Get Updates
Get notified of breaking news, exclusive insights, and must-see stories!

ಆಸ್ಪತ್ರೆ ಭೂಮಿ ಸ್ವಾಧೀನಕ್ಕೂ ಮುನ್ನ 200 ಕೋಟಿ ಟೆಂಡರ್ ಕರೆದ ಇಲಾಖೆ

ಬೆಂಗಳೂರು, ಮಾರ್ಚ್ 10: ಯಶವಂತಪುರ ಕ್ಷೇತ್ರದಲ್ಲಿ 250 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಆರೋಗ್ಯ ಇಲಾಖೆಯ ಯೋಜನೆ ಅನಿಶ್ಚಿತವಾಗಿದೆ ಎಂದು ಡಿಎಚ್‌ ವರದಿ ಮಾಡಿದೆ.

ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಮೊದಲೇ ಇಲಾಖೆಯು 89 ಕೋಟಿ ರೂಪಾಯಿಗಳಲ್ಲಿ ಸೌಲಭ್ಯವನ್ನು ನಿರ್ಮಿಸಲು ಟೆಂಡರ್ ಅನ್ನು ಕರೆದಿದೆ. ಆದರೆ, ಯೋಜನೆಗೆ ಅತ್ಯಗತ್ಯವಾಗಿರುವ ಉಳ್ಳಾಲದಲ್ಲಿರುವ 2.6 ಎಕರೆ ಭೂಮಿಯನ್ನು ಉಚಿತವಾಗಿ ನೀಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರಾಕರಿಸಿದೆ.

ಭೂಮಿಯ ಮಾರುಕಟ್ಟೆ ಮೌಲ್ಯ 60 ಕೋಟಿ ರೂಪಾಯಿಗಳಾಗಿದ್ದರೂ ಬಿಡಿಎಯು ಸರ್.ಎಂ.ವಿಶ್ವೇಶ್ವರಯ್ಯ ಲೇಔಟ್‌ನ 3ನೇ ಬ್ಲಾಕ್‌ನಲ್ಲಿರುವ ನಾಗರಿಕ ಸೌಲಭ್ಯ (ಸಿಎ) ನಿವೇಶನವನ್ನು ಡಿಸೆಂಬರ್ 2021, ಯಶವಂತಪುರ ಶಾಸಕ ಮತ್ತು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅವರ ಕೋರಿಕೆಯ ಮೇರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 9 ಕೋಟಿ ರೂಪಾಯಿಗೆ ಅನುಮೋದನೆ ಮಾಡಿದೆ.

ಫೆಬ್ರವರಿ 21, 2023 ರಂದು 89 ಕೋಟಿ ರೂಪಾಯಿಗಳ ಟೆಂಡರ್ ಅನ್ನು ಕರೆದ ಏಳು ದಿನಗಳ ನಂತರ ಆರೋಗ್ಯ ಇಲಾಖೆಯು ಭೂಮಿಯನ್ನು ಉಚಿತವಾಗಿ ವರ್ಗಾಯಿಸಲು ಬಿಡಿಎಗೆ ಪತ್ರ ಬರೆದಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಟಿ ಕೆ ಅವರು ಫೆಬ್ರವರಿ 28 ರಂದು ಪತ್ರವನ್ನು ಬರೆದಿದ್ದಾರೆ.

ಒಟ್ಟು 209.8 ಕೋಟಿ ವೆಚ್ಚದಲ್ಲಿ 250 ಹಾಸಿಗೆಗಳ ಆಸ್ಪತ್ರೆ ಮತ್ತು ವಸತಿ ಸೌಲಭ್ಯವನ್ನು ಎರಡು ಹಂತಗಳಲ್ಲಿ ಕೈಗೊಳ್ಳಲಾಗುತ್ತದೆ. ಮೊದಲ ಹಂತದ ಸಿವಿಲ್ ಕಾಮಗಾರಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯು ಮೈಸೂರು ರಸ್ತೆ, ಮಾಗಡಿ ರಸ್ತೆ ಮತ್ತು ತುಮಕೂರು ರಸ್ತೆಯ ಸುತ್ತಮುತ್ತ ವಾಸಿಸುವ ನಿವಾಸಿಗಳಿಗೆ ಸೇವೆ ಸಲ್ಲಿಸುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಭೂಮಿಯನ್ನು ಉಚಿತವಾಗಿ ಪಡೆಯಲು ಸಾಧ್ಯವಾಗಿಲ್ಲ

ಭೂಮಿಯನ್ನು ಉಚಿತವಾಗಿ ಪಡೆಯಲು ಸಾಧ್ಯವಾಗಿಲ್ಲ

ರೈತರಿಂದ ಜಮೀನು ಸ್ವಾಧೀನಪಡಿಸಿಕೊಳ್ಳಲು, ಲೇಔಟ್ ರಚಿಸಲು ಮತ್ತು ಒತ್ತುವರಿಯಿಂದ ಖಾಲಿ ಇರುವ ಭೂಮಿಯನ್ನು ರಕ್ಷಿಸಲು ಸಂಸ್ಥೆ ಹೆಚ್ಚು ಬಂಡವಾಳ ಹೂಡಿದ್ದರಿಂದ ಬಿಡಿಎಯಿಂದ ಭೂಮಿಯನ್ನು ಉಚಿತವಾಗಿ ಪಡೆಯಲು ಆರೋಗ್ಯ ಇಲಾಖೆ ಈ ಹಿಂದೆ ಮಾಡಿದ ಪ್ರಯತ್ನಗಳು ಫಲ ನೀಡಲಿಲ್ಲ ಎಂದು ತಿಳಿದುಬಂದಿದೆ. ಆದರೂ ಉಚಿತವಾಗಿ ಭೂಮಿ ಸಿಗುವ ವಿಶ್ವಾಸವಿದೆ. ನಾನು ಬಿಡಿಎ ಜೊತೆ ಸಂಪರ್ಕದಲ್ಲಿದ್ದೇನೆ ಎಂದು ಅನಿಲ್ ಕುಮಾರ್ ತಿಳಿಸಿದರು.

ಭೂಮಿ ವರ್ಗಾವಣೆಗೆ ನಿಬಂಧನೆಗಳಿಲ್ಲ

ಭೂಮಿ ವರ್ಗಾವಣೆಗೆ ನಿಬಂಧನೆಗಳಿಲ್ಲ

ಬಿಡಿಎ (ನಾಗರಿಕ ಸೌಕರ್ಯಗಳ ನಿವೇಶನ ಹಂಚಿಕೆ) ನಿಯಮಗಳು, 1989 ರ ಪ್ರಕಾರ ಸಂಸ್ಥೆ ಅಥವಾ ಇಲಾಖೆಗೆ ಉಚಿತವಾಗಿ ಭೂಮಿಯನ್ನು ವರ್ಗಾಯಿಸಲು ಯಾವುದೇ ನಿಬಂಧನೆಗಳಿಲ್ಲ ಎಂದು ನಾಗರಿಕ ಸಂಸ್ಥೆಯ ಮೂಲಗಳು ತಿಳಿಸಿವೆ. ಬಿಡಿಎ ಕಾಯಿದೆಯಲ್ಲಿ ನಿಗದಿಪಡಿಸಿದ ಶುಲ್ಕಕ್ಕೆ ಸಿಎ ನಿವೇಶನಗಳನ್ನು ಗುತ್ತಿಗೆಗೆ ಮಂಜೂರು ಮಾಡಬೇಕು ಎಂದು ನಿಯಮಗಳು ಹೇಳುತ್ತವೆ.

ಸ್ವಾತಂತ್ರ್ಯ ಹೋರಾಟಗಾರರಿಗೆ ಭೂಮಿ ಕೊಟ್ಟಿಲ್ಲ

ಸ್ವಾತಂತ್ರ್ಯ ಹೋರಾಟಗಾರರಿಗೆ ಭೂಮಿ ಕೊಟ್ಟಿಲ್ಲ

ಆಸ್ಪತ್ರೆ ನಿರ್ಮಾಣಕ್ಕೆ ಆರೋಗ್ಯ ಇಲಾಖೆಯು ಉದ್ದೇಶಪೂರ್ವಕವಾಗಿ ಪ್ರಧಾನ ಭೂಮಿಯನ್ನು ಉಚಿತವಾಗಿ ಕೇಳುವ ಮೂಲಕ ವಿಳಂಬ ಮಾಡುತ್ತಿದೆ ಎಂದು ಜಯಪ್ರಕಾಶ ನಾರಾಯಣ ವಿಚಾರ ವೇದಿಕೆಯ ಸಂಚಾಲಕ ಬಿ.ಎಂ.ಶಿವಕುಮಾರ್ ಶಂಕಿಸಿದ್ದಾರೆ. ಬಿಡಿಎ ರಚನೆಯಾದಾಗಿನಿಂದ, ಸ್ವಾತಂತ್ರ್ಯ ಹೋರಾಟಗಾರರಿಗೆ ಸಹ ಯಾವುದೇ ಭೂಮಿಯನ್ನು ಉಚಿತವಾಗಿ ನೀಡಲಿಲ್ಲ. ಆರೋಗ್ಯ ಇಲಾಖೆಯು ಆಸ್ಪತ್ರೆಯ ನಿರ್ಮಾಣಕ್ಕೆ 200 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಮತ್ತು ತರಾತುರಿಯಲ್ಲಿ ಟೆಂಡರ್‌ಗಳನ್ನು ಫ್ಲೋಟ್ ಮಾಡುವಾಗ, 9 ಕೋಟಿ ರೂಪಾಯಿಗಳನ್ನು ಪಾವತಿಸಲು ಏನು ಅಡ್ಡಿಯಾಗುತ್ತದೆ? ಎಂದು ಅವರು ಹೇಳಿದರು.

ಆರೋಗ್ಯ ಇಲಾಖೆಯ ದ್ವಂದ್ವ ನಿಲುವು

ಆರೋಗ್ಯ ಇಲಾಖೆಯ ದ್ವಂದ್ವ ನಿಲುವು

ಉಳ್ಳಾಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರ್ಕಾರಿ ಆಸ್ಪತ್ರೆ ಇಲ್ಲ ಎಂದು ಹೇಳಿದ ಅವರು, ಆರೋಗ್ಯ ಇಲಾಖೆಯ ದ್ವಂದ್ವ ನಿಲುವಿನ ವಿರುದ್ಧ 20ಕ್ಕೂ ಹೆಚ್ಚು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಸದಸ್ಯರು ಮಾರ್ಚ್ 20ರಂದು ಆನಂದ್ ರಾವ್ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದಾರೆ ಎಮದು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+