ಬೆಂಗಳೂರಲ್ಲಿ ಕೊರೊನಾ ಸೋಂಕಿತರ ತುರ್ತು ಸೇವೆಗೆ ಏರ್ ಆಂಬ್ಯುಲೆನ್ಸ್
ಬೆಂಗಳೂರು, ಸೆಪ್ಟೆಂಬರ್ 1: ಕೊರೊನಾ ಸೋಂಕಿತರ ತುರ್ತು ಸೇವೆಗೆ ಬೆಂಗಳೂರಿನಲ್ಲಿ ಏರ್ ಆಂಬ್ಯುಲೆನ್ಸ್ ರೆಡಿ ಇದೆ.
Recommended Video
ತುರ್ತು ಪರಿಸ್ಥಿತಿಯಲ್ಲಿರುವವರು ಇನ್ನು ಮುಂದೆ ಹೆಚ್ಚು ಹೊತ್ತು ಕಾಯಬೇಕಿಲ್ಲ, ರಸ್ತೆ ಪ್ರಯಾಣದ ಬದಲು ಕೊರೊನಾ ರೋಗಿಗಳಿಗೆ ಏರ್ ಆಂಬ್ಯುಲೆನ್ಸ್ ಸೇವೆ ಒದಗಿಸಲಾಗುತ್ತಿದೆ.
ಭಾರತದಲ್ಲಿ ಒಂದೇ ದಿನ 69,921 ಕೊರೊನಾ ಸೋಂಕಿತರು ಪತ್ತೆ
ಬೆಂಗಳೂರಿನಿಂದ ಸೇವೆ ಆರಂಭಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅನುಮತಿ ನೀಡಿದ್ದಾರೆ ಎಂದು ಐಕಾತ್ ಮಾರ್ಕೆಟಿಂಗ್ ಮುಖ್ಯಸ್ಥ ಫಾಹಿಮ್ ಹುಸೇನ್ ತಿಳಿಸಿದ್ದಾರೆ.
ಈ ಮೊದಲು ಮುಂಬೈ, ದೆಹಲಿ ಮುಂತಾದ ನಗರಗಳಲ್ಲಿ ಮಾಡುತ್ತಿದ್ದೆವು. ಈಗ ಬೆಂಗಳೂರಿನಲ್ಲಿ ಆರಂಭಿಸಿದ್ದೇವೆ. ಇದರಿಂದ ಎಮರ್ಜೆನ್ಸಿ ಇರುವ ರೋಗಿಗಳಿಗೆ ಶೀಘ್ರವಾಗಿ ಚಿಕಿತ್ಸೆ ಲಭ್ಯವಾಗಲಿದೆ.
ಇದೇ
ಮೊದಲ
ಬಾರಿಗೆ
ದಕ್ಷಿಣ
ಭಾರತದಲ್ಲಿ
ಜಕ್ಕೂರು
ಏರ್
ಡ್ರಮ್ಸ್
ನಿಂದ
ಏರ್
ಆಂಬ್ಯುಲೆನ್ಸ್
ಸೇವೆ
ಅಸ್ಥಿತ್ವಕ್ಕೆ
ಬರಲಿದೆ.
ಸೆಪ್ಟೆಂಬರ್
ತಿಂಗಳಿನಿಂದ
ಹಾರಾಟ
ನಡೆಸಲಿದೆ.
ನಾಗರಿಕ
ವಿಮಾನಯಾನ
ನಿರ್ದೇಶನಾಲಯದ
ಡಿಜಿ
ಅವರಿಂದ
ಅನುಮೋದನೆ
ಪಡೆದಿರುವುದಾಗಿ
ತಿಳಿಸಿದ್ದಾರೆ.
ಈಗಾಗಲೇ ಏಳರಿಂದ ಎಂಟು ಏರ್ ಆಂಬ್ಯುಲೆನ್ಸ್ಗಳಿವೆ, ಅಲ್ಲಿ ಚಾರ್ಟೆಡ್ ಕ್ರಾಫ್ಟ್ ಅನ್ನು ತಾತ್ಕಾಲಿಕವಾಗಿ ಏರ್ ಆಂಬ್ಯುಲೆನ್ಸ್ ಆಗಿ ಪರಿವರ್ತಿಸಲಾಗಿದೆ ಎಂದು ಹುಸೇನ್ ವಿವರಿಸಿದರು.
ತುಂಬಾ ರಿಮೋಟ್ ಪ್ರದೇಶದಲ್ಲಿರುವ ಹಳ್ಳಿಗಳಿಂದ ರೋಗಿಗಳನ್ನು ತುರ್ತಾಗಿ ಕರೆ ತರಲು ಏರ್ ಆಂಬ್ಯುಲೆನ್ಸ್ ಸಹಾಯ ಮಾಡಲಿದೆ..