ಆಟೋ ದಿನ: ಶಂಕರ್ನಾಗ್ ನೆನಪಲ್ಲಿ ಆಟೋ ಅಣ್ಣಂದಿರ ಉತ್ಸವ
ಬೆಂಗಳೂರು, ನವೆಂಬರ್ 17: ದಿವಂಗತ ನಟ ಶಂಕರ್ನಾಗ್ ನೆನಪಲ್ಲಿ ಜಯನಗರದ ಶಾಲಿನಿ ಗ್ರೌಂಡ್ನಲ್ಲಿ ಇಂದು ಆಟೋ ದಿನ ಆಯೋಜಿಸಲಾಗಿತ್ತು. ನೂರಾರು ಆಟೋ ಡ್ರೈವರ್ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪೀಸ್ ಆಟೋ, ನಮ್ಮ ಆಟೋ, ಮಹೀಂದ್ರಾ, ಒಯೋ ಸಹಯೋಗದೊಂದಿಗೆ ಆಯೋಜಿಸಿದ್ದ ಈ ಆಟೋ ರಿಕ್ಷಾ ದಿನದ ಮುಖ್ಯ ಅತಿಥಿ ನಟ ಶ್ರೀಮುರಳಿ.
ಆಟೋ ರಿಕ್ಷಾ ದಿನದ ಸಂದರ್ಭದಲ್ಲಿ 'ನಮ್ಮ ಆಟೋ' ಸ್ವಯಂ ಸೇವಾ ಸಂಸ್ಥೆಯು ಆಟೋ ಡ್ರೈವರ್ಗಳಿಗೆಂದು ಸಹಕಾರ ಸಂಘವನ್ನು ಉದ್ಘಾಟಿಸಿತು. ಸಹಕಾರ ಸಂಘದಲ್ಲಿ ಆಟೋ ಡ್ರೈವರ್ಗಳಿಗೆ ಕಡಿಮೆ ಬಡ್ಡಿಗೆ ಸಾಲ ಸೌಲಭ್ಯ, ಫೋರ್ ಸ್ಟ್ರೋಕ್ ಆಟೋ ಕೊಳ್ಳಲು ಸಹಾಯಧನ ಮತ್ತಿತರೆ ಸಹಾಯಗಳನ್ನು ನೀಡಲಾಗುತ್ತದೆ.

ಎಲೆಕ್ಟ್ರಿಕ್ ಆಟೋ ಟ್ರಿಯೋ ಪ್ರದರ್ಶನ
ಮಹೀಂದ್ರಾ ಸಂಸ್ಥೆಯು ನಿನ್ನೆಯಷ್ಟೆ ಬಿಡುಗಡೆ ಆದ ತನ್ನ ಎಲೆಕ್ಟ್ರಿಕ್ ಆಟೋ 'ಟ್ರಿಯೋ'ವನ್ನು ಪ್ರದರ್ಶನಕ್ಕೆ ಇಟ್ಟಿತ್ತು. ಆಟೋ ಡ್ರೈವರ್ಗಳು ಎಲೆಕ್ಟ್ರಿಕ್ ಆಟೋವನ್ನು ಚಲಾಯಿಸಿ ನೋಡಿ ಖುಷಿ ಪಟ್ಟರು. ಹೊಸ ಮಾದರಿಯ ಆಟೋ ಬಗ್ಗೆ ತಜ್ಞರಿಂದ ಮಾಹಿತಿ ಪಡೆದರು.

ಸಿಂಗರಿಸಿದ ನೂರಾರು ಆಟೋಗಳು
ಆಟೋ ರಿಕ್ಷಾ ದಿನದ ಅಂಗವಾಗಿ ಸಿಂಗರಿಸಿದ ನೂರಾರು ಆಟೋಗಳು ಶಾಲಿನಿ ಗ್ರೌಂಡ್ನ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ ತುಂಬಿದ್ದವು. ನಮ್ಮ ಆಟೋ ಸಂಸ್ಥೆಯು ಚಾಲಕರ ಕೋಡ್ನ ಬೋರ್ಡ್ಗಳನ್ನು ಆಟೋ ಚಾಲಕರಿಗೆ ವಿತರಿಸಿತು.

ಸಭ್ಯತೆಯ ಬೋರ್ಡ್ ವಿತರಣೆ
ಗ್ರಾಹಕರೊಂದಿಗೆ ಸಭ್ಯತೆಯೊಂದಿಗೆ ವರ್ತಿಸುವುದು, ಸಂಚಾರಿ ನಿಯಮಗಳನ್ನು ಪಾಲಿಸುವುದು, ಮೀಟರ್ ಶುಲ್ಕ ಮಾತ್ರವೇ ಪಡೆಯುವುದು, ಸಮವಸ್ತ್ರ ಮತ್ತು ಬ್ಯಾಡ್ಜ್ ಧರಿಸುವುದು, ಮಹಿಳೆಯರು, ಹಿರಿಯರು, ಮಕ್ಕಳ ಸುರಕ್ಷತೆಗೆ ಹೆಚ್ಚಿನ ಗಮನ ಕೊಡುವುದು, ಬಾಡಿಗೆಯನ್ನು ನಯವಾಗಿ ನಿರಾಕರಿಸುವುದು, ಚಾಲನೆ ಸಮಯದಲ್ಲಿ ಮಧ್ಯಪಾನ, ಧೂಮಪಾನ ಮಾಡದೇ ಇರುವುದು ಇದೇ ಹಲವು ನಿಯಮಗಳುಳ್ಳ ಬೋರ್ಡ್ಗಳನ್ನು ಆಟೋ ಚಾಲಕರಿಗೆ ವಿತರಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮ
ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮವೂ ಆಯೋಜಿಸಲಾಗಿತ್ತು, ಡಾನ್ಸ್ ಶಾಲೆಯ ವಿದ್ಯಾರ್ಥಿಗಳು ಕನ್ನಡ ಹಾಡುಗಳಿಗೆ ಕುಣಿದು ನೆರೆದಿದ್ದವರನ್ನು ರಂಜಿಸಿದರು. ನೂರಾರು ಸಂಖ್ಯೆಯಲ್ಲಿ ಆಟೋ ಚಾಲಕರು ಮತ್ತು ಕುಟುಂಬ ವರ್ಗದವರು ಅಲ್ಲಿ ಸೇರಿದ್ದರು.
-
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
ಯುಗಾದಿ, ರಂಜಾನ್ ಹಬ್ಬಕ್ಕೆ 2000 ವಿಶೇಷ ಬಸ್: ಮುಂಗಡ ಟಿಕೆಟ್ ಗೆ ರಿಯಾಯ್ತಿ ಘೋಷಿಸಿದ KSRTC -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು












Click it and Unblock the Notifications