ನಮ್ದುಕೆ ಟೆಕ್ಕಿಗಳ ಕಥೆ ವ್ಯಥೆ ತಿಳಿಸುವ ಅಣ್ತಮ್ಮ ಸಾಂಗ್
ಯಶ್ ಅಭಿನಯದ ಮಿ ಅಂಡ್ ಮಿಸೆಸ್ ರಾಮಾಚಾರಿ ಚಿತ್ರದ 'ಹಂಗೂ ಹಿಂಗೂ ಹೆಂಗೋ ಇದ್ದೆ ನಾನು.. ಯಾರಿಗೆ ಗೊತ್ತಿಲ್ಲ ಹೇಳಿ.. ಈ ಜನಪ್ರಿಯ ಹಾಡಿನ ಸಾಲಿಗೆ ಅಣಕು ಸಾಹಿತ್ಯ ರಚಿಸಿ, ಹಾಡಿ ಸಕತ್ ಮಜಾ ಕೊಡುತ್ತಿದ್ದಾರೆ ನಮ್ದುಕೆ ತಂಡ.
ಬಹುತೇಕ ಟೆಕ್ಕಿಗಳನ್ನೇ ಹೊಂದಿರುವ ನಮ್ದು ಕೆ ತಂಡದ ಕಣ್ಣು ಈಗ ಸಾಫ್ಟ್ ವೇರ್ ತಂತ್ರಜ್ಞರ ಮೇಲೆ ಬಿದ್ದಿದೆ. ಆನ್ ಸೈಟ್(ವಿದೇಶಕ್ಕೆ ಕಾರ್ಯ ನಿಮಿತ್ತ ನಿಯೋಜನೆಗೊಳ್ಳುವುದು) ಹೋಗುವ ಟೆಕ್ಕಿಗಳು, ಇಲ್ಲೇ ಇರುವ ಆಫ್ ಶೋರ್ ಉದ್ಯೋಗಿಗಳ ಪರದಾಟ, ಸಂಬಳ, ಕ್ಲೈಂಟು, ಕೋಡು, ಡೆವಲಪರ್, ಹೀಗೆ ಟೆಕ್ಕಿಗಳ ಪ್ರಪಂಚದ ಕಥೆ ವ್ಯಥೆಯನ್ನು ಹಾಡಿನ ಮೂಲಕ ಬಿಚ್ಚಿಡಲಾಗಿದೆ. [ಅಣಕು ವಿಡಿಯೋ: ಎಕ್ಸಾಂ ಹಾಲ್ ನಲ್ಲಿ ಕನ್ನಡ ಸಾಂಗ್ಸ್ ]

Onsite ಅಲ್ಲಿ ಇರೋ ಹುಡುಗರ ಕೈಯಿಂದ ಮೊಬೈಲ್ ತರ್ಸ್ತೀರಾ, ಎಣ್ಣೆ ಗಿಫ್ಟ್ ಕೊಡಿಸ್ಕೊತೀರಾ, ಬಂದಾಗ ಅವರ ಬ್ಲೇಡ್ ಹಾಕ್ತೀರಾ..ಆದ್ರೆ foreign ಹೋಗಿರೋ ನಮ್ software ಅಣ್ಣತಮ್ಮಂದಿರ ನಿಜವಾದ ಕಥೆ- ವ್ಯಥೆ ನಮ್ಮ ಈ ಸಲದ video " ಅಣ್ಣತಮ್ಮ@foreign(kathe-vyathe)song spoof ...ನೋಡಿ ಆನಂದಿಸಿ ಎಂದು ನಮ್ದುಕೆ ತಂಡದ ಶ್ರವಣ್ ನಾರಾಯಣ್ ಹೇಳುತ್ತಿದ್ದಾರೆ. [ನಮ್ದುಕೆ ನಿಮ್ದುಕೆ ಅವರ್ದುಕೆ ನೋಡ್ಬೇಕಾದ್ ವಿಡಿಯೋ]
ಈ ಅಣಕು ಗೀತೆಯಲ್ಲಿ ಸಕತ್ ಪಂಚಿಂಗ್ ಸಾಲುಗಳಿವೆ.. ಅಣ್ತಮ್ಮ ಸಾಂಗ್ ಸಾಹಿತ್ಯಕ್ಕೆ ಮಂಜುನಾಥ್ ಮಹದೇವಯ್ಯ, ರಾಜಶೇಖರ್ ಬಸವರಾಜು ಅವರ ಸಾಹಿತ್ಯವಿದ್ದರೆ, ಶ್ರವಣ್ ಅವರ ನಿರ್ದೇಶನವಿದೆ.

ಮೈಸೂರು, ಅರಸೀಕೆರೆ, ಮಂಡ್ಯ ಮೂಲದ ಟೆಕ್ಕಿಗಳು ನಾರ್ವೆ, ಜಪಾನ್ ,ಯುಎಸ್ ನಲ್ಲಿ ಈ ಹಾಡು ಕೇಳಿ ಕಣ್ಣೀರಿಡುವಂಥ ದೃಶ್ಯಗಳನ್ನು ಸೃಷ್ಟಿಸಲಾಗಿದೆ. ಹೊಡೆಸ್ಕೊಂಡು ಹೋಯ್ತು ರೇಟಿಂಗ್ ಗುರೂ, ವೇರಿಯಬಲ್ ಪೇ ಜೀರೋ ಗುರು..ಡೆವಲಪರ್ ನ ಪೇಯ್ನ್ ಕಸ್ಟಮರ್ ಗೇನು ಗೊತ್ತು ಎಂಬ ಸಾಲುಗಳನ್ನು ಕೇಳಿದ ನಮ್ಮ ಟೆಕ್ಕಿಗಳು ಹೌದೌದು ಎಂದು ಮೆಚ್ಚುವಂತಿದೆ. ಸಾಂಗ್ ಕೇಳಿ ಎನ್ ಜಾಯ್ ಮಾಡಿ...
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications