Get Updates
Get notified of breaking news, exclusive insights, and must-see stories!

ಬೆಂಗಳೂರಲ್ಲಿ ಈ ಕಾರಣಕ್ಕೆ ಉದ್ಯಮ ಕಷ್ಟ, ನಾವು ಇಲ್ಲಿ ಇರಲ್ಲ: ಉದ್ಯಮಿ ಪೋಸ್ಟ್‌ ವೈರಲ್

ಬೆಂಗಳೂರು: ಬೆಂಗಳೂರಿನಲ್ಲಿ ಮೌಲಸೌಕರ್ಯ ಕೊರತೆ ಸೇರಿದಂತೆ ವಿವಿಧ ಕಾರಣಗಳಿಗೆ ಕೆಲವು ಕಂಪನಿಗಳು ಬೆಂಗಳೂರು ಬಿಟ್ಟು ಹೋಗುವುದಾಗಿ ಈಚೆಗೆ ಹೇಳಿದ್ದವು. ಇದೀಗ ಬೆಂಗಳೂರಿನ ರಸ್ತೆಗುಂಡಿ, ಕಸದ ಸಮಸ್ಯೆ ಸೇರಿದಂತೆ ಇನ್ನೊಂದಷ್ಟು ಕಾರಣಗಳಿಗೆ ಬೆಂಗಳೂರು ಮಾತ್ರವಲ್ಲ. ದೇಶವನ್ನೇ ಬಿಟ್ಟು ಹೋಗುತ್ತಿದ್ದೇನೆ ಎಂದು ಉದ್ಯಮಿಯೊಬ್ಬರು ಪೋಸ್ಟ್‌ ಮಾಡಿದ್ದು, ಈ ಪೋಸ್ಟ್‌ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೋಟಿ ಕೋಟಿ ಟ್ಯಾಕ್ಸ್‌ ಪೇ ಮಾಡಿ ಬೆಂಗಳೂರಿನಲ್ಲಿ ಇರುವ ಅವಶ್ಯಕತೆಯಾದರೂ ಏನಿದೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರಿನ ಯುವ ಉದ್ಯಮಿಯೊಬ್ಬರು ಬೆಂಗಳೂರು ವ್ಯವಸ್ಥೆ ಹಾಗೂ ಭಾರತದಲ್ಲಿ ಉದ್ಯಮ ನಡೆಸುವುದಕ್ಕೆ ಇರುವ ಸವಾಲುಗಳ ಬಗ್ಗೆ ಪೋಸ್ಟ್‌ ಮಾಡಿದ್ದು. ಭಾರತದಲ್ಲಿ ಉದ್ಯಮ ಪ್ರಾರಂಭಿಸುವುದು ಸುಲಭದ ಕೆಲಸವಲ್ಲ ಇದಕ್ಕಿಂತ ವಿದೇಶಕ್ಕೆ ಹೋಗುವುದೇ ಉತ್ತಮ ಎಂದು ಹೇಳಿದ್ದಾರೆ. ಅಫ್ಲಾಗ್ ಗ್ರೂಪ್ (Aflog Group) ಕಂಪನಿಯ ಮುಖ್ಯಸ್ಥ ರೋಹಿತ್ ಶ್ರಾಫ್‌ ತಮ್ಮ ಲಿಂಕ್ಡ್‌ಇನ್‌ನಲ್ಲಿ ಮಾಡಿರುವ ಪೋಸ್ಟ್‌ ವೈರಲ್ ಆಗುತ್ತಿದೆ. ಬೆಂಗಳೂರಿನಲ್ಲಿ ಕೋಟಿ ಕೋಟಿ ತೆರಿಗೆ ಪಾವತಿ ಮಾಡಿದರೂ ನೆಮ್ಮದಿಯಾಗಿ ನೆಲೆಸುವುದು ಹಾಗೂ ಉದ್ಯಮ ನಡೆಸುವುದು ಕಷ್ಟ ಎಂದು ಅವರು ಹೇಳಿಕೊಂಡಿದ್ದಾರೆ.

4 crore tax business difficult in Bengaluru due to this businessman post viral

ಕಳೆದ 12-18 ತಿಂಗಳುಗಳಲ್ಲಿ ನನ್ನ ಎಲ್ಲಾ ವ್ಯವಹಾರಗಳಲ್ಲಿ GST ಮತ್ತು ಆದಾಯ ತೆರಿಗೆಯಲ್ಲಿ ನಾನು ಸರಿಸುಮಾರು ₹4 ಕೋಟಿ ($500,000) ರೂಪಾಯಿ ಪಾವತಿ ಮಾಡಿದ್ದೇನೆ. ನಾನು ಇಲ್ಲಿ ನಿಯತ್ತಿನಿಂದ ತೆರಿಗೆ ಕಟ್ಟುತ್ತಿದ್ದೇನೆ ಆದರೆ ವಿವಿಧ ಇಲಾಖೆಗಳಿಂದ ಪದೇ ಪದೇ ನೋಟಿಸ್ ಜಾರಿ ಮಾಡಲಾಗುತ್ತಿದೆ. ಭಾರತದಲ್ಲಿ ಕೇವಲ 4ರಿಂದ 5% ಜನಸಂಖ್ಯೆ ಮಾತ್ರ ಆದಾಯ ತೆರಿಗೆ ಪಾವತಿಸುತ್ತಾರೆ. ಆದರೂ ನೋಟಿಸ್‌ಗಳನ್ನು ಕಳುಹಿಸಿದಾಗ ಸ್ಪಷ್ಟೀಕರಣಗಳನ್ನು ಪಡೆದಾಗ ಮತ್ತು ಪರಿಶೀಲನೆ ತೀವ್ರಗೊಂಡಾಗ, ಅದೇ ಸಣ್ಣ ಗುಂಪನ್ನು ಗುರಿಯಾಗಿಸುತ್ತಲೇ ಇರುತ್ತಾರೆ. ಈಗಾಗಲೇ ವ್ಯವಸ್ಥೆಯೊಳಗೆ ಇರುವವರನ್ನೇ ಗುರಿ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಈ ಪರಿಶೀಲನೆಯು ಹಲವು ಹಂತಗಳಲ್ಲಿ ಕೂಡಿದೆ. ಸ್ಥಳೀಯ GST ತಂಡಗಳು, ರಾಷ್ಟ್ರೀಯ ಆದಾಯ ಮತ್ತು ತೆರಿಗೆ ಸ್ಪಷ್ಟೀಕರಣಗಳು ಸೇರಿವೆ. ಪ್ರತಿ ತಿಂಗಳು GST, ಪ್ರತಿ ತ್ರೈಮಾಸಿಕಕ್ಕೆ TDS ಮತ್ತು ಪ್ರತಿ ವರ್ಷ ಆದಾಯ ತೆರಿಗೆಯನ್ನು ಸಲ್ಲಿಸಲು ತಂಡಗಳನ್ನು ನೇಮಿಸಿಕೊಳ್ಳುತ್ತಾರೆ. ವ್ಯವಸ್ಥೆಯ ವಿರುದ್ಧ ಹೋರಾಡುವುದು ಅದಕ್ಕೆ ಸಲ್ಲಿಸುವುದಕ್ಕಿಂತ ಹೆಚ್ಚು ವೆಚ್ಚವಾಗುತ್ತದೆ. ಆದ್ದರಿಂದ ಹೆಚ್ಚಿನವರು ವಿರೋಧಿಸುವುದಿಲ್ಲ. ಅವರು ಪಾವತಿಸುತ್ತಾರೆ, ಪ್ರತಿಕ್ರಿಯಿಸುತ್ತಾರೆ ಮತ್ತು ಮುಂದುವರಿಯುತ್ತಾರೆ. ಇದು ವ್ಯವಹಾರದ ಮೇಲೆ ಭಾರಿ ಹೊಡೆತ ಕೊಡುತ್ತದೆ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಉದ್ಯಮಗಳಿಗೆ ಪ್ರೋತ್ಸಾಹ ಇಲ್ಲ

ಇನ್ನು ಬೆಂಗಳೂರು ಸೇರಿದಂತೆ ಭಾರತದಲ್ಲಿ ಉದ್ಯಮಗಳಿಗೆ ಪ್ರೋತ್ಸಾಹ ಇಲ್ಲ ಎಂದು ರೋಹಿತ್ ಶ್ರಾಫ್ ಅಭಿಪ್ರಾಯಪಟ್ಟಿದ್ದಾರೆ. ಈ ವ್ಯವಸ್ಥೆಯು ಬಹುಸಂಖ್ಯಾತರ ವಿಶ್ವಾಸವನ್ನು ಗೆಲ್ಲಲು ವಿನ್ಯಾಸಗೊಳಿಸಲಾಗಿದೆ. ಸಣ್ಣ ಕಂಪನಿಗಳು ಅಥವಾ ಸಣ್ಣ ಉದ್ಯಮಗಳಿಗೆ ಪೂರಕವಾಗಿ ಇಲ್ಲ. ನಮ್ಮಂತಹ ಜನರು ದೇಶಾದ್ಯಂತ ದುರ್ಬಲರಾಗಿದ್ದಾರೆ, ರಾಜಕೀಯವಾಗಿಯೂ ಬೆಂಬಲಿತರಲ್ಲ. ಆದ್ದರಿಂದ ನಿರ್ಲಕ್ಷಿಸಲು ಅಥವಾ ವ್ಯವಸ್ಥೆಯಿಂದ ಹೊರತೆಗೆಯಲು ಸುಲಭ.

ಭಾರತೀಯರಿಗೆ ಸಾಮರ್ಥ್ಯದ ಕೊರತೆಯಿಲ್ಲ. ಅವರು ಯುಎಇ, ಯುಎಸ್ ಮತ್ತು ಪ್ರಪಂಚದಾದ್ಯಂತ ದೊಡ್ಡ ವ್ಯವಹಾರಗಳನ್ನು ನಡೆಸುತ್ತಾರೆ. ಅವರು ಹೊರಟುಹೋದಾಗ, ಅವರು ದೇಶವನ್ನು ದ್ವೇಷಿಸುವುದರಿಂದ ಅಲ್ಲ. ಏಕೆಂದರೆ ವ್ಯವಸ್ಥೆಯು ಬೆಳವಣಿಗೆಗೆ ಪ್ರತಿಫಲ ನೀಡುವುದಿಲ್ಲ. ಅದು ಉದ್ಯಮವನ್ನು ದಂಡಿಸುತ್ತದೆ. ಉದ್ಯಮಗಳ ಪ್ರಗತಿಯನ್ನು ನಿಧಾನಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಾನು ಈ ಪಯಣ ಮುಗಿಸುತ್ತಿದ್ದೇನೆ

ನಾನು ಭಾರತದಲ್ಲಿ ಉದ್ಯಮ ಕಟ್ಟುವ ಹಾಗೂ ಬೆಳೆಸುವ ಯೋಚನೆಗೆ ಗುಡ್‌ಬಾಯ್ ಹೇಳುತ್ತಿದ್ದೇನೆ. 2026 ರ ಗುರಿ ಸರಳವಾಗಿದೆ: ದೇಶದಿಂದ ಹೊರಗೆ ಹೋಗಿ ಬೇರೆಡೆ ಉದ್ಯಮ ಸ್ಥಾಪನೆ ಮಾಡುವುದು. ನೋವಿನಿಂದಲೇ ಇದನ್ನು ನಾನು ಹೇಳುತ್ತಿದ್ದೇನೆ. ಕೆಲವು ಹಂತದಲ್ಲಿ ಸ್ವಯಂ ಸಂರಕ್ಷಣೆ ಘೋಷಣೆಗಳಿಗಿಂತ ಮುಖ್ಯವಾಗಿದೆ. ಇದು ದೇಶಭಕ್ತಿಯ ಬಗ್ಗೆ ಅಲ್ಲ, ವಾಸ್ತವದ ಬಗ್ಗೆ. ವ್ಯವಸ್ಥೆಯು ದೋಷಪೂರಿತವಾಗಿದೆ. ನಿಜವಾದ ಅಭಿವೃದ್ಧಿ ಇಲ್ಲ ಮತ್ತು ಇಲ್ಲಿ ವ್ಯಾಪಾರ ಮಾಡುವ ನಿಜವಾಗಿಯೂ ಸುಲಭದ ಮಾತಲ್ಲ ಎಂದು ಅವರು ಹೇಳಿದ್ದಾರೆ. ಲಿಂಕ್ಡ್‌ಇನ್‌ನಲ್ಲಿ ಅವರು ಮಾಡಿರುವ ಪೋಸ್ಟ್‌ ಇದೀಗ ವಿವಿಧ ಸೋಷಿಯಲ್ ಮೀಡಿಯಾಗಳಲ್ಲೂ ವೈರಲ್ ಆಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+