ಅಟಲ್ ಭೂಜಲ್ ಯೋಜನೆ: ಪ್ರಧಾನಿಗೆ ಸಿಎಂ ಹೇಳಿದ್ದೇನು..?
ಬೆಂಗಳೂರು. ಡಿಸೆಂಬರ್ 26: ಅಂತರ್ಜಲದ ನಿರ್ವಹಣೆಗಾಗಿ 'ಅಟಲ್ ಭೂಜಲ್' ಯೋಜನೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಧನ್ಯವಾದ ತಿಳಿಸಿದ್ದಾರೆ.
ಸಿಎಂ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಧಾನಿಗೆ, ಅಟಲ್ ಭೂಜಲ್ ಯೋಜನೆ ಅನುಷ್ಠಾನಗೊಳಿಸಲು ಕರ್ನಾಟಕವನ್ನು ಪರಿಗಣಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.
ಉತ್ತಮ ಆಡಳಿತ: ಕರ್ನಾಟಕಕ್ಕೆ 3 ನೇ ಸ್ಥಾನ..!
ಈ ಭೂಜಲ್ ಯೋಜನೆಗೆ ಸುಮಾರು 6 ಸಾವಿರ ಕೋಟಿ ರೂ, ವೆಚ್ಚವನ್ನು ವ್ಯಹಿಸಿದ್ದು, ಅಂತರ್ಜಲ ನಿರ್ವಹಣೆಯಲ್ಲಿ ಮಹತ್ವವಾದ ಬದಲಾವಣೆ ತರಲಿದೆ ಎಂಬ ವಿಶ್ವಾಸವಿದೆ ನನಗೆ ಇದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಮಾಜಿ ಪ್ರಧಾನಿ, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 95 ನೇ ಜನ್ಮ ದಿನಾಚರಣೆ ಪ್ರಯುಕ್ತ ಪ್ರಧಾನಿ ಮೋದಿ ಅವರು ಬುಧವಾರ 'ಅಟಲ್ ಭೂಜಲ್' ಯೋಜನೆಗೆ ಚಾಲನೆ ನೀಡಿದ್ದರು.
Comments
English summary
Chief Minister BS Yeddyurappan thanked To Prime Minister Narendra Modi for the central governments implementation of the 'Atal Bhujal' project for groundwater management.ಅಂತರ್ಜಲದ ನಿರ್ವಹಣೆಗಾಗಿ
Story first published: Thursday, December 26, 2019, 12:48 [IST]