ರಾಜರಾಜೇಶ್ವರಿ ನಗರದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ
ಬೆಂಗಳೂರು, ಜನವರಿ 11: ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಬಡಾವಣೆಯಲ್ಲಿ ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು 24 ವರ್ಷ ವಯಸ್ಸಿನ ನಿರ್ಮಲಾ ಎಂದು ಗುರುತಿಸಲಾಗಿದೆ.
ಒಂದೂವರೆ ವರ್ಷದ ಹಿಂದೆ ಚಿತ್ರದುರ್ಗ ಮೂಲದ ವಿಶ್ವನಾಥ್ ಜತೆ ವಿವಾಹವಾಗಿದ್ದ ನಿರ್ಮಲಾ ಅವರು ತಮ್ಮ ಸಾವಿಗೆ ಅತ್ತೆ -ಮಾವನ ಕಿರುಕುಳವೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ. ಪತಿ ವಿಶ್ವನಾಥ್ ಅವರು ಆಗಾಗ ಕೆಲಸದ ನಿಮಿತ್ತ ಜಪಾನ್ ಗೆ ಹೋಗುತ್ತಿರುತ್ತಾರೆ ಎಂದು ತಿಳಿದು ಬಂದಿದೆ.
'ನಿರ್ಮಲಾ ಆತ್ಮಹತ್ಯೆಗೂ ಮುನ್ನ ಬರೆದಿರುವ ಡೆತ್ನೋಟ್ ಹರಿಯಲಾಗಿದ್ದು, ಕಸದ ಬುಟ್ಟಿಗೆ ಎಸೆಯಲಾಗಿತ್ತು. ಮೃತರ ಅತ್ತೆ ಮಾವ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ವರದಕ್ಷಿಣೆ ಕಿರುಕುಳದ ಆರೋಪದ ಬಗ್ಗೆ ತನಿಖೆ ನಂತರ ತಿಳಿದು ಬರಲಿದೆ ಎಂದು ರಾಜರಾಜೇಶ್ವರಿ ನಗರ ಪೊಲೀಸರು ಹೇಳಿದರು.
Comments
rajarajeshwari nagar suicide bengaluru dowry harassment ರಾಜರಾಜೇಶ್ವರಿ ನಗರ ಆತ್ಮಹತ್ಯೆ ಬೆಂಗಳೂರು ವರದಕ್ಷಿಣೆ ಕಿರುಕುಳ
English summary
A 24-year-old housewife committed suicide by hanging herself at her residence in Rajarajeshwari Nagar on Wednesday. The deceased has been identified as Nirmala wife of Vishwanth. In-laws are blamed in her suicide and Rajarajeshwari Nagar police have detained accused and investigating about alleged dowry harassment.
Story first published: Thursday, January 11, 2018, 8:14 [IST]