜಿ ಸಲ್ಲಿಸಿದ್ದೇವೆ. ದೊಡ್ಡ ಮೊತ್ತದ ಹಣವನ್ನು ಪಾವತಿಸಿದ್ದೇವೆ. ಹಣ ಕಟ್ಟಿ ಎ ಖಾತಾ ವಿತರಣೆ ಎದರು ನೋಡುತ್ತಿದ್ದ ನಮಗೆ ಆತಂಕ ಶುರುವಾಗಿದೆ. ನಮ್ಮ ವಾರ್ಡ್ ವ್ಯಾಪ್ತಿಯ ಎಆರ್ಒಯಿಂದ ಹಿಡಿದು, ಜಿಬಿಎ ಕೇಂದ್ರ ಕಚೇರಿವರೆಗೆ ಅಲೆದರೂ ಯಾರೊಬ್ಬರು ಇದಕ್ಕೆ ಸರಿಯಾದ ಉತ್ತರ ನೀಡುತ್ತಿಲ್ಲ. ತಾವು ಇದಕ್ಕೆ ಜವಾಬ್ದಾರರಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಇನ್ನೂ ಸ್ವಲ್ಪ ದಿನ ಕಾಯಿರಿ ಎನ್ನುತ್ತಿದ್ದಾರೆ. ಸಿಬ್ಬಂದಿ ಮುಖದಲ್ಲಿ ಪ್ರಶ್ನೆ ಕಾಣುತ್ತದೆಯೇ ಹೊರತು ಪರಿಹಾರವಲ್ಲ' ಎಂದು ಅವರು ಬೇಸರ ಹೊರ ಹಾಕಿದರು.
15 ದಿನದಲ್ಲಿ ಎ ಖಾತಾ ನೀಡಬೇಕು?
ಡಿಸಿಎಂ ಡಿಕೆ ಶಿವಕುಮಾರ್ ಅವರು ಕಳೆದ ಅಕ್ಟೋಬರ್ ತಿಂಗಳಲ್ಲಿ '100 ದಿನ ಅಭಿಯಾನ'ಕ್ಕೆ ಚಾಲನೆ ನೀಡಿದ್ದಾರೆ. ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಬಿ-ಖಾತಾ ಆಸ್ತಿ ಮಾಲೀಕರು ನಿಗದಿತ ಹಣ ಪಾವತಿಸಿ ಅರ್ಜಿ ಸಲ್ಲಿಸಿದರೆ ಅವರಿಗೆ 15 ದಿನಗಳಲ್ಲಿ ಎ ಖಾತಾ ವಿತರಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದು ಕೆಲವರ ಪಾಲಿಗೆ ಭರವಸೆಯಾಗಿಯೇ ಉಳಿದಿದೆ. ಅರ್ಜಿ ಸಲ್ಲಿಸಲು ನೀವು ಕಚೇರಿಗೆ ಹೋಗಬೇಕಿಲ್ಲ. ಮನೆಯಲ್ಲಿ ಕೂತೆ ಅರ್ಜಿ ಸಲ್ಲಿಸಿ, ಹಣ ಪಾವತಿಸಿದರೆ ಪರಿವರ್ತನೆಗೊಂಡ ಎ-ಖಾತಾ ನಿಮ್ಮ ಕೈ ಸೇರುತ್ತದೆ ಎಂದಿದ್ದರು. ಮಾತ್ರವಲ್ಲದೇ ಈ ಸಂಬಂಧ ಅಧಿಕಾರಿಗಳಿಗೆ ಒಂದಷ್ಟು ನಿರ್ದೇಶನ ನೀಡಿದ್ದರು.
.@BBMPCOMM I have paid aamount of ₹1.67 Lakhs for A-Khata conversion (EPID: 2320169004) on Feb 13. Money is gone from my bank, but BBMP portal shows 'Pending'. No response from ARO office. Requesting immediate intervention. @DKShivakumar @BBMP_IT @PayUIndia #NammaBengaluru #BBMP pic.twitter.com/FFPczo5cL3
— Srinivasa (@sreekabeer) February 18, 2026
ಅರ್ಜಿದಾರರಿಗೆ ಸೂಕ್ತ ಸಹಾಯ, ನೆರವು ಸಿಗಬೇಕು
ಯೋಜನೆಗೆ ಚಾಲನೆ ನೀಡಿದ ಬಳಿಕ ಸಾಕಷ್ಟು ಜನರು ಅರ್ಜಿ ಸಲ್ಲಿಸಿದ್ದಾರೆ. ಆಸ್ತಿಯ ಶೇ.5ರಷ್ಟು ಶುಲ್ಕ ಪಾವತಿ ಬೃಹತ್ ಮೊತ್ತವಾಗುತ್ತದೆ ಎಂದು ಒಂದಷ್ಟು ದೂರುಗಳು ಕೇಳಿ ಬಂದವು. ಹೀಗಿದ್ದರು ಅಷ್ಟು ಹಣ ಕಟ್ಟಿದವರಿಗೆ ಸರಿಯಾಗಿ ಎ ಖಾತಾ ಸಿಗುತ್ತಿಲ್ಲ. ಖಾತಾಗಳಿಗೆ ಸಂಬಂಧಿಸಿದಂತೆ ಅರ್ಜಿದಾರರು ಅರ್ಜಿ, ಹಣದ ಸ್ಟೇಟಸ್ ತಿಳಿಯಲು ಸಂಪರ್ಕಿಸಲು ಸಹಾಯವಾಣಿ, ಸಿಬ್ಬಂದಿಯಿಂದ ಸಹಾಯ ಸಿಗುವ ವ್ಯವಸ್ಥೆ ಮಾಡಬೇಕಿದೆ.
-
Property: ಖಾತಾ ಎಂದರೇನು, ಇ, ಬಿ - ಎ ಖಾತಾಗಳ ವ್ಯತ್ಯಾಸ, ಆಸ್ತಿದಾರರಿಗೆ ಹೇಗೆ ಲಾಭ ಇಲ್ಲಿದೆ ಸಂಪೂರ್ಣ ವಿವರ -
Bengaluru Property: ಆಸ್ತಿ ತೆರಿಗೆ ಬಾಕಿದಾರರಿಗೆ ಜಿಬಿಎ ಶಾಕ್: 61 ಆಸ್ತಿಗಳ ಹರಾಜು ಮಾರ್ಚ್ 6ಕ್ಕೆ ಘೋಷಣೆ -
ಬೆಂಗಳೂರು ಆಡಳಿತ ಬಿಬಿಎಂಪಿಯಿಂದ ಜಿಬಿಎಗೆ: 5 ಪಾಲಿಕೆಗಳ ರಚನೆ, ಹೊಸ ಪ್ರದೇಶಗಳ ಸೇರ್ಪಡೆಯಿಂದ ರಿಯಲ್ ಎಸ್ಟೇಟ್ಗೆ ಬಂಪರ್ -
ರಶ್ಮಿಕಾ ಮೊದಲ ಸಿನಿಮಾದಲ್ಲಿ ನಾನು ಹೀರೋ, ನೀನು ಬಾಲಿವುಡ್ಗೆ ಪಕ್ಕಾ ಹೋಗ್ತೀಯ ಎಂದಿದ್ದೆ: ನಟ ತ್ರಿವಿಕ್ರಮ್ -
ಇರಾನ್ ಸುಪ್ರೀಂ ಯತೊಲ್ಲಾ ಅಲಿ ಖಮೇನಿ ಅಂತ್ಯ: ವಿಶ್ವದ ಮೇಲೆ 5 ಪರಿಣಾಮ ಸಾಧ್ಯತೆ: ಆಶಿಶ್ ಸಾರಡ್ಕ ಬರಹ -
Thalapathy Vijay: 400 ಕೋಟಿ ಆಸ್ತಿಗೆ ಒಡತಿ, ಲಂಡನ್ ಬೆಡಗಿ: ಯಾವ ಸಿನಿಮಾಗೂ ಕಡಿಮೆ ಇಲ್ಲ ದಳಪತಿ ವಿಜಯ್-ಸಂಗೀತಾ ಲವ್ ಸ್ಟೋರಿ -
ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಹೇಗಿದ್ರು ನೋಡಿ ರಶ್ಮಿಕಾ ಮಂದಣ್ಣ, ವಿಡಿಯೋ ವೈರಲ್ -
Sanju Samson: ವೆಸ್ಟ್ ಇಂಡೀಸ್ ವಿರುದ್ಧ ಅಬ್ಬರ: ತೆಗಳಿದ ಬಾಯಲ್ಲೇ ಸಂಜು ಸ್ಯಾಮ್ಸನ್ಗೆ ಗೌತಮ್ ಗಂಭೀರ್ ಶಹಭಾಸ್ಗಿರಿ -
Lunar Eclipse 2026:ನಾಳೆ ಕೇತುಗ್ರಸ್ತ ಚಂದ್ರಗ್ರಹಣ: ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ದರ್ಶನದ ಸಮಯ ಬದಲು, ಗ್ರಹಣ ಶಾಂತಿ ಹೋಮ -
Horoscope March 2: ಈ ರಾಶಿಯವರಿಗೆ ಸಕಾರಾತ್ಮಕ ಪ್ರಗತಿ, ಮೇಷ-ಮೀನ ರಾಶಿಯವರೆಗೆ ಇಂದಿನ ದಿನ ಭವಿಷ್ಯ -
ಮಧ್ಯಪ್ರಾಚ್ಯದಲ್ಲಿ ವಿಮಾನಗಳ ಸಂಚಾರ ವ್ಯತ್ಯಯ: ಕರ್ನಾಟಕದ ನಾಗರಿಕರಿಗೆ ಸರ್ಕಾರ ನೆರವು -
Gold Rate : ಆಭರಣ ಪ್ರಿಯರಿಗೆ ಬಿಗ್ ಶಾಕ್; ಭಾರಿ ಏರಿಕೆ ಕಂಡ ಚಿನ್ನ- ಬೆಳ್ಳಿ ದರ, ಇಲ್ಲಿದೆ ಇಂದಿನ ಬೆಲೆ ಪಟ್ಟಿ -
Iran Vs America, Israel ಯುದ್ಧ ತೀವ್ರ: ಗಲ್ಫ್ ರಾಷ್ಟ್ರಗಳಿಗೂ ವ್ಯಾಪಿಸಿದ ಸಂಕಷ್ಟ; ಈ ಕ್ಷಣದ 10 ಪ್ರಮುಖ ಬೆಳವಣಿಗೆಗಳು -
ಯುದ್ಧದ ನಡುವೆಯೂ ಸರ್ವಧರ್ಮ ಸಮನ್ವಯತೆ ಸಂದೇಶ: ನಮ್ ಭಾರತ ಅಂದ್ರೆ ಹೀಗೆ ಅಂತಾ ವಿಶ್ವಕ್ಕೆ ಸಾರಿದ ಸಂಜು ಸ್ಯಾಮ್ಸನ್ -
Gold Price: ಇಂದು ಚಿನ್ನದ ಬೆಲೆಯಲ್ಲಿ ದಾಖಲೆಯ ಕುಸಿತ, ಯುದ್ಧದ ಎಫೆಕ್ಟ್ನಿಂದ ಬಂಗಾರ-ಬೆಳ್ಳಿ ಮತ್ತಷ್ಟು ದುಬಾರಿ! ಮುನ್ಸೂಚನೆ













Click it and Unblock the Notifications