ರಸ್ತೆ ಗುಂಡಿ ಮುಚ್ಚಿದ ಸಂಚಾರಿ ಪೊಲೀಸರು; ಎಲ್ಲೆಲ್ಲೂ ಶ್ಲಾಘನೆ
ಬೆಳಗಾವಿ, ಆಗಸ್ಟ್ 24: ಬೆಳಗಾವಿಯಲ್ಲಿ ಈಚೆಗೆ ಸುರಿದ ಭಾರೀ ಮಳೆಯಿಂದಾಗಿ ಬಹುಪಾಲು ರಸ್ತೆಗಳು ಹಾಳಾಗಿವೆ. ರಸ್ತೆಗಳಲ್ಲಿ ಗುಂಡಿಗಳೇ ತುಂಬಿಕೊಂಡಿವೆ.
ಅದರಲ್ಲೂ ಕೆಎಲ್ಇ ಆಸ್ಪತ್ರೆಯಿಂದ ಎನ್ ಎಚ್ 4 ಸೇರುವ ರಸ್ತೆಯಂತೂ ಸಂಪೂರ್ಣ ಹಾಳಾಗಿದೆ. ಜೊತೆಗೆ ಹಾಳಾಗಿರುವ ರಸ್ತೆಗಳು ಅಪಘಾತಕ್ಕೆ ಆಹ್ವಾನ ನೀಡುವಂತಿವೆ. ಆದರೆ ಇಷ್ಟು ದಿನಗಳು ಕಳೆದರೂ ರಸ್ತೆ ದುರಸ್ತಿ ಬಗ್ಗೆ ಪಾಲಿಕೆ ತಲೆಕೆಡಿಸಿಕೊಂಡಿಲ್ಲ. ಅಪಾಯಕಾರಿ ಗುಂಡಿ ಮುಚ್ಚಲೂ ಮುಂದಾಗಿಲ್ಲ.
ರಸ್ತೆ ಗುಂಡಿ ಮುಚ್ಚದಿದ್ದರೆ ಇಂಜಿನಿಯರ್ಗಳಿಗೆ 1 ಸಾವಿರ ರೂ. ದಂಡ
ಪಾಲಿಕೆಯನ್ನು ಬೈದುಕೊಂಡೇ ಜನರೂ ಓಡಾಡುತ್ತಿದ್ದರು. ಆದರೆ ಈ ಸಂಚಾರಿ ಪೊಲೀಸರು ಸುಮ್ಮನೆ ಕೂರಲಿಲ್ಲ. ಇದಕ್ಕೆ ಏನಾದರೂ ವ್ಯವಸ್ಥೆ ಮಾಡಲೇಬೇಕು ಎಂದು ಯೋಚಿಸಿದ ಇವರು ತಾವೇ ಈ ಗುಂಡಿಗಳನ್ನು ಮುಚ್ಚಲು ಮುಂದಾಗಿದ್ದಾರೆ.
ಮಣ್ಣನ್ನು ತರಿಸಿ ತಾವೇ ಗುಂಡಿಗಳನ್ನು ಮುಚ್ಚುವ ಕೆಲಸದಲ್ಲಿ ತೊಡಗಿಕೊಂಡರು. ಉತ್ತರ ಸಂಚಾರ ಪೊಲೀಸ್ ಠಾಣೆಯ ಎಎಸ್ಐ ಪಿ.ಎಸ್ ಕೋಲ್ಕಾರ್, ಹವಾಲ್ದಾರ್ ಎಸ್ ವಿ ಹಾದಿಮನಿ, ಪಿ ಬಿ ನಾಯಕ್ ಈ ಮೂವರೂ ಸಿಬ್ಬಂದಿ ಸೇರಿ ಗುಂಡಿಗಳನ್ನು ಮುಚ್ಚಿದ್ದಾರೆ.
ರಾಮನಗರ; ಹದಗೆಟ್ಟ ರಸ್ತೆ ಸರಿಪಡಿಸುವಂತೆ ಆಗ್ರಹಿಸಿ ದಿಢೀರ್ ಪ್ರತಿಭಟನೆ
ಸಂಚಾರಿ ಪೊಲೀಸರ ಈ ಕಾರ್ಯ ನೋಡಿ ಜನರು ಅಚ್ಚರಿಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.