ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಂತ್ ಅಂತಿಮ ಯಾತ್ರೆ LIVE: ಜನಾನುರಾಗಿ ನಾಯಕಗೆ ಭಾವಪೂರ್ಣ ವಿದಾಯ

|
Google Oneindia Kannada News

ಬೆಂಗಳೂರು, ನವೆಂಬರ್ 13: ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ, ಸದಾ ಹಸನ್ಮುಖಿಯಾಗಿ, ಸ್ನೇಹಜೀವಿಯಾಗಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ವಿಧಿವಶರಾಗಿದ್ದಾರೆ ಎಂಬ ಸುದ್ದಿಯನ್ನು ಅರಗಿಸಿಕೊಳ್ಳುವುದು ಕಷ್ಟವೇ.

ಶ್ವಾಸಕೋಶದ ಕ್ಯಾನ್ಸರ್ ಎಂಬ ಮಹಾಮಾರಿಗೆ ತುತ್ತಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ನ.12 ರಂದು ಬೆಳಗ್ಗಿನ ಜಾವ 2 ಗಂಟೆಯ ಸುಮಾರಿಗೆ ವಿಧಿವಶರಾದರು.

ಅನಂತ್ ಕುಮಾರ್ ಅವರ ಅಂತ್ಯ ಸಂಸ್ಕಾರ ಇಂದು ಚಾಮರಾಜಪೇಟೆಯ ಚಿತಾಗಾರದಲ್ಲಿ ನಡೆಯಲಿದ್ದು, ರಾಷ್ಟ್ರ, ರಾಜ್ಯದ ಗಣ್ಯಾತಿಗಣ್ಯ ನಾಯಕರು ಅವರ ಅಂತಿಮ ದರ್ಶನ ಪಡೆಯಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಅನಂತ್ ಕುಮಾರ್ ಅವರ ಅಂತಿಮ ದರ್ಶನ ಪಡೆದರು.

Ananth Kumar demise: Last respect live updates

ಅನಂತ್ ಕುಮಾರ್ ಅಂತಿಮ ಯಾತ್ರೆಯ ಕ್ಷಣ ಕ್ಷಣದ ಮಾಹಿತಿಯನ್ನು 'ಒನ್ಇಂಡಿಯಾ' ಕನ್ನಡ ಇಲ್ಲಿ ನೀಡಲಿದೆ.

Newest FirstOldest First
3:21 PM, 13 Nov

ಜನಾನುರಾಗಿ ನಾಯಕಗೆ ಭಾವಪೂರ್ಣ ವಿದಾಯ
3:11 PM, 13 Nov

ಅನಂತ್ ಕುಮಾರ್ ಅಮರ್ ರಹೇ ಎಂಬ ಘೋಷಣೆಯೊಂದಿಗೆ 'ಅದಮ್ಯ ಚೇತನ'ಕ್ಕೆ ಅಂತಿಮ ನಮನ
3:10 PM, 13 Nov

ಪಕ್ಷಭೇದ ಮರೆತು ಅನಂತ್ ಅಂತಿಮ ವಿದಾಯಕ್ಕೆ ಆಗಮಿಸಿದ್ದ ನಾಯಕರು.
3:07 PM, 13 Nov

ಜನಾನುರಾಗಿ ಅನಂತ್ ಕುಮಾರ್ ಇನ್ನು ನೆನಪು ಮಾತ್ರ
2:49 PM, 13 Nov

ಅನಂತ್ ಕುಮಾರ್ ಚಿತೆಗೆ ಅಗ್ನಿಸ್ಪರ್ಶ ಮಾಡಿದ ಸಹೋದರ ನಂದಕುಮಾರ್
2:37 PM, 13 Nov

ಇನ್ನು ಕೆಲವೇ ಕ್ಷಣಗಳಲ್ಲಿ ಪಂಚಭೂತಗಳಲ್ಲಿ ಅಂತ್ಯಸಂಸ್ಕಾರ
2:33 PM, 13 Nov

ಮಾನಸಪುತ್ರನ ಅಂತಿಮ ದರ್ಶನ ಪಡೆದ ಅಡ್ವಾಣಿ
Advertisement
2:32 PM, 13 Nov

ಅನಂತ್ ಕುಮಾರ್ ಪತ್ನಿಗೆ ಸಾಂತ್ವನ ಹೇಳಿದ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ
2:24 PM, 13 Nov

ಆರೆಸ್ಸೆಸ್ ಮುಖಂಡ ಭಯ್ಯಾಜಿ ಜೋಶಿ ಉಪಸ್ಥಿತಿ
2:23 PM, 13 Nov

ಅಗಲಿದ ನಾಯಕನಿಗೆ ಗಣ್ಯರಿಂದ ಮೌನಾಚರಣೆ
2:15 PM, 13 Nov

ಅಂತಿಮ ಸಂಸ್ಕಾರದ ವಿಧಿ ವಿಧಾನ ನಡೆಸುತ್ತಿರುವ ಅನಂತ್ ಕುಮಾರ್ ಸಹೋದರ
2:09 PM, 13 Nov

ಅನಂತ್ ಕುಮಾರ್ ಮೃತದೇಹಕ್ಕೆ ಹೊದಿಸಿದ್ದ ರಾಷ್ಟ್ರಧ್ವಜ ತೆಗೆದು ಅವರ ಪತ್ನಿ ತೇಜಸ್ವಿನಿ ಅವರಿಗೆ ಹಸ್ತಾಂತರಿಸಿದ ಸೇನಾಧಿಕಾರಿ
Advertisement
2:08 PM, 13 Nov

ಅನಂತ್ ಕುಮಾರ್ ಮೃತದೇಹಕ್ಕೆ ಹೊದಿಸಿದ್ದ ರಾಷ್ಟ್ರಧ್ವಜ ತೆಗೆದು ಅವರ ಪತ್ನಿ ತೇಜಸ್ವಿನಿ ಅವರಿಗೆ ಹಸ್ತಾಂತರಿಸಿದ ಸೇನಾಧಿಕಾರಿ
2:07 PM, 13 Nov

ಗಣ್ಯರಿಂದ ಅಂತಿಮ ಸಲ್ಲಿಕೆ ಮುಕ್ತಾಯ. ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ಆರಂಭ
2:00 PM, 13 Nov

ಮುಗಿಲು ಮುಟ್ಟಿದ 'ಅಮರ್ ರಹೇ ಅನಂತ್ ಕುಮಾರ್' ಎಂಬ ಘೋಷಣೆ
1:58 PM, 13 Nov

ಬಿಎಸ್ ಯಡಿಯೂರಪ್ಪ ಅವರಿಂದ ಅಂತಿಮ ನಮನ ಸಲ್ಲಿಕೆ
1:57 PM, 13 Nov

ಅಂತಿಮ ನಮನ ಸಲ್ಲಿಸಿದ ಸಚಿವರಾದ ನಿರ್ಮಲಾ ಸೀತಾರಾಮನ್, ರವಿಶಂಕರ್ ಪ್ರಸಾದ್
1:47 PM, 13 Nov

ಚಾಮರಾಜಪೇಟೆಯ ಚಿತಾಗಾರಕ್ಕೆ ತೆರಳಿದ ಬಿಜೆಪಿ ಮುಖಂಡರಾದ ಎಲ್.ಕೆ. ಅಡ್ವಾಣಿ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ಅಮಿತ್ ಶಾ, ರವಿಶಂಕರ್ ಪ್ರಸಾದ್.
1:34 PM, 13 Nov

ಅಂತ್ಯ ಸಂಸ್ಕಾರದಲ್ಲಿ ಭಾಗಿಯಾದ ಡಿಕೆ ಶಿವಕುಮಾರ್, ಮತ್ತು ರಾಜ್ಯದ ಇತರ ಗಣ್ಯರು
1:27 PM, 13 Nov

ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತಿಮ ವಿಧಿವಿಧಾನ ಆರಂಭ
1:12 PM, 13 Nov

ಚಾಮರಾಜಪೇಟೆ ರುದ್ರಭೂಮಿ ತಲುಪಿದ ಪಾರ್ಥಿವ ಶರೀರ
12:42 PM, 13 Nov

ನೆಚ್ಚಿನ ನಾಯಕನಿಗೆ ಭಾವಪೂರ್ಣ ವಿದಾಯ ಸಲ್ಲಿಸುತ್ತಿರುವ ನೂರಾರು ಜನ
12:26 PM, 13 Nov

ಪಂಪಮಹಾಕವಿ ರಸ್ತೆ, ಆಶ್ರಮ ಬುಲ್ ಟೆಂಪಲ್ ರೋಡ್, ಉಮಾ ಟಾಕೀಸ್, ಚಾಮರಾಜಪೇಟೆ ಮಾರ್ಗವಾಗಿ ಸಾಗಲಿರುವ ಶವಯಾತ್ರೆ.
12:22 PM, 13 Nov

ನ್ಯಾಶನಲ್ ಕಾಲೇಜು ಮೈದಾನದಿಂದ ಚಾಮರಾಜಪೇಟೆಯ ಚಿತಾಗಾರದತ್ತ ಪಾರ್ಥಿವ ಶರೀರ.
12:09 PM, 13 Nov

ಅಜಾತಶತ್ರುವನ್ನು ನಾವಿಂದು ಕಳೆದುಕೊಂಡಿದ್ದೇವೆ- ವೀರಪ್ಪಮೋಯ್ಲಿ
12:06 PM, 13 Nov

ನಿರ್ಮಲಾನಂದ ಶ್ರೀಗಳಿಂದ ಅಂತಿಮ ದರ್ಶನ
11:25 AM, 13 Nov

ಕೆಲವೇ ಕ್ಷಣಗಳಲ್ಲಿ ಅಂತಿಮ ದರ್ಶನಕ್ಕೆ ಆಗಮಿಸಲಿರುವ ಗೃಹಸಚಿವ ರಾಜನಾಥ್ ಸಿಂಗ್
11:23 AM, 13 Nov

ಚಾಮರಾಜಪೇಟೆಯ ಚಿತಾಗಾರದಲ್ಲಿ 45 ನಿಮಿಷಗಳ ಕಾಲ ನಡೆಯಲಿರುವ ಅಂತಿಮ ವಿಧಿ ವಿಧಾನ
11:20 AM, 13 Nov

ಅನಂತ್ ಕುಮಾರ್ ಅವರಿಗೆ ಗಂಡುಮಕ್ಕಳಿಲ್ಲದ ಕಾರಣ ಅವರ ಸಹೋದರ ನಂದಕುಮಾರ್ ಅವರೇ ಅಂತಿಮ ವಿಧಿವಿಧಾನ ನೆರವೇರಿಸಲಿದ್ದಾರೆ.
11:19 AM, 13 Nov

ಅಂತಿಮ ವಿಧಿ ವಿಧಾನ ನೆರವೇರಿಸಲಿರುವ ಸಹೋದರ ನಂದಕುಮಾರ್
READ MORE

English summary
Union minister Ananth Kumar demise: Last respect live updates in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X