ಬೆಂಗಳೂರಲ್ಲಿ ನೀರಿನ ಮಾಫಿಯಾ, 1 ಟ್ಯಾಂಕರ್ ನೀರಿಗೆ 3000 ರೂ: ಅಕ್ರಮ ಟ್ಯಾಂಕರ್ ಜಪ್ತಿಗೆ ಎಎಪಿ ಆಗ್ರಹ
ಬೆಂಗಳೂರು: ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಟ್ಯಾಂಕರ್ ಮಾಫಿಯಾ ದೊಡ್ಡ ಸಮಸ್ಯೆಯಾಗಿದೆ. ಸಾವಿರಾರು ಖಾಸಗಿ ಬೋರ್ವೆಲ್ಗಳು ಮತ್ತು ಟ್ಯಾಂಕರ್ಗಳ ಮೂಲಕ ನೀರನ್ನು ಹೆಚ್ಚುವರಿ ದರಕ್ಕೆ ಮಾರಾಟ ಮಾಡುವ ಬೃಹತ್ ಜಾಲವು ಈಗಿನ ಬೇಸಿಗೆ ಸಂದರ್ಭದಲ್ಲಿ ಮತ್ತೆ ಗರಿಗೆದರಿದೆ. ಕೆಲವೊಮ್ಮೆ ಒಂದು ಟ್ಯಾಂಕರ್ ನೀರಿಗೆ ₹3000 ಅಥವಾ ಅದಕ್ಕಿಂತ ಹೆಚ್ಚು ವಸೂಲಿ ಮಾಡುವ ಘಟನೆಗಳೂ ಅನೇಕ ವರ್ಷಗಳಿಂದ ವರದಿಯಾಗುತ್ತಿವೆ ಎಂದು ಆಮ್ ಆದ್ಮಿ ಪಕ್ಷ ದೂರಿದೆ.
ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಅವರು, ಈ ಸಮಸ್ಯೆಯನ್ನು ತಡೆಯಲು ಸರ್ಕಾರ ಕೂಡಲೇ ಅಕ್ರಮ ಖಾಸಗಿ ಟ್ಯಾಂಕರ್ ಗಳನ್ನು ವಶಪಡಿಸಿಕೊಂಡು ಅವುಗಳ ಮೂಲಕ ಉಚಿತವಾಗಿ ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಆಗ್ರಹಿಸಿದರು.

ಬೆಂಗಳೂರಿನಲ್ಲಿನ ಎಲ್ಲಾ ಟ್ಯಾಂಕರ್ಗಳಿಗೆ ಕಡ್ಡಾಯ ನೋಂದಣಿ ಮತ್ತು ಜಿಪಿಎಸ್ ಟ್ರ್ಯಾಕಿಂಗ್, ಲೈಸೆನ್ಸ್ ಕಡ್ಡಾಯ ಮಾಡಬೇಕು. ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ ಮೂಲಕ ನೀರು ಎಲ್ಲಿ ತೆಗೆದುಕೊಳ್ಳುತ್ತಾರೆ? ಮತ್ತು ಎಲ್ಲಿ ನೀಡುತ್ತಾರೆ ಎಂದು ನಿಗಾ ವಹಿಸಬೇಕು. ಕಾನೂನು ಬಾಹಿರವಾಗಿ ಕಾರ್ಯ ನಿರ್ವಹಿಸುವ ಟ್ಯಾಂಕರ್ಗಳಿಗೆ ಭಾರೀ ದಂಡ ಮತ್ತು ವಾಹನ ಜಪ್ತಿ ಮಾಡಬೇಕು ಎಂದು ಅವರು ಸರ್ಕಾರದ ಬಳಿ ಮನವಿ ಮಾಡಿದರು.
ಖಾಸಗಿ ಬೋರ್ವೆಲ್ಗಳ ಸರ್ವೇಗೆ ಒತ್ತಾಯ
ನಗರದಲ್ಲಿ ಇರುವ ಎಲ್ಲಾ ಖಾಸಗಿ ಬೋರ್ವೆಲ್ಗಳ ಸರ್ವೇ ಮಾಡಬೇಕು. ಅನುಮತಿ ಇಲ್ಲದೆ ಬೋರ್ವೆಲ್ಗಳಿಂದ ನೀರು ತೆಗೆದು ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಬೋರ್ವೆಲ್ಗೆ ಡಿಜಿಟಲ್ ಮೀಟರ್ ಹಾಕಿ ಎಷ್ಟು ನೀರು ತೆಗೆದುಕೊಳ್ಳುತ್ತಾರೆ ಎಂದು ದಾಖಲಿಸಬೇಕು.
'ಸಂಚಾರಿ ಕಾವೇರಿ ಯೋಜನೆ' ವಿಸ್ತರಿಸಿ
ಬೆಂಗಳೂರು ಜಲ ಮಂಡಳಿ ಆರಂಭಿಸಿರುವ 'ಸಂಚಾರಿ ಕಾವೇರಿ ಯೋಜನೆ' ಮೂಲಕ ಸರ್ಕಾರದ ಟ್ಯಾಂಕರ್ಗಳಿಂದ ಕಡಿಮೆ ದರದಲ್ಲಿ ನೀರು ನೀಡಲಾಗುತ್ತಿದೆ. ಈ ವ್ಯವಸ್ಥೆಯನ್ನು ನಗರದೆಲ್ಲೆಡೆ ವಿಸ್ತರಿಸಿದರೆ ಖಾಸಗಿ ಟ್ಯಾಂಕರ್ ಮಾಫಿಯಾದ ಪ್ರಭಾವ ಕಡಿಮೆಯಾಗುತ್ತದೆ " ಎಂದು ಸತೀಶ್ ಕುಮಾರ್ ಅಗ್ರಹಿಸಿದರು.
ಜನರು ಅಕ್ರಮ ಟ್ಯಾಂಕರ್ಗಳ ಬಗ್ಗೆ ದೂರು ನೀಡುವ ಸಹಾಯವಾಣಿ ನಂಬರ್ ಗಳು ಹಾಗೂ ಮೊಬೈಲ್ ಆಪ್ ಗಳನ್ನು ಕೂಡಲೆ ಸ್ಥಾಪಿಸಬೇಕು. ಸ್ಥಳೀಯ ನಿವಾಸಿ ಸಂಘಗಳು (RWA) ನೀರಿನ ಬಳಕೆಯನ್ನು ನಿಯಂತ್ರಿಸಲು ಅಧಿಕಾರಗಳನ್ನು ನೀಡಬೇಕು ಎಂದು ಸತೀಶ್ ಕುಮಾರ್ ಆಗ್ರಹಿಸಿದರು.
-
LPG Price: ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರದಲ್ಲಿ ಭಾರೀ ಏರಿಕೆ: ಇಲ್ಲಿದೆ ಮಾರ್ಚ್ 1ರ ದರಪಟ್ಟಿ -
Gold Rate Today: ಆಭರಣ ಪ್ರಿಯರ ಗಮನಕ್ಕೆ: ಬೆಂಗಳೂರಿನಲ್ಲಿ ಇಂದು ಚಿನ್ನ-ಬೆಳ್ಳಿ ದರ ಹೇಗಿದೆ? ಇಲ್ಲಿದೆ ಮಾಹಿತಿ -
National Highway: ರಾಜ್ಯದಲ್ಲಿ ಹೊಸ ರಾಷ್ಟ್ರೀಯ ಹೆದ್ದಾರಿಯ ಮಹತ್ವದ ಅಪ್ಡೇಟ್ -
ಬೇರೆ ದೇಶಗಳಂತೆ ಭಾರತೀಯರಿಗೆ ಭಯದಿಂದ ನಿದ್ರಿಸುವ ಪರಿಸ್ಥಿತಿ ಅಲ್ಲ: ನಿವೃತ್ತ ಸೇನಾಧಿಕಾರಿ ಸುನೀಲ್ ಕುಮಾರ್ ಶಾಸ್ತ್ರಿ -
ಇರಾನ್ ಸುಪ್ರೀಂ ಯತೊಲ್ಲಾ ಅಲಿ ಖಮೇನಿ ಅಂತ್ಯ: ವಿಶ್ವದ ಮೇಲೆ 5 ಪರಿಣಾಮ ಸಾಧ್ಯತೆ: ಆಶಿಶ್ ಸಾರಡ್ಕ ಬರಹ -
Thalapathy Vijay: 400 ಕೋಟಿ ಆಸ್ತಿಗೆ ಒಡತಿ, ಲಂಡನ್ ಬೆಡಗಿ: ಯಾವ ಸಿನಿಮಾಗೂ ಕಡಿಮೆ ಇಲ್ಲ ದಳಪತಿ ವಿಜಯ್-ಸಂಗೀತಾ ಲವ್ ಸ್ಟೋರಿ -
Karnataka Weather: ಕರ್ನಾಟಕದ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ಬಿಸಿಲೂ ಹೆಚ್ಚು -
ಮಾರ್ಚ್ 3, 2026 – ಪೂರ್ವ ಫಲ್ಗುಣಿ ನಕ್ಷತ್ರದಲ್ಲಿ ಕೇತುಗ್ರಸ್ತ ಮಹಾ ಚಂದ್ರಗ್ರಹಣ: ದ್ವಾದಶ ರಾಶಿಗಳ ಫಲಿತಾಂಶ -
ಕರ್ನಾಟಕದ 4 ರೈಲು ನಿಲ್ದಾಣ ಸೇರಿ 76 ಕಡೆ ಪ್ರಯಾಣಿಕರ ನಿಲುಗಡೆ ತಾಣ ನಿರ್ಮಾಣ, ಏನಿದರ ಪ್ರಯೋಜನ? -
ಅಮೆರಿಕಕ್ಕೆ ಸೆಡ್ಡು ಹೊಡೆದು 16,800 ಕೋಟಿ ರೂ ಒಪ್ಪಂದ ಕಡಿದುಕೊಂಡ ಆಂತ್ರೋಪಿಕ್: ಬೆಂಗಳೂರು ಟೆಕ್ಕಿ ಮೆಚ್ಚುಗೆ -
ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಹೇಗಿದ್ರು ನೋಡಿ ರಶ್ಮಿಕಾ ಮಂದಣ್ಣ, ವಿಡಿಯೋ ವೈರಲ್ -
ಹರ್ಮೂಜ್ ಜಲಸಂಧಿ ಬಂದ್: ಭಾರತಕ್ಕೆ ತಟ್ಟಲಿದೆ ತೈಲ ದರದ ಬಿಸಿ, ಆರ್ಥಿಕತೆಗೂ ಭಾರಿ ಹೊಡೆತ












Click it and Unblock the Notifications