ನಮ್ದುಕೆ ಟೆಕ್ಕಿಗಳ ಕಥೆ ವ್ಯಥೆ ತಿಳಿಸುವ ಅಣ್ತಮ್ಮ ಸಾಂಗ್
ಯಶ್ ಅಭಿನಯದ ಮಿ ಅಂಡ್ ಮಿಸೆಸ್ ರಾಮಾಚಾರಿ ಚಿತ್ರದ 'ಹಂಗೂ ಹಿಂಗೂ ಹೆಂಗೋ ಇದ್ದೆ ನಾನು.. ಯಾರಿಗೆ ಗೊತ್ತಿಲ್ಲ ಹೇಳಿ.. ಈ ಜನಪ್ರಿಯ ಹಾಡಿನ ಸಾಲಿಗೆ ಅಣಕು ಸಾಹಿತ್ಯ ರಚಿಸಿ, ಹಾಡಿ ಸಕತ್ ಮಜಾ ಕೊಡುತ್ತಿದ್ದಾರೆ ನಮ್ದುಕೆ ತಂಡ.
ಬಹುತೇಕ ಟೆಕ್ಕಿಗಳನ್ನೇ ಹೊಂದಿರುವ ನಮ್ದು ಕೆ ತಂಡದ ಕಣ್ಣು ಈಗ ಸಾಫ್ಟ್ ವೇರ್ ತಂತ್ರಜ್ಞರ ಮೇಲೆ ಬಿದ್ದಿದೆ. ಆನ್ ಸೈಟ್(ವಿದೇಶಕ್ಕೆ ಕಾರ್ಯ ನಿಮಿತ್ತ ನಿಯೋಜನೆಗೊಳ್ಳುವುದು) ಹೋಗುವ ಟೆಕ್ಕಿಗಳು, ಇಲ್ಲೇ ಇರುವ ಆಫ್ ಶೋರ್ ಉದ್ಯೋಗಿಗಳ ಪರದಾಟ, ಸಂಬಳ, ಕ್ಲೈಂಟು, ಕೋಡು, ಡೆವಲಪರ್, ಹೀಗೆ ಟೆಕ್ಕಿಗಳ ಪ್ರಪಂಚದ ಕಥೆ ವ್ಯಥೆಯನ್ನು ಹಾಡಿನ ಮೂಲಕ ಬಿಚ್ಚಿಡಲಾಗಿದೆ. [ಅಣಕು ವಿಡಿಯೋ: ಎಕ್ಸಾಂ ಹಾಲ್ ನಲ್ಲಿ ಕನ್ನಡ ಸಾಂಗ್ಸ್ ]

Onsite ಅಲ್ಲಿ ಇರೋ ಹುಡುಗರ ಕೈಯಿಂದ ಮೊಬೈಲ್ ತರ್ಸ್ತೀರಾ, ಎಣ್ಣೆ ಗಿಫ್ಟ್ ಕೊಡಿಸ್ಕೊತೀರಾ, ಬಂದಾಗ ಅವರ ಬ್ಲೇಡ್ ಹಾಕ್ತೀರಾ..ಆದ್ರೆ foreign ಹೋಗಿರೋ ನಮ್ software ಅಣ್ಣತಮ್ಮಂದಿರ ನಿಜವಾದ ಕಥೆ- ವ್ಯಥೆ ನಮ್ಮ ಈ ಸಲದ video " ಅಣ್ಣತಮ್ಮ@foreign(kathe-vyathe)song spoof ...ನೋಡಿ ಆನಂದಿಸಿ ಎಂದು ನಮ್ದುಕೆ ತಂಡದ ಶ್ರವಣ್ ನಾರಾಯಣ್ ಹೇಳುತ್ತಿದ್ದಾರೆ. [ನಮ್ದುಕೆ ನಿಮ್ದುಕೆ ಅವರ್ದುಕೆ ನೋಡ್ಬೇಕಾದ್ ವಿಡಿಯೋ]
ಈ ಅಣಕು ಗೀತೆಯಲ್ಲಿ ಸಕತ್ ಪಂಚಿಂಗ್ ಸಾಲುಗಳಿವೆ.. ಅಣ್ತಮ್ಮ ಸಾಂಗ್ ಸಾಹಿತ್ಯಕ್ಕೆ ಮಂಜುನಾಥ್ ಮಹದೇವಯ್ಯ, ರಾಜಶೇಖರ್ ಬಸವರಾಜು ಅವರ ಸಾಹಿತ್ಯವಿದ್ದರೆ, ಶ್ರವಣ್ ಅವರ ನಿರ್ದೇಶನವಿದೆ.

ಮೈಸೂರು, ಅರಸೀಕೆರೆ, ಮಂಡ್ಯ ಮೂಲದ ಟೆಕ್ಕಿಗಳು ನಾರ್ವೆ, ಜಪಾನ್ ,ಯುಎಸ್ ನಲ್ಲಿ ಈ ಹಾಡು ಕೇಳಿ ಕಣ್ಣೀರಿಡುವಂಥ ದೃಶ್ಯಗಳನ್ನು ಸೃಷ್ಟಿಸಲಾಗಿದೆ. ಹೊಡೆಸ್ಕೊಂಡು ಹೋಯ್ತು ರೇಟಿಂಗ್ ಗುರೂ, ವೇರಿಯಬಲ್ ಪೇ ಜೀರೋ ಗುರು..ಡೆವಲಪರ್ ನ ಪೇಯ್ನ್ ಕಸ್ಟಮರ್ ಗೇನು ಗೊತ್ತು ಎಂಬ ಸಾಲುಗಳನ್ನು ಕೇಳಿದ ನಮ್ಮ ಟೆಕ್ಕಿಗಳು ಹೌದೌದು ಎಂದು ಮೆಚ್ಚುವಂತಿದೆ. ಸಾಂಗ್ ಕೇಳಿ ಎನ್ ಜಾಯ್ ಮಾಡಿ...
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications