1 ರೂಪಾಯಿ ಕೊಡದ ಬಸ್ ಕಂಡಕ್ಟರ್ಗೆ 3,000 ಕಟ್ಟಲು ಆದೇಶ
1 ರೂಪಾಯಿಯಾದರೂ ಬಾಕಿಯನ್ನು ಪಡೆಯುವುದು ಗ್ರಾಹಕರ ಹಕ್ಕು. ಅದನ್ನು ಹಿಂದಿರುಗಿಸಬೇಕಾದ್ದು ನಿಮ್ಮ ಕರ್ತವ್ಯ ಎಂದು ನಗರ ಗ್ರಾಹಕ ನ್ಯಾಯಾಲಯವು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ವ್ಯವಸ್ಥಾಪಕ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡಿದೆ.
ಬೆಂಗಳೂರು, ಫೆಬ್ರವರಿ 23: ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸಿದ ಪ್ರಯಾಣಿಕರೊಬ್ಬರಿಗೆ 1 ರೂಪಾಯಿ ಚಿಲ್ಲರೆ ಹಿಂದಿರುಗಿಸದ ಕಂಡಕ್ಟರ್ಗೆ ಹಾಗೂ ಬಿಎಂಟಿಸಿ ಅಧಿಕಾರಿಗಳಿಗೆ 3000 ರೂಪಾಯಿ 1 ರೂಪಾಯಿಯೊಂದಿಗೆ 3000 ರೂಪಾಯಿಗೆ ಪ್ರಯಾಣಿಕರಿಗೆ ಹಿಂದಿರುಗಿಸುವಂತೆ ಗ್ರಾಹಕ ನ್ಯಾಯಾಲಯ ಆದೇಶಿಸಿದೆ.
1 ರೂಪಾಯಿಯಾದರೂ ಬಾಕಿಯನ್ನು ಪಡೆಯುವುದು ಗ್ರಾಹಕರ ಹಕ್ಕು. ಅದನ್ನು ಹಿಂದಿರುಗಿಸಬೇಕಾದ್ದು ನಿಮ್ಮ ಕರ್ತವ್ಯ ಎಂದು ನಗರ ಗ್ರಾಹಕ ನ್ಯಾಯಾಲಯವು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ವ್ಯವಸ್ಥಾಪಕ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡಿದೆ.
ಬಸ್ ಕಂಡಕ್ಟರ್ ಒಬ್ಬರು 1 ರೂಪಾಯಿ ಹಿಂದಿರುಗಿಸಲು ನಿರಾಕರಿಸಿದ್ದರಿಂದ ನೊಂದ ಪ್ರಯಾಣಿಕರೊಬ್ಬರು ಪರಿಹಾರ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಮೂರು ವರ್ಷಗಳ ನ್ಯಾಯಾಲಯದಲ್ಲಿ ಹೋರಾಟದ ನಂತರ ತುಮಕೂರು ನಿವಾಸಿ ರಮೇಶ್ ನಾಯ್ಕ್ ಎಲ್ ಎಂಬ ಪ್ರಯಾಣಿಕರು ತನ್ನ 1 ರೂಪಾಯಿಯ ಸರಿಯಾದ ಮರುಪಾವತಿಯನ್ನು ಪಡೆದುಕೊಂಡಿದ್ದಲ್ಲದೆ ಕಂಡಕ್ಟರ್ ಕೈಯಲ್ಲಿ ಅನುಭವಿಸಿದ ಅನ್ಯಾಯ ಮತ್ತು ಅಪಹಾಸ್ಯಕ್ಕಾಗಿ 3,000 ರೂಪಾಯಿಗಳ ಪರಿಹಾರವನ್ನು ನಿಗಮದಲ್ಲಿ ಕಂಡಕ್ಟರ್ ಮತ್ತು ಅವರ ಹಿರಿಯ ಅಧಿಕಾರಿಗಳಿಂದ ನೀಡಲಾಯಿತು.
ಸೆಪ್ಟೆಂಬರ್ 11, 2019 ರಂದು 37 ವರ್ಷ ವಯಸ್ಸಿನ ರಮೇಶ್ ನಾಯಕ್ ಅವರು ಶಾಂತಿನಗರ ಬಸ್ ಡಿಪೋದಿಂದ ಮೆಜೆಸ್ಟಿಕ್ಗೆ ಮಾರ್ಗ ತಲುಪು ಬಿಎಂಟಿಸಿ ವೋಲ್ವೋ ಬಸ್ 360ಬಿ ನಲ್ಲಿ ಹೊರಟರು. ಅವರು ಮಹಿಳಾ ಕಂಡಕ್ಟರ್ಗೆ 29 ರೂ. ಟಿಕೆಟ್ಗೆ 30 ರೂ.ಗಳನ್ನು ಪಾವತಿಸಿ ರೂ. 1 ಚೇಂಜ್ ಕೇಳಿದರು. ಆದರೆ ಕಂಡಕ್ಟರ್ನ ಕೋಪಗೊಂಡು ಅಪಹಾಸ್ಯ ಮಾಡಿ ಬೈದಿದ್ದರು. ಇದರಿಂದ 1 ರೂಪಾಯಿಯನ್ನು ಕೇಳಿದರು ಎಂದು ಅವಮಾನ ಅನುಭವಿಸಿದ್ದರು.

ಕಂಡಕ್ಟರ್ರಿಂದ ಪ್ರಯಾಣಿಕರಿಗೆ ಅವಮಾನ
ತಾವು ಅವಮಾನವನ್ನು ಅನುಭವಿಸಿದ್ದರಿಂದ ಕಂಡಕ್ಟರ್ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ನಿರ್ಧರಿಸಿದರು. ರಮೇಶ್ ನಾಯಕ್ ನಂತರ ಬಿಎಂಟಿಸಿಯ ಹಿರಿಯ ಅಧಿಕಾರಿಗಳಿಗೆ ಕಂಡಕ್ಟರ್ ವಿರುದ್ಧ ದೂರು ನೀಡಿದರು. ಆದರೆ ರಮೇಶ್ ನಾಯಕ್ ಅವರನ್ನು ಅಧಿಕಾರಿಗಳು ಸಹ ಅಣಕಿಸಿ ಕಳುಹಿಸಿದರು. ಅಧಿಕಾರಿಗಳ ಉತ್ತರದಿಂದ ಸಿಟ್ಟಿಗೆದ್ದ ರಮೇಶ್ ನಾಯ್ಕ್ ಅಧಿಕಾರಿಗಳಿಗೆ ಹಾಗೂ ಕಂಡಕ್ಟರ್ ಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದರು.

ಶಾಂತಿನಗರದಲ್ಲಿ ಮೊಕದ್ದಮೆ
ಬಿಎಂಟಿಸಿ ಸೇವೆಯಲ್ಲಿನ ಕೊರತೆಗಾಗಿ ಅವರು ಬಿಎಂಟಿಸಿ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಬೆಂಗಳೂರು 4ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಶಾಂತಿನಗರದಲ್ಲಿ ಮೊಕದ್ದಮೆ ಹೂಡಿದರು ಮತ್ತು ತನಗೆ ಉಂಟಾದ ಅನ್ಯಾಯಕ್ಕಾಗಿ 15,000 ರೂಪಾಯಿಗಳ ಪರಿಹಾರಕ್ಕಾಗಿ ಮನವಿ ಮಾಡಿದರು.

ನಿರ್ಲಕ್ಷ್ಯ ಮತ್ತು ಅಸಡ್ಡೆ ಸೇವೆ ಸ್ವೀಕಾರಾರ್ಹವಲ್ಲ
ರಮೇಶ್ ನಾಯಕ್ ತಮ್ಮ ವಾದವನ್ನು ನ್ಯಾಯಾಲಯದಲ್ಲಿ ಮಂಡಿಸಿದರೆ, ಬಿಎಂಟಿಸಿ ಪರವಾಗಿ ಹಾಜರಾದ ವಕೀಲರು ಆರೋಪವನ್ನು ನಿರಾಕರಿಸಿದರು, ದೂರು ಕ್ಷುಲ್ಲಕವಾಗಿದೆ ಎಂದು ಹೇಳಿದರು. ಜನವರಿ 31, 2023 ರಂದು ತಮ್ಮ ತೀರ್ಪಿನಲ್ಲಿ ಗ್ರಾಹಕ ನ್ಯಾಯಾಲಯದ ನ್ಯಾಯಾಧೀಶರು ಕಂಪ್ಲೈಂಟ್ ಮೂಲತಃ ಕ್ಷುಲ್ಲಕವಾಗಿದೆ ಎಂದು ಗಮನಿಸಿದರು. ಆದರೆ ಬಿಎಂಟಿಸಿ ಬಸ್ ಕಂಡಕ್ಟರ್ನ ನಿರ್ಲಕ್ಷ್ಯ ಮತ್ತು ಅಸಡ್ಡೆ ಸೇವೆ ಸ್ವೀಕಾರಾರ್ಹವಲ್ಲ. 1 ರೂಪಾಯಿಯಾದರೂ ತನ್ನ ಹಣವನ್ನು ಪಡೆಯುವುದು ಗ್ರಾಹಕರ ಹಕ್ಕು ಮತ್ತು ಆದ್ದರಿಂದ ಲೋಪದೋಷಗಳಿಗೆ ಬಿಎಂಟಿಸಿಯಿಂದ ಸರಿಯಾದ ಪರಿಹಾರವನ್ನು ಪಡೆಯಲು ಗ್ರಾಹಕ ಸಂರಕ್ಷಣಾ ಕಾಯ್ದೆ, 1986 ರ ಮೂಲಕ ಅವರನ್ನು ರಕ್ಷಿಸಲಾಗಿದೆ ಎಂದು ನ್ಯಾಯಾಧೀಶರು ಹೇಳಿದರು.

ಉಂಟಾದ ತೊಂದರೆಗೆ 2,000 ರೂ ಪರಿಹಾರ
ಬಿಎಂಟಿಸಿಯ ಎಂಡಿ ಅವರು ಬಸ್ ಪ್ರಯಾಣಿಕರಿಗೆ 1 ರೂಪಾಯಿ ಮರುಪಾವತಿ ಮಾಡಬೇಕು. ಉಂಟಾದ ತೊಂದರೆಗೆ 2,000 ರೂ ಪರಿಹಾರವನ್ನು ಪಾವತಿಸಬೇಕು ಎಂದು ನ್ಯಾಯಾಧೀಶರು ತೀರ್ಪು ನೀಡಿದರು. ರಮೇಶ್ ನಾಯಕ್ ಅವರ ವ್ಯಾಜ್ಯ ವೆಚ್ಚಕ್ಕಾಗಿ ರೂ 1,000 ಪಾವತಿಸಬೇಕು ಮತ್ತು ಆದೇಶದ 45 ದಿನಗಳ ಒಳಗೆ ಎಲ್ಲಾ ಮೊತ್ತವನ್ನು ಪಾವತಿಸಬೇಕು, ವಿಫಲವಾದರೆ ದಂಡವಾಗಿ ಬಡ್ಡಿಯನ್ನು ವಿಧಿಸಲಾಗುವುದು ಎಂದು ಅದು ಆದೇಶಿಸಿದರು.












Click it and Unblock the Notifications