ಇನ್ನು ಬೆಂಗಳೂರು ಏರ್ರ್ಪೋರ್ಟ್ ತಲುಪಲು 15 ನಿಮಿಷ ಸಾಕು, ಹೇಗೆ ಗೊತ್ತಾ?
ಬೆಂಗಳೂರು, ಸೆಪ್ಟೆಂಬರ್ 29: ಇನ್ನೂ ನೀವು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು 2ರಿಂದ 3 ಗಂಟೆ ಪ್ರಯಾಣಿಸಬೇಕಿಲ್ಲ. ಬದಲಿಗೆ ಕೇವಲ 15 ನಿಮಿಷದಲ್ಲೇ ವಿಮಾನ ನಿಲ್ದಾಣ ತಲುಪಬಹುದು, ಅರೇ ಇದು ಸಾಧ್ಯವಾ ಎಂದು ಕೊಳ್ಳಬೇಡಿ. ಇದು ಖಂಡಿತ ಸಾಧ್ಯ.
ನೀವು ಇನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರಕ್ಕೆ ಚಾಪರ್ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸಬಹುದು. ಇದರಿಂದ ಟ್ರಾಫಿಕ್ ಅನ್ನು ತಪ್ಪಿಸಿಕೊಳ್ಳಬಹುದು. ಇದು ನಿಮ್ಮ ಪ್ರಯಾಣದ ಸಮಯವು ಪ್ರಸ್ತುತ 120 ನಿಮಿಷಗಳಿಂದ ಕೇವಲ 15 ನಿಮಿಷಗಳಿಗೆ ಕಡಿಮೆ ಮಾಡುತ್ತದೆ. ಬೆಂಗಳೂರು ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ವೇಗದ ಪ್ರಯಾಣವನ್ನು ಮಾಡಲು ಚಾಪರ್ ಸೇವೆಗಳನ್ನು ಪ್ರಾರಂಭಿಸುವುದಾಗಿ ಬ್ಲೇಡ್ ಇಂಡಿಯಾ ಘೋಷಿಸಿದೆ.
ಈ ಸೇವೆಗಳು ಅಕ್ಟೋಬರ್ 10ರಂದು ಪ್ರಾರಂಭವಾಗುತ್ತದೆ. ವಾರಕ್ಕೆ ಐದು ಬಾರಿ ಈ ಸೇವೆ ಇರುತ್ತದೆ. ಪ್ರತಿ ಸೀಟಿನ ಬೆಲೆ ₹ 3,250 (ತೆರಿಗೆಗಳನ್ನು ಹೊರತುಪಡಿಸಿ). H125 ಡಿವಿಜಿ ಏರ್ಬಸ್ ಹೆಲಿಕಾಪ್ಟರ್ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ವಿಮಾನ ನಿಲ್ದಾಣ ಮತ್ತು ಬೆಂಗಳೂರು ವಿಮಾನ ನಿಲ್ದಾಣದ ನಡುವೆ ಒಂದೇ ಬಾರಿಗೆ ಐದರಿಂದ ಆರು ಪ್ರಯಾಣಿಕರೊಂದಿಗೆ ಹಾರಬಲ್ಲದು.

15 ನಿಮಿಷಗಳ ಏರ್ ರೈಡ್
ಕಂಪನಿಯು ಚಾಪರ್ ಸೇವೆಯೊಂದಿಗೆ ಈಗ ಬಂದಿದೆ. ಪ್ರಯಾಣಿಕರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಟ್ರಾಫಿಕ್ನಲ್ಲಿ 2 ರಿಂದ ಮೂರು ಗಂಟೆ ಪ್ರಯಾಣ ಮಾಡುವ ಬದಲು 15 ನಿಮಿಷಗಳ ಏರ್ ರೈಡ್ನೊಂದಿಗೆ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಬಹುದಾಗಿದೆ. ಪ್ರಯಾಣಿಕರು ಟ್ರಾಫಿಕ್ನಲ್ಲಿ ಎಚ್ಎಎಲ್ನಿಂದ ಹಾರಬಹುದು. ಇದರಿಂದ ತಮ್ಮ 120 ನಿಮಿಷಗಳ ಪ್ರಯಾಣವನ್ನು ಬಿಟ್ಟು ಬದಲಿಗೆ 15 ನಿಮಿಷಗಳ ತ್ವರಿತ ಹಾರಾಟವನ್ನು ಆರಿಸಿಕೊಳ್ಳಬಹುದು ಎಂದು ಅಧಿಕೃತ ವೆಬ್ಸೈಟ್ ಹೇಳಿದೆ.

ಆರಂಭದಲ್ಲಿ ದಿನಕ್ಕೆ 2 ಬಾರಿ ಹಾರಾಟ
ಇದರ ತರುವಾಯ ಇನ್ನಷ್ಟು ಮಾರ್ಗಗಳನ್ನು ಸೇರಿಸುವುದಾಗಿ ಕಂಪನಿ ಹೇಳಿದೆ. ವೈಟ್ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿಯನ್ನು ಸಂಪರ್ಕ ಸಾಧಿಸಲಾಗುವುದು ಎಂದು ಅದು ಹೇಳಿದೆ. ಆರಂಭದಲ್ಲಿ ಬ್ಲೇಡ್ ಇಂಡಿಯಾ ದಿನಕ್ಕೆ ಎರಡು ಬಾರಿ ಕಾರ್ಯನಿರ್ವಹಿಸುತ್ತದೆ. ಬೆಂಗಳೂರಿನಿಂದ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 9 ಗಂಟೆಗೆ ರೈಡ್ ನಿಗದಿಪಡಿಸಲಾಗಿದೆ. ರಿಟರ್ನ್ ಹೆಲಿಕಾಪ್ಟರ್ ಸಂಜೆ 4:15 ಕ್ಕೆ ಟೇಕಾಫ್ ಆಗಲಿದೆ.

ಏರ್ಬಸ್, ಈವ್ ಏರ್ ಮೊಬಿಲಿಟಿಯೊಂದಿಗೆ ಪಾಲುದಾರಿಕೆ
ಬ್ಲೇಡ್ ಇಂಡಿಯಾವು ನ್ಯೂಯಾರ್ಕ್ ಮೂಲದ ಬ್ಲೇಡ್ ಅರ್ಬನ್ ಏರ್ ಮೊಬಿಲಿಟಿ ಇಂಕ್ ಮತ್ತು ಹೊಸ ದೆಹಲಿ ಮೂಲದ ಹಂಚ್ ವೆಂಚರ್ಸ್ ನಡುವಿನ ಜಂಟಿ ಉದ್ಯಮವಾಗಿದೆ. ಕಂಪನಿಯು ಭಾರತದಲ್ಲಿ ತನ್ನ ಅಲ್ಪಾವಧಿಯ ಚಲನಶೀಲತೆಯ ಸೇವೆಯನ್ನು ಹೆಚ್ಚಿಸಲು ಸೇವೆ ವಿಸ್ತರಣೆಗಾಗಿ ಏರ್ಬಸ್ ಮತ್ತು ಈವ್ ಏರ್ ಮೊಬಿಲಿಟಿಯೊಂದಿಗೆ ಪಾಲುದಾರಿಕೆ ಹೊಂದಿದೆ. ವೆಬ್ಸೈಟ್ ಪ್ರಕಾರ, ಗೋವಾ ವಿಮಾನ ನಿಲ್ದಾಣದಲ್ಲಿ ಇದೇ ರೀತಿಯ ಸೇವೆ ಕಾರ್ಯನಿರ್ವಹಿಸುತ್ತಿದೆ. ಆದಾಗ್ಯೂ, ಈ ಸೇವೆಗಳು ಯಾವಾಗ ಪ್ರಾರಂಭವಾಗುತ್ತವೆ ಎಂಬುದರ ಕುರಿತು ಯಾವುದೇ ಟೈಮ್ಲೈನ್ ಇಲ್ಲ.

ಸಂಚಾರ ದಟ್ಟಣೆಯ ಸಂಕಷ್ಟ ತಪ್ಪಿಸುವ ಗುರಿ
ಮುಂಬೈ, ಪುಣೆ ಮತ್ತು ಶಿರಡಿ ನಡುವೆ ಮಹಾರಾಷ್ಟ್ರದಲ್ಲಿ ಕಾರ್ಯನಿರ್ವಹಿಸುವ ಮೂಲಕ ಬ್ಲೇಡ್ ಇಂಡಿಯಾ ತನ್ನ ಸೇವೆಗಳನ್ನು ಪ್ರಾರಂಭಿಸಿತು. ಕಂಪನಿಯು ವಿಮಾನ ನಿಲ್ದಾಣ ಸ್ಥಳವನ್ನು ತಲುಪಲು ಇರುವ ಸಂಚಾರ ದಟ್ಟಣೆಯ ಸಂಕಷ್ಟವನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಇದು ಗಂಟೆಗಟ್ಟಲೆ ರಸ್ತೆ ಪ್ರಯಾಣವನ್ನು ನಿಮಿಷಗಳವರೆಗೆ ವಿಮಾನ ನಿಲ್ದಾಣಕ್ಕೆ ಕಡಿತಗೊಳಿಸುತ್ತದೆ. ಇದು "ಹೆಲಿಕಾಪ್ಟರ್ಗಳಂತಹ ವಿಟಿಒಎಲ್ (ವರ್ಟಿಕಲ್ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ವೆಹಿಕಲ್ಗಳು) ಮೂಲಕ ಸ್ಥಳಗಳನ್ನು ಸಂಪರ್ಕಿಸುತ್ತದೆ ಮತ್ತು ಭವಿಷ್ಯದಲ್ಲಿ, ಇವಿಎಗಳು (ಎಲೆಕ್ಟ್ರಿಕ್ ವರ್ಟಿಕಲ್ ಏರ್ಕ್ರಾಫ್ಟ್) ಹಾರುವ ಸಾಧ್ಯತೆಯೂ ಇದೆ.
-
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ












Click it and Unblock the Notifications