ಖಾನಾಪುರದಲ್ಲಿ ತಾಯಿಯನ್ನು ಕೊಂದು ಮಗನ ಕಣ್ಣು ಕಿತ್ತ ರಾಕ್ಷಸರು

ಬೆಂಗಳೂರು, ಡಿಸೆಂಬರ್ 25: ತಾಯಿಯನ್ನು ಕೊಂದು ಮಗನ ಕಣ್ಣು ಕಿತ್ತಿರುವ ಭೀಭತ್ಸ ಕೃತ್ಯ ಖಾನಾಪುರದಲ್ಲಿ ನಡೆದಿದೆ.

ಖಾನಾಪುರದ ಗುಂಡೇನಟ್ಟಿ ಗ್ರಾಮದ ಹೊವಲಯದ ತೋಟದ ಮನಯಲ್ಲಿ ಮಲಗಿದ್ದ ಮಹಿಳೆಯನ್ನು ಹತ್ಯೆ ಮಾಡಿದ ದುಷ್ಕರ್ಮಿಗಳು, ಅವರ ಪುತ್ರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕಣ್ಣು ಕಿತ್ತಿರುವ ಭೀಭತ್ಸ ಘಟನೆ ನಡೆದಿದೆ.

ಗುಂಡೇನಹಳ್ಳಿ ಕಾಳಮ್ಮನಗರದ ಅಂಗನವಾಡಿ ಸಹಾಯಕಿ ಜಯಶ್ರೀ ಕಲ್ಲಪ್ಪ ಬೆಳಗಾವಿ, ಅನುರಾಗ್ ಮೃತರಾದವರು. ತಡರಾತ್ರಿ ತೋಟದ ಮನೆಯ ಹೆಂಚು ತೆಗೆದು ಒಳಗೆ ಇಳಿದ ದುಷ್ಕರ್ಮಿಗಳು ಜಯಶ್ರೀ ಅವರ ತಲೆಗೆ ನೇಗಿಲಿನಿಂದ ಹೊಡೆದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ ಜಯಶ್ರೀ ಅಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.

Woman brutally murdered near Khanapur

ಪಕ್ಕದಲ್ಲೇ ಮಲಗಿದ್ದ ಅವರಮಗನ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ದುಷ್ಕರ್ಮಿಗಳು, ಆತನ ಎರಡೂ ಕಣ್ಣುಗಳಿಗೆ ಹರಿತವಾದ ಆಯುಧದಿಂದ ತಿವಿದಿದ್ದಾರೆ. ಬಾಲಕನ ಕಣ್ಣಿನ ಗುಡ್ಡೆ ಕಿತ್ತು ರಕ್ತ ಸುರಿದ ಬಳಿಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಬಳಿಕ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+