Get Updates
Get notified of breaking news, exclusive insights, and must-see stories!

ಕೇಬಲ್ ವೈರ್ ಕದ್ದ ಗುಮಾನಿ, ವಿದ್ಯುತ್ ಶಾಕ್ ನೀಡಿ ಯುವಕನ ಕೊಲೆ

ಬೆಂಗಳೂರು, ಆಗಸ್ಟ್ 22: ಇಲ್ಲಿನ ಕುಂದನಹಳ್ಳಿಯಲ್ಲಿ ಇಪ್ಪತ್ತು ವರ್ಷದ ಯುವಕನಿಗೆ ವಿದ್ಯುತ್ ಶಾಕ್ ಕೊಟ್ಟು ಕೊಲೆ ಮಾಡಿದ ಘಟನೆ ನಡೆದಿದೆ. ಈ ಘಟನೆಗೆ ಇರುವ ಕಾರಣ ಹುಬ್ಬೇರುವಂತೆ ಮಾಡುತ್ತದೆ. ಕೇಬಲ್ ವೈರ್ ಕದ್ದಿದ್ದಾರೆ ಎಂದು ಆರೋಪ ಮಾಡಿ, ಮೂವರು ಯುವಕರನ್ನು ಚೆನ್ನಾಗಿ ಬಡಿದಿದ್ದಾರೆ.

ಆ ಪೈಕಿ ಒಬ್ಬನಿಗೆ ವಿದ್ಯುತ್ ಶಾಕ್ ಕೊಟ್ಟು ಕೊಲೆ ಮಾಡಲಾಗಿದೆ. ಪಶ್ಚಿಮ ಬಂಗಾಲದ ಬಷೀರ್ ಹತ್ಯೆಯಾದ ಯುವಕ. ಅಂದಹಾಗೆ ಬಷೀರ್ ವರ್ಷದ ಹಿಂದಷ್ಟೇ ಮದುವೆಯಾಗಿದ್ದ. ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ. ಬಸುರೆಡ್ಡಿ ಎಂಬುವರ ಜಮೀನಿನಲ್ಲಿ ಗುಡಿಸಲು ಕಟ್ಟಿಕೊಂಡು ಈ ಮೂವರು ಇದ್ದರು.

20 year old youth murdered in Bengaluru by electric shock

ಮೂರು ದಿನದ ಹಿಂದೆ ಜಮೀನಿನಲ್ಲಿ ಕೇಬಲ್ ವೈರ್ ಕಳ್ಳತನವಾಗಿತ್ತು. ಈ ಮೂವರೇ ಕಳವು ಮಾಡಿರಬೇಕು ಎಂದು ಅನುಮಾನ ಪಟ್ಟು, ಕಟ್ಟಿಹಾಕಿ ಹೊಡೆದಿದ್ದಾರೆ. ಬಷೀರ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಹಫೀಸ್ ಉಲ್ಲಾ, ಅಜ್ಮೈಲ್ ನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಾಲ್ವರು ಸೇರಿ ಈ ಕೃತ್ಯ ಎಸಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+