ಬೆಂಗಳೂರಲ್ಲಿ ಹೆಚ್ಚಾಗ್ತಿದೆ ಮಕ್ಕಳ ಕಳ್ಳರ ಹಾವಳಿ

ಬೆಂಗಳೂರು, ಡಿಸೆಂಬರ್ 19: ಬೆಂಗಳೂರಲ್ಲಿ ಮಕ್ಕಳ ಕಳ್ಳರ ಹಾವಳಿ ವಿಪರೀತವಾಗುತ್ತಿದೆ. ದುಷ್ಕರ್ಮಿಗಳು ಬೆಳ್ಳಂಬೆಳಗ್ಗೆಯೇ ಕಾರಿನಲ್ಲಿ ಬಂದು ಮಕ್ಕಳನ್ನು ಅಪಹರಿಸುತ್ತಿದ್ದಾರೆ.

ಪೀಣ್ಯದ ಸಿದ್ಧಾರ್ಥ ನಗರದಲ್ಲಿ ಬಾಲಕನನ್ನು ಕಿಡ್ನ್ಯಾಪ್‌ ಮಾಡಿರುವುದು ಬೆಳಕಿಗೆ ಬಂದಿದೆ. ಸಾಗರ್(5) ಕಿಡ್ನ್ಯಾಪ್ ಆದ ಬಾಲಕ. ದುಷ್ಕರ್ಮಿಗಳ ಗುಂಪೊಂದು ಕೆಂಪು ಬಣ್ಣದ ಕಾರಿನಲ್ಲಿ ಬಂದು ಬಾಲಕನನ್ನು ಹತ್ತಿಸಿಕೊಂಡು ಹೋಗಿದ್ದಾರೆ. ಆ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.

ಸಾಗರ್ ಅಪಹರಣಕ್ಕೆ ಯಾವುದೇ ಕಾರಣಗಳು ತಿಳಿದುಬಂದಿಲ್ಲ, ಸಾಗರ್ ಅನುಕೂಲಸ್ಥ ಕುಟುಂಬದವನು ಕೂಡ ಅಲ್ಲ, ಆತನ ಪೋಷಕರು ಕಲಬುರಗಿ ಜಿಲ್ಲೆಯಿಂದ ಹೊಟ್ಟೆಪಾಡಿಗಾಗಿ ವಲಸೆ ಬಂದವರಾಗಿದ್ದಾರೆ. ಮಗನಿಲ್ಲದೆ ಕಣ್ಣೀರಿಡುವಂತಾಗಿದೆ. ತಂದೆ-ತಾಯಿ ಕೆಲಸಕ್ಕೆ ತೆರಳಿದ್ದಾಗ ಬಾಲಕನನ್ನು ಅಪಹರಿಸಲಾಗಿದೆ.

5 year old boy kidnapped in bengaluru

ಒಬ್ಬ ವ್ಯಕ್ತಿ ಆ ಪ್ರದೇಶಕ್ಕೆ ಪಾನಿಪುರಿ ಮಾರಲು ಬರುತ್ತಿದ್ದ, ಬಾಲಕ ಅಪಹರಣವಾದ ಬಳಿಕ ಪಾನಿಪುರಿ ಮಾರಾಟಗಾರ ಕೂಡ ಆ ಕಡೆ ಬಂದಿಲ್ಲ ಎಂದು ಪೋಷಕರು ತಿಳಿಸಿದ್ದಾರೆ.

ಕೆಲಸದಿಂದ ಬಂದು ಮಗ ಎಲ್ಲಿದ್ದಾನೆ ಎಂದು ಹುಡುಕಿದ್ದಾರೆ, ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ, ಅವರು ಆ ಪ್ರದೇಶದಲ್ಲಿರುವ ಸಿಸಿಕ್ಯಾಮರಾಗಳನ್ನು ಪರಿಶೀಲಿಸಿದಾಗ ಅಪಹರಣವಾಗಿರುವುದು ಬೆಳಕಿಗೆ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+