Boy Missing: ಬೆಂಗಳೂರಿನ ವೈಟ್ಫೀಲ್ಡ್ನಿಂದ ಬಾಲಕ ನಾಪತ್ತೆ: ಪ್ರಕರಣ ದಾಖಲು!
ಬೆಂಗಳೂರು ಜನವರಿ 23: 12 ವರ್ಷದ ಬಾಲಕ ಟ್ಯೂಷನ್ನಿಂದ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ನಡೆದಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಒಂದೆರಡು ಕಡೆ ಬಾಲಕ ಕಂಡುಬಂದಿದ್ದು, ಆತ ಎಲ್ಲಿದ್ದಾನೆ ಎಂಬುದು ತಿಳಿದುಬಂದಿಲ್ಲ. ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ಗುಂಜೂರಿನ ದೀನ್ ಅಕಾಡೆಮಿಯ 6ನೇ ತರಗತಿ ವಿದ್ಯಾರ್ಥಿ ಪರಿಣವ್ ಜನವರಿ 21ರ ಭಾನುವಾರದಿಂದ ನಾಪತ್ತೆಯಾಗಿದ್ದಾನೆ. ಪರಿಣವ್ ಸುಕೇಶ್ ಮತ್ತು ನಿವೇದಿತಾ ದಂಪತಿಯ ಪುತ್ರ. ಭಾನುವಾರದಂದು ಆತನ ತಂದೆ ವೈಟ್ಫೀಲ್ಡ್ನಲ್ಲಿರುವ ಅಲೆನ್ ಟ್ಯುಟೋರಿಯಲ್ ತರಗತಿಗೆ ಡ್ರಾಪ್ ಮಾಡಿದ್ದರು. ಅವನ ತಂದೆ ಅವನನ್ನು ಟ್ಯೂಷನ್ ಮುಗಿದ ಬಳಿಕ ಕರೆದುಕೊಂಡು ಹೋಗಬೇಕಾಗಿತ್ತು. ಆದರೆ ತಂದೆ ಬರುವುದು ಕೊಂಚ ತಡವಾಗಿದೆ. ಆ ಹೊತ್ತಿಗೆ ಪರಿಣವ್ ತರಗತಿಯಿಂದ ಹೊರಟು ಹೋಗಿದ್ದನು.

ಕುಂದಲಹಳ್ಳಿ ಗೇಟ್ ಮತ್ತು ಮಾರತ್ತಹಳ್ಳಿ ಸೇತುವೆ ನಡುವಿನ ಕಾವೇರಿ ಆಸ್ಪತ್ರೆಯ ಸಿಸಿಟಿವಿಯಲ್ಲಿ ಪರಿಣವ್ ಮಧ್ಯಾಹ್ನ 2:30ಕ್ಕೆ ಸೆರೆಯಾಗಿದ್ದಾರೆ. ಮಧ್ಯಾಹ್ನ 3:04 ಕ್ಕೆ ಮಾರತ್ತಹಳ್ಳಿಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್ ಹತ್ತುತ್ತಿರುವಾಗ ಬಾಲಕ ಕಾಣಿಸಿಕೊಂಡಿದ್ದಾನೆ.
Still missing.
— Whitefield Rising (@WFRising) January 22, 2024
Parinav was last seen boarding a bmtc bus at 3.04 pm, Jan 21, 2024.
Route number, and other footage details are being investigated by the @wfieldps https://t.co/HUseuKTF13 pic.twitter.com/Cr1jdg1jke
ಮಾರತ್ತಹಳ್ಳಿ ಮಾರುಕಟ್ಟೆಯಲ್ಲಿ ಪರಿಣವ್ ಇಳಿದಿರುವುದು ಸೆರೆಯಾಗಿದೆ. ಪೊಲೀಸರು ಬಸ್ನ ಜಾಡು ಹಿಡಿದು ಕಂಡಕ್ಟರ್ನನ್ನು ವಿಚಾರಿಸಿದ್ದಾರೆ. ಹುಡುಗನ ಬಳಿ ಹಣ ಸೀಮಿತವಾಗಿತ್ತು ಎಂದು ಕಂಡಕ್ಟರ್ ಹೇಳಿದ್ದಾರೆ. ಕಂಡಕ್ಟರ್ ಟಿಕೆಟ್ ಕೊಡಲು ಮುಂದಾದಾಗ ಪರಿಣವ್ ಹಣವಿಲ್ಲವೆಂದು ಹೇಳಿದ್ದು ಆತನನ್ನು ಬಸ್ನಿಂದ ಕೆಳಗಿಳಿಸಲಾಗಿದೆ ಎಂದು ಕಂಡಕ್ಟರ್ ಹೇಳಿದ್ದಾರೆ.
ಯಮಲೂರು ಬಳಿ ಮಧ್ಯಾಹ್ನ 3:11 ರ ಸುಮಾರಿಗೆ ಪೆಟ್ರೋಲ್ ಬಂಕ್ ಬಳಿ ನಡೆದುಕೊಂಡು ಹೋಗುತ್ತಿದ್ದ ಬಾಲಕನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರನೇ ತರಗತಿಯ ಹುಡುಗ ಕೊನೆಯದಾಗಿ ಹಳದಿ ಬಣ್ಣದ ಟೀ ಶರ್ಟ್ ಧರಿಸಿ ಕಪ್ಪು ಪ್ಯಾಂಟ್ ಮತ್ತು ಸ್ಕೂಲ್ ಬ್ಯಾಗ್ ಧರಿಸಿದ್ದು ಕಂಡು ಬಂದಿದೆ. ಮಾರತ್ತಹಳ್ಳಿಯಲ್ಲಿ ಬಾಲಕನ ಉಪಸ್ಥಿತಿಯ ಬಗ್ಗೆ ಬಾಲಕನ ಪೋಷಕರು ಗೊಂದಲಕ್ಕೊಳಗಾಗಿದ್ದಾರೆ. ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
-
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ












Click it and Unblock the Notifications