ಜನವರಿ 2ರಿಂದ ಸಜ್ಜನ್ರಾವ್ ವೃತ್ತದಲ್ಲಿ ಅವರೆ ಮೇಳ
ಬೆಂಗಳೂರು, ಡಿ. 28 : ಅವರೆ ಹಾಗೂ ಅವರೆ ಖಾದ್ಯಗಳ ಪ್ರಿಯರಿಗೆ ಸಿಹಿಸುದ್ದಿ. ಬೆಂಗಳೂರಿನ ಸಜ್ಜನ್ರಾವ್ ವೃತ್ತದಲ್ಲಿ ಜ.2ರಿಂದ 14ರವರೆಗೆ 2014ರ ಅವರೆ ಮೇಳ ನಡೆಯಲಿದೆ. ಅವರೆ ಬೇಳೆಯಿಂದ ತಯಾರಿಸಿದ ಜಿಲೇಜಿ ಈ ಬಾರಿಯ ಮೇಳದ ಸ್ಪೆಷಲ್.
ವಾಸವಿ
ಕಾಂಡಿಮೆಂಟ್ಸ್
ಜ.2ರಿಂದ
14ರವರೆಗೆ
ವಿವಿ
ಪುರಂನ
ಸಜ್ಜನ್ರಾವ್
ವೃತ್ತದಲ್ಲಿ
ಅವರೆ
ಮೇಳವನ್ನು
ಆಯೋಜಿಸಿದೆ
ಎಂದು
ಮೇಳದ
ಆಯೋಜಕಿ
ಗೀತಾ
ಶಿವಕುಮಾರ್
ಅವರು
ಮಾಹಿತಿ
ನೀಡಿದ್ದಾರೆ.
ಚಿಕ್ಕಪೇಟೆ
ಶಾಸಕ
ಆರ್.ವಿ.ದೇವರಾಜ್
ಮೇಳವನ್ನು
ಉದ್ಘಾಟಿಸಲಿದ್ದಾರೆ.
ಗ್ರಾಹಕರು ಹಾಗೂ ರೈತರ ನಡುವೆ ನೇರ ವಹಿವಾಟಿಗೆ ವೇದಿಕೆ ಕಲ್ಪಿಸಲು 14 ವರ್ಷಗಳಿಂದ ಅವರೆ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದು ಗೀತಾ ಶಿವಕುಮಾರ್ ಹೇಳಿದರು. ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ನಟರಾದ ಪ್ರಜ್ಜಲ್ ದೇವರಾಜ್, ಗಣೇಶ್, ನಟಿಯರಾದ ತಾರಾ ಅನುರಾಧ, ಸಂಜನಾ ಮುಂತಾದವರು ಪಾಲ್ಗೊಳ್ಳಲಿದ್ದಾರೆ. [ಹಾಲಿನ ದರ ಏರಿಕೆ ಪ್ರಸ್ತಾವನೆ ಮುಂದಿಟ್ಟ ಕೆಎಂಎಫ್]
ಮಾಗಡಿ, ಹುಣಸೂರು, ಮುಳುಬಾಗಿಲು, ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳ ರೈತರು ಅವರೆ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ತಾಜಾ ಅವರೆ ಕಾಯಿಗಳ ಜೊತೆ ಅವರೆಯಿಂದ ತಯಾರಿಸಿದ ವಿವಿಧ ಖಾದ್ಯಗಳು ಮೇಳದಲ್ಲಿ ದೊರೆಯಲಿವೆ. [ಕೊಪ್ಪಳ ರೈತರ ಬಾಯಲ್ಲಿ ಪಪ್ಪಾಯಿ ಜಪ!]
ಅವರೆ ಜಿಲೇಬಿ : ಈ ಬಾರಿಯ ಮೇಳದಲ್ಲಿ ಅವರೆ ಬೇಳೆಯಿಂದ ತಯಾರಿಸಿದ ಜಿಲೇಬಿಯನ್ನು ಪರಿಚಯಿಸಲಾಗುತ್ತದೆ. ಜಿಲೇಬಿ ಜೊತೆಗೆ ಅವರೆ ಬೇಳೆ ದೋಸೆ, ಪಾಯಸ, ಮಸಾಲ ವಡೆ, ಚಿತ್ರಾನ್ನ, ಹೋಳಿಗೆ, ಅವಲಕ್ಕಿ ಮಿಕ್ಸ್, ಜಾಮೂನು, ಅವರೇಕಾಳು ಉಪ್ಪಿಟ್ಟು ಸೇರಿದಂತೆ ವಿವಿಧ ಖಾದ್ಯಗಳು ಮೇಳದಲ್ಲಿರುತ್ತವೆ.