ಆಟೋ ಚಾಲಕರ ಬೆಂಬಲ ಕೋರಿದ ಆರುಂಧತಿ ನಾಗ್
ಬೆಂಗಳೂರು, ಏ.14: ಬೆಂಗಳೂರಿಗೆ ಉತ್ತಮ ಸಾರಿಗೆ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಉತ್ತಮ ಯೋಜನೆಗಳನ್ನು ಹಾಕಿಕೊಂಡಿರುವ ನಂದನ್ ನಿಲೇಕಣಿ ಅವರನ್ನು ನೀವು ಬೆಂಬಲಿಸಿ ಅವರು ದುಡ್ಡು ಮಾಡಲು ರಾಜಕೀಯಕ್ಕೆ ಬಂದಿಲ್ಲ, ಇರುವ ದುಡ್ಡು ದಾನ ಮಾಡುತ್ತಾರೆ ಎಂದು ನಟಿ ಅರುಂಧತಿ ನಾಗ್ ಅವರು ಆಟೋರಿಕ್ಷಾ ಚಾಲಕರನ್ನು ಉದ್ದೇಶಿಸಿ ಮತ ಯಾಚನೆ ಮಾಡಿದರು.
ನಿಮ್ಮೆಲ್ಲರ ಗುರು ಶಂಕರ್ ನಾಗ್ ಬದುಕಿದ್ರೆ ಅವರು ಕೂಡಾ ನಂದನ್ ಅವರನ್ನು ಬೆಂಬಲಿಸುತ್ತಿದರು. ನಂದನ್ ಅವರು ಸಮರ್ಥ ಅಭ್ಯರ್ಥಿ, ನಿಮ್ಮೆಲ್ಲರ ಸಮಸ್ಯೆಗೆ ಅವರು ಖಂಡಿತವಾಗಿ ಪರಿಹಾರ ನೀಡಬಲ್ಲರು ಎಂದು ಅರುಂಧತಿ ನಾಗ್ ಹೇಳಿದರು.
ಬೆಂಗಳೂರಿಗೆ ಉತ್ತಮ ಸಾರಿಗೆ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ, ಆಟೋ ಚಾಲಕರೊಂದಿಗೆ ಸಂವಾದ ಮಾಡಿದರು. ನಂದನ್ ಅವರೊಂದಿಗೆ ಅವರ ಪತ್ನಿ ರೋಹಿಣಿ ಮತ್ತು ಆಟೋಚಾಲಕರಿಗೆ ಸದಾ ಸ್ಫೂರ್ತಿಯಾಗಿರುವ ದಿ. ಶಂಕರ್ ನಾಗ್ ಅವರ ಪತ್ನಿ ಹಾಗೂ ಖ್ಯಾತ ರಂಗಕರ್ಮಿ, ರಂಗಶಂಕರದ ಶ್ರೀಮತಿ ಅರುಂಧತಿ ನಾಗ್ ಕೂಡ ಇದ್ದರು. [ಇನ್ನಷ್ಟು ಚಿತ್ರಗಳಿಗೆ ಗ್ಯಾಲರಿ ನೋಡಿ]
ಆಟೋ ಚಾಲಕರೊಂದಿಗೆ ಮಾತನಾಡಿದ ಅರುಂಧತಿಯವರು ಇದೇ ಮೊದಲ ಬಾರಿಗೆ ತಾವು ರಾಜಕೀಯ ಪಕ್ಷವೊಂದರ ಅಭ್ಯರ್ಥಿಗಾಗಿ ಮತ ಹಾಕಬೇಕೆಂದು ಕೋರಲು ಬಂದಿರುವುದಾಗಿ ಹೇಳಿದರು. ಈ ಚುನಾವಣೆ ತುಂಬ ಮಹತ್ವದ್ದು ಎಂದ ಅರುಂಧತಿಯವರು, ನಂದನ್ ಅವರಂತಹ ಪ್ರಾಮಾಣಿಕ, ಸಾಮರ್ಥ್ಯವಿರುವ, ಬದ್ಧತೆಯಿರುವ ವ್ಯಕ್ತಿಯ ಪರವಾಗಿ ನನ್ನಂತಹವರು ಮುಂದೆ ಬಂದು ಮಾತನಾಡಲು ಇದು ಸಕಾಲ ಎಂದರು.

ಶಂಕರ್ ಇಂದು ಬದುಕಿದ್ದರೆ ನಂದನ್ ಗೆ ಮತ
ಅರುಂಧತಿಯವರು ನೆರೆದಿದ್ದ ಎಲ್ಲ ಆಟೋ ಚಾಲಕರು ಅವರ ಸ್ನೇಹಿತವಲಯದ ಚಾಲಕರಲ್ಲಿ ಇನ್ನೂ 500 ಜನರನ್ನಾದರೂ ಭೇಟಿಯಾಗಿ, ಉತ್ತಮ ಬೆಂಗಳೂರು ಮತ್ತು ಒಳ್ಳೆಯ ರಾಜಕೀಯದ ಅಗತ್ಯದ ಕುರಿತು ಮನಗಾಣಿಸಬೇಕೆಂದು ಹೇಳಿದರು. ಶಂಕರ್ ಇಂದು ಬದುಕಿದ್ದರೆ, ಖಂಡಿತವಾಗಿಯೂ ನಂದನ್ ಅವರನ್ನು ಬೆಂಬಲಿಸುತ್ತಿದ್ದರು ಎಂದು ಭಾವುಕರಾಗಿ ಹೇಳಿದರು.

ರಿಕ್ಷಾವಾಲಗಳ ಸಮಸ್ಯೆ ಬಗೆಹರಿಸುವೆ
ನಂದನ್ ನಿಲೇಕಣಿಯವರು ಇದೇ ಸಂದರ್ಭದಲ್ಲಿ ಮಾತನಾಡುತ್ತ, ತಾವು ಸಂಸದರಾಗಿ ಗೆದ್ದರೆ, ಮೂರು ತಿಂಗಳಿನ ಒಳಗೆ ಆಟೋ ಚಾಲಕರ ಪ್ರತಿನಿಧಿಗಳೊಂದಿಗೆ ಸಭೆ ಮಾಡಿ, ಅವರ ಮುಖ್ಯ ಸಮಸ್ಯೆಗಳನ್ನು ಬಗೆಹರಿಸುವುದಾಗಿ ವಾಗ್ದಾನ ಮಾಡಿದರು.

ಸಮಗ್ರ ಪರಿಹಾರ ರೂಪಿಸುವುದು ಅಗತ್ಯವಿದೆ
ಸಾರಿಗೆ ಸಮಸ್ಯೆಗಳನ್ನು ಒಂದು ಸಮಗ್ರ ರೀತಿಯಲ್ಲಿ ಬಗೆಹರಿಸಿಕೊಳ್ಳದಿದ್ದರೆ, ಈ ಸಮಸ್ಯೆಗಳು ಮತ್ತೆ ತಲೆ ಎತ್ತುತ್ತವೆ. ನಮ್ಮ ಸಾರಿಗೆ ಸಮಸ್ಯೆಗಳು ನಗರಾದ್ಯಂತ ಇದ್ದು, ಇದಕ್ಕೆ ಸಮಗ್ರ ಪರಿಹಾರ ರೂಪಿಸುವುದು ಅಗತ್ಯವಿದೆ ಎಂದು ನಂದನ್ ಹೇಳಿದರು.

ಜಯನಗರದಲ್ಲಿ ನಂದನ್ ಜತೆ ಪ್ರಚಾರ
ಸಾರ್ವಜನಿಕ ಸಭೆಯಲ್ಲಿ ನಂದನ್ ಅವರ ಪತ್ನಿ ರೋಹಿಣಿ ಅಲ್ಲದೆ ಕಾಂಗ್ರೆಸ್ ಮುಖಂಡರಾದ ಕೆ ಎಂ ನಾಗರಾಜ್ ಮತ್ತು ಸ್ಥಳೀಯ ಕಾರ್ಪೋರೇಟರ್ ಶ್ರೀಮತಿ ಗಂಗಾಂಬಿಕೆ ಮಲ್ಲಿಕಾರ್ಜುನ್ ಕೂಡ ಉಪಸ್ಥಿತರಿದ್ದರು.

ಮಾರ್ಗ ಮಧ್ಯದಲ್ಲೂ ಪ್ರಚಾರ ಕಾರ್ಯ
ಟ್ರಾಫಿಕ್ ಸಿಗ್ನಲ್ ನಲ್ಲಿ ನಂದನ್ ಅವರ ಕಾರು ನಿಂತಿದ್ದ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಆಟೋರಿಕ್ಷಾ ಚಾಲಕನನ್ನು ಮಾತನಾಡಿಸುತ್ತಿರುವ ನಂದನ್
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications