ವಿಡಿಯೋ: ಕಮಲ್ - ಫ್ಯಾನ್ಸ್ ನೂಕಾಟ ಅಸಲಿಯತ್ತೇನು?
ಬೆಂಗಳೂರು, ನವೆಂಬರ್ 27: ನಟ ಕಮಲ್ ಹಾಸನ್ ಅವರು ಏನು ಮಾಡಿದರೂ ಈಗ ದೊಡ್ಡ ಸುದ್ದಿಯಾಗುತ್ತಿದೆ. ರಾಜಕೀಯ ಪ್ರವೇಶದ ಬಗ್ಗೆ ಇಂಗಿತ ವ್ಯಕ್ತಪಡಿಸಿದ ಬಳಿಕ ಕಮಲ್ ಅವರ ಒಂದೊಂದು ನಡೆ, ನುಡಿಯನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಅಳೆದು ತೂಗಲಾಗುತ್ತಿದೆ. ಬೆಂಗಳೂರಿಗೆ ಬಂದಿದ್ದ ಕಮಲ್ ಅವರು ಅಭಿಮಾನಿಯೊಬ್ಬರಿಗೆ ಹೊಡೆದರು ಎಂಬ ಆರೋಪ ಎದುರಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಭಿಮಾನಿಯೊಬ್ಬರನ್ನು ದೂಡಿ, ಕೆನ್ನೆಗೆ ಬಾರಿಸಿದ್ದಾರೆ ಎಂಬ ವಿಡಿಯೋ ವೈರಲ್ ಆಗಿದೆ. ಆದರೆ, ಇದೆಲ್ಲವೂ ಸುಳ್ಳು, ಕಮಲ್ ಅವರು ಆ ವ್ಯಕ್ತಿಯ ಕೆನ್ನೆಗೆ ಬಾರಿಸಿಲ್ಲ ಎಂದು ಕಮಲ್ ಅಭಿಮಾನಿಗಳ ಸಂಘಗಳು ಹೇಳಿವೆ. ಒಟ್ಟಾರೆ, ಪರ ವಿರೋಧ ಚರ್ಚೆ ಜಾರಿಯಲ್ಲಿದೆ.

ಶಾಪಿಂಗ್ ಅಂಗಡಿಯೊಂದಕ್ಕೆ ಬಂದಿದ್ದ ನಟ ಕಮಲ್ ಮತ್ತು ನಟ ರಮೇಶ್ ಅರವಿಂದ್ ಅವರು ಅಲ್ಲಿಂದ ಹಿಂತಿರುಗುವಾಗ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಇದರಿಂದ ಕಸಿವಿಸಿಗೊಂಡ ರಮೇಶ್ ಅವರು ಮೊದಲಿಗೆ ಅಭಿಮಾನಿಯನ್ನು ಪಕ್ಕಕ್ಕೆ ತಳ್ಳಿದ್ದಾರೆ.
Bengaluru: Actor Kamal Haasan manhandles a fan, the video goes viral.#ITVideo #Breaking
— India Today (@IndiaToday) November 26, 2017
Watch more videos at https://t.co/NounxnP7mg pic.twitter.com/C2ftkBcYFo
ಪಟ್ಟು ಬಿಡದ ಅಭಿಮಾನಿ ಮತ್ತೊಮ್ಮೆ ಕಮಲ್ರನ್ನು ಮಾತಾಡಿಸಲು ಯತ್ನಿಸಿ, ಕಾಲಿಗೆ ಬೀಳಲು ಮುಂದಾದಾಗ ಕಮಲ್ ಅವರು ಅಭಿಮಾನಿಯ ಭುಜವನ್ನು ತಳ್ಳಿದ್ದಾರೆ. ಅಷ್ಟರಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ.
*ORIGINAL VIDEO ON OTHER ANGLE*
— Kamalhaasan Politics - unofficial (@haasan_politics) November 26, 2017
*Clearly shows that #Kamalhaasan didn't beat anyone & Police pushed the man who fell at #Kamal legs while climbing down the stairs
*Cheap behaviour by "ONE FAN GROUP" who stopped so low & spreading old edited video to bring down Kamal's popularity. pic.twitter.com/iKjAeoob9Y
ಒಂದು ಬದಿಯಿಂದ ವಿಡಿಯೋ ನೋಡಿದರೆ ಅಭಿಮಾನಿಯನ್ನು ಕಮಲ್ ದೂಡಿದಂತೆ ಕಾಣುತ್ತದೆ. ಇನ್ನೊಂದು ಬದಿಯಿಂದ ನೋಡಿದರೆ ಪಕ್ಕದಲ್ಲಿದ್ದ ಪೊಲೀಸರು ದೂಡಿದಂತೆ ಕಾಣುತ್ತದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications