Video Viral: ಬೆಂಗಳೂರು ಮೇಲ್ಸೇತುವೆ ಪಿಲ್ಲರ್ ಒಳಗೆ ಕೂತ ಭೂಪ: ಅಚ್ಚರಿಗೊಂಡ ಜನ
Bengaluru Viral Video: ಬೃಹತ್ ಬೆಂಗಳೂರು ಮಹಾನಗರದಲ್ಲಿ ನಿತ್ಯ ಒಂದಲ್ಲ ಒಂದು ಚಿತ್ರ, ವಿಚತ್ರ ಮತ್ತು ಆಶ್ಚರ್ಯಕಾರಿ ಸಂಗತಿಗಳು ನಡೆಯುತ್ತಲೇ ಇರುತ್ತವೆ. ಇದೀಗ ನಗರದ ಮೇಲ್ಸೇತುವೆ ವೊಂದರ ಪಿಲ್ಲರ್ ನಲ್ಲಿ ಒಳಗಡೆ ಟೊಳ್ಳಾದ ಖಾಲಿ ಜಾಗದಲ್ಲಿ ವ್ಯಕ್ತಿಯೊಬ್ಬ ಮಲಗಿದ ವಿಡಿಯೋ ವೈರಲ್ ಆಗಿದೆ. ಇಷ್ಟು ಎತ್ತರ ಪಿಲ್ಲರ್ ಮತ್ತು ವೈಯಡಕ್ಟ್ ಮಧ್ಯ ಈತ ಹೋಗಿದ್ದೇಗೆ? ಎಂಬ ಚರ್ಚೆ ಜಾಲತಾಣದಲ್ಲಿ ಶುರುವಾಗಿದೆ.
ಬೆಂಗಳೂರಿನ ಜಾಲಹಳ್ಳಿ ಕ್ರಾಸ್ನಲ್ಲಿರುವ ಫ್ಲೈಓವರ್ ಕಂಬದಲ್ಲಿ ವ್ಯಕ್ತಿಯೊಬ್ಬ ಕಾಣಿಸಿಕೊಂಡಿದ್ದಾರೆ. ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ4ರಲ್ಲಿ ನಿರ್ಮಿಸಲಾದ ಮೇಲ್ಸೇತುವೆ ಇದಾಗಿದೆ. ಈ ಮೇಲ್ಸೇತುವೆ ಒಂದು ಪಿಲ್ಲರ್ ಮೇಲೆ ವಯಡಕ್ಟ್ ಜೋಡಿದ್ದ ಸ್ಥಳದಲ್ಲಿ ಕೊಂಚ ಖಾಲಿ ಜಾಗ ಇರುತ್ತದೆ. ಆ ಟೊಳ್ಳಾದ ಪಿಲ್ಲರ್ ಒಳಗೆ ವ್ಯಕ್ತಿ ಕೂತಿರುವ ವಿಡಿಯೋವನ್ನು ಕರ್ನಾಟಕ ಪೋರ್ಟ್ಫೊಲಿಯೋ ಎಕ್ಸ್ ಖಾತೆ ಹಾಗೂ ಇತರ ಹ್ಯಾಂಡಲ್ಗಳಿಂದ ಹಂಚಿಕೊಳ್ಳಲಾಗಿದೆ.

ಫ್ಲೈಓವರ್ ಕಂಬದ ಕಿರಿದಾದ ಜಾಗದಲ್ಲಿ ಈ ವ್ಯಕ್ತಿ ಹೇಗೆ ಹೋಗಿ ಕೂತಿದ್ದಾನೆ ಎಂದು ಎಲ್ಲರು ಆಶ್ಚರ್ಯಗೊಂಡಿದ್ದಾರೆ. ಕಳೆಗೆ ಮತ್ತು ಮೇಲ್ಸೇತುವೆ ಮೇಲೆ ವಾಹನಗಳು ಓಡಾಡುತ್ತಿವೆ. ಆತ ಎಲ್ಲರಿಗೂ ಕಾಣವುಂತೆ ಮಲಗಿರುವುದು ವಿಡಿಯೋದಲ್ಲಿ ಕಾಣಿಸಿತ್ತದೆ. ಈ ವಿಡಿಯೋ ಸವಾರರು ಸೇರಿದಂತೆ ಸಾರ್ವಜನಿಕರನ್ನು ಆಘಾತಕ್ಕೀಡು ಮಾಡಿದೆ.
ಈ ಅಸಾಮಾನ್ಯ ದೃಶ್ಯವು ನೋಡುಗರನ್ನು ಗುಂಪನ್ನು ಆಕರ್ಷಿಸಿದೆ. ಇದು ಅಪಾಯಕಾರಿಯಾಗಿದ್ದು, ಇಂತಹ ವರ್ತನೆಯಿಂದ ಆತನ ಜೀವಕ್ಕೆ ಹಾಗೂ ಕೆಳಗೆ ಬಿದ್ದರೆ ಇತರರಿಗೆ ತೊಂದರೆ ಆಗುವ ಸಾಧ್ಯತೆ ಇದೆ. ಆತನನ್ನು ನೋಡದರೆ ಅಲ್ಲಿಯೇ ಕೂತು ವಿಶ್ರಾಂತಿ ಪಡೆಯುತ್ತಿರುವಂತೆ ಕಾಣುತ್ತದೆ. ಸದ್ಯ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪೊಲೀಸರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಬೆಂಗಳೂರು ನಗರ ಪೊಲೀಸ್ ಹಾಗೂ ಪೀಣ್ಯ ಸಂಚಾರಿ ಪೊಲೀಸರಿಗೆ ಟ್ಯಾಗ್ ಮಾಡಿ ತನಿಖೆಗೆ ಆಗ್ರಹಿಸಿದ್ದಾರೆ.
ಬೆಂಗಳೂರು: ಜಾಲಹಳ್ಳಿ ಕ್ರಾಸ್ನ ಫ್ಲೈಓವರ್ ನ ಕಿರಿದಾದ ಸ್ಥಳದೊಳಗೆ ಒಬ್ಬ ವ್ಯಕ್ತಿ ಮಲಗಿರುವ ದೃಶ್ಯ ವೈರಲ್.... #BengaluruFlyover #JalahalliCross #DangerousSpot #MadManIncident #PublicGathering #RoadSafety #BengaluruNews #KannadaNews #NewsUpdate #OIKannada #Oneindia pic.twitter.com/vSluuOkQGt
— oneindiakannada (@OneindiaKannada) November 13, 2025
ವಸತಿ ರಹಿತ ವ್ಯಕ್ತಿಯು ಪಿಲ್ಲರ್ ಅನ್ನು ಆಶ್ರಯ ತಾಣವಾಗಿ ಮಾಡಿಕೊಂಡಿರಬಹುದೆಂದು ಊಹಿಸಲಾಗಿದೆ. ಇದು ನಗರದ ಮೂಲಸೌಕರ್ಯ, ವಸತಿ ರಹಿತ ಜನರ ಪಾಡನ್ನು ವಿವರಿಸಿ ಹೇಳುವಂತಿದೆ ಎಂಬ ಮಾತುಗಳು ಕೇಳಿ ಬಂದಿವೆ. ಸದ್ಯ ಈ ಘಟನೆ ಪೊಲೀಸರ ಗಮನಕ್ಕೆ ಬಂದಿದ್ದು, ತನಿಖೆ ಬಳಿಕೆ ಆತ ಅಲ್ಲಿಗೆ ಹೋಗಿದ್ದು ಹೇಗೆ? ಏನು ಎಂಬೆಲ್ಲ ಮಾಹಿತಿ ಸಿಗಲಿದೆ.
-
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ












Click it and Unblock the Notifications