ಬೆಂಗಳೂರಿನಲ್ಲಿ ವಿವೊ ಶೋರೂಂಗೆ ಹರಿಪ್ರಿಯಾ ಚಾಲನೆ
ಬೆಂಗಳೂರು, ಸೆಪ್ಟೆಂಬರ್ 15 : ಸ್ಮಾರ್ಟ್ಫೋರ್ನ್ ಪ್ರಿಯರಿಗೆ ಇಲ್ಲೊಂದು ಸಂತಸ ಸುದ್ದಿ ಇದೆ. ವಿಶ್ವದ ಸ್ಮಾರ್ಟ್ಫೋನ್ ಮೇಕಿಂಗ್ ಕಂಪನಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ 'ವಿವೊ' ವತಿಯಿಂದ ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಅತಿದೊಡ್ಡ ಸ್ಮಾರ್ಟ್ಫೋನ್ ಶೋರೂಂ ಶುಭಾರಂಭಗೊಂಡಿದೆ.
ನಗರದ ಸಿ.ಎಂ.ಎಚ್ ರಸ್ತೆಯಲ್ಲಿ ಆರಂಭವಾದ 'ವಿವೊ' ಮೊಬೈಲ್ ಶೋರೂಂ ಅನ್ನು ನಟಿ ಹರಿಪ್ರಿಯ ವಿವೊ ವಿ3 ಮ್ಯಾಕ್ಸ್ನಲ್ಲಿ ಸೆಲ್ಫಿ ತೆಗೆಯುವ ಮೂಲಕ ಉದ್ಘಾಟಿಸಿದರು. ಇದೇವೇಳೆ ಮೊದಲ ಗ್ರಾಹಕರಿಗೆ ವಿವೊ ಮೊಬೈಲ್ ಹಸ್ತಾಂತರಿಸಿದರು. ವಿವೊ ಕಮ್ಯುನಿಕೇಷನ್ನ ನಿರ್ದೇಶಕ ಮ್ಯಾಟ್ಮಾ ಮತ್ತು ವಿವೊ ರೀಜನಲ್ ಡಿಸ್ಟ್ರಿಬ್ಯೂಟರ್ ಸುರೇಶ್ ಜೈನ್ ಉಪಸ್ಥಿತರಿದ್ದರು.
ಬೆಂಗಳೂರಿನಲ್ಲಿ ಆರಂಭವಾಗುತ್ತಿರುವ 2ನೇ 'ವಿವೊ' ಶೋರೂಂ ಇದಾಗಿದೆ. ಅಲ್ಲದೆ ಇದು ವಿವೊ 4ಜಿ ಶ್ರೇಣಿಯ ಸ್ಮಾರ್ಟ್ಫೋನ್ಗಳ ಮಾರಾಟದ ಮಳಿಗೆಯಾಗಿದೆ. ಈ 'ವಿವೋ' ಶೋರೂಂನಲ್ಲಿ ವಿಶೇಷ ಡೆಮೋಝೋನ್ ಇದ್ದು, ಇದರಿಂದ ಹೈಫೈ ವಿವೊ ಸ್ಮಾರ್ಟ್ಫೋನ್ಗಳ ಸಮಗ್ರ ಮಾಹಿತಿ ಪಡೆಯಲು ಮತ್ತು ತಮ್ಮ ನೆಚ್ಚಿನ ಮೊಬೈಲ್ ಆಯ್ಕೆಗೆ ಸುಲಭವಾಗುತ್ತದೆ.

ಸೆಲ್ಫಿ ತೆಗೆದುಕೊಳ್ಳುವುದು ಹೀಗೆ ಅಂತಾರೆ ಪ್ರಿಯಾ
ವಿಶ್ವದ ಹೈಫೈ ಸ್ಮಾರ್ಟ್ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿವೋ ವಿ, ವೈ ಎಂಬ (V, Y) ಎರಡು ಸರಣಿಗಳಲ್ಲಿ ವೈವಿಧ್ಯಮಯ ಮಾಡೆಲ್ಗಳನ್ನು ಹೊರತಂದಿದೆ.

ಯುವಜನತೆಯ ಮೆಚ್ಚಿನ ಸ್ಮಾರ್ಟ್ಫೋನ್
ಹೈಫೈ ಮ್ಯೂಸಿಕ್, ಆಕರ್ಷಕ ವಿನ್ಯಾಸ ಸೇರಿದಂತೆ ಹಲವು ಆಧುನಿಕ ಸೌಲ್ಯಭ್ಯಗಳಿರುವ ವಿವೋ ವಿಶೇಷವಾಗಿ ಯುವಜನತೆಯ ಮೆಚ್ಚಿನ ಸ್ಮಾರ್ಟ್ಫೋನ್ ಆಗಿ ಹೊರಹೊಮ್ಮಿದೆ. ಹೈಫೈ ಸ್ಮಾರ್ಟ್ಫೋನ್ಗಳ ವಿನ್ಯಾಸದಲ್ಲಿ 'ವಿವೊ' ಕಂಪನಿ ಗಮನ ಸೆಳೆದಿದೆ.

ದೇಶದ 22 ರಾಜ್ಯಗಳಲ್ಲಿ ಶೋರೂಂ
ಭಾರತದಲ್ಲಿ 'ವಿವೊ' ಸ್ಮಾರ್ಟ್ಫೋನ್ ಕ್ಷೇತ್ರಕ್ಕೆ ಪ್ರವೇಶಿಸಿದ್ದು 2014ರಲ್ಲಿ. ಕೇವಲ ಒಂದೂವರೆ ವರ್ಷದಲ್ಲಿ ವಿವೋ ದೇಶದ ಹೈಫೈ ಮತ್ತು ಸ್ಮಾರ್ಟ್ಫೋನ್ ಬ್ರಾಂಡ್ ಆಗಿ ಹೊರಹೊಮ್ಮಿದೆ. ದೇಶದ ಸ್ಮಾರ್ಟ್ಫೋನ್ ಮಾರುಕಟ್ಟೆಯ ಶೇ.7ರಷ್ಟು ಶೇರುಗಳನ್ನು ತನ್ನದಾಗಿಸಿಕೊಂಡಿರುವ ವಿವೊ ಕಂಪನಿ, ದೇಶದ 22 ರಾಜ್ಯಗಳ 300 ನಗರಗಳಲ್ಲಿ 10 ಸಾವಿರಕ್ಕೂ ಹೆಚ್ಚು ಶೋರೂಂಗಳನ್ನು ಹೊಂದಿದೆ.

ಮೇಕ್ಇನ್ ಇಂಡಿಯಾ ಸ್ಫೂರ್ತಿ
ವಿಶೇಷವಾಗಿ ಟಿವಿ ಕಾರ್ಯಕ್ರಮಗಳ ಪ್ರಾಯೋಜಕ ಕಂಪನಿಯಾಗಿ ವಿವೊ ಗಮನ ಸೆಳೆದಿದೆ. ಮೇಕ್ಇನ್ ಇಂಡಿಯಾ ಸ್ಫೂರ್ತಿಯಲ್ಲಿ ಭಾರತದಲ್ಲೇ ಹೈಫೈ ಸ್ಮಾರ್ಟ್ಫೋನ್ ಉತ್ಪಾದಿಸುತ್ತಿರುವುದು ವಿವೊ ಹೆಗ್ಗಳಿಕೆ.

ಯಂಗ್ ಜನರೇಷನ್ ಅಚ್ಚುಮೆಚ್ಚಿನ ಫೋನ್
ಭಾರತದ ಮಾತ್ರವಲ್ಲ, ಚೀನಾದ ಸ್ಮಾರ್ಟ್ಫೋನ್ಗಳ ಸಾಲಿನಲ್ಲಿ 'ವಿವೊ' ಟಾಪ್-3 ಎನಿಸಿಕೊಂಡಿದೆ. ಮಲೇಶಿಯಾ, ಇಂಡೋನೇಷಿಯಾ, ಥೈಲ್ಯಾಂಡ್, ಮ್ಯಾನ್ಮಾರ್, ವಿಯೆಟ್ನಾಮ್ ಮತ್ತು ಫಿಲಿಫೈನ್ಸ್ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ವಿವೋ ಹೈಫೈ ಸ್ಮಾರ್ಟ್ಫೋನ್ ಆಗಿ ಯಂಗ್ ಜನರೇಷನ್ ಅಚ್ಚುಮೆಚ್ಚಿನ ಫೋನ್ ಎನಿಸಿಕೊಂಡಿದೆ. ಮಾಹಿತಿಗೆ ಸಂಪರ್ಕಿಸಿ: 88844 47181
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications