ಬೆಳಗಾವಿ: ಸಾಲ ವಾಪಾಸ್ ಕೇಳಿದ್ದಕ್ಕೆ, ಕತ್ತು ಸೀಳಿ ಕೊಲೆಗೆ ಯತ್ನ
ಬೆಳಗಾವಿ, ಜನವರಿ 09: ಕೊಟ್ಟ ಸಾಲ ಮರಳಿ ಕೇಳಿದಕ್ಕೆ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆಗೆ ಯತ್ನಿಸಿದ ಘಟನೆ ಬೆಳಗಾವಿಯಲ್ಲಿ ಸೋಮವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೈಲಹೊಂಗಲದ ಶಶಿಕುಮಾರ್ ಉರ್ಫ್ ರಾಜು ಅಂಗಡಿ ಇವರಿಂದ ಮಾರುತಿ ಬಂಡಿವಡ್ಡರ್ 6 ಸಾವಿರ ರೂ. ಸಾಲಪಡೆದಿದ್ದ. ಪಡೆದಿದ್ದ 6 ಸಾವಿರ ರೂಪಾಯಿ ಸಾಲವನ್ನು ಮರಳಿ ನೀಡುತ್ತೇನೆ ಬಾ ಎಂದು ಪುಸಲಾಯಿಸಿ ಕರೆದೊಯ್ದು ಕತ್ತುಕೊಯ್ಯಲು ಖದೀಮರು ಯತ್ನಿಸಿದ್ದಾರೆ.
ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದ ಪತ್ರಿಬಸವ ನಗರದಲ್ಲಿ ಸೋಮವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಾಲ ಮರಳಿಸುತ್ತೇನೆ ಎಂದು ಪತ್ರಿ ಬಸವ ನಗರದ ಜನನಿಬಿಡ ಪ್ರದೇಶದಲ್ಲಿ ಶಶಿಕುಮಾರ್ ನನ್ನು ಕರೆದೊಯ್ದು ಮಾರುತಿ ಹಾಗೂ ಇನ್ನಿಬ್ಬರು ಸ್ನೇಹಿತರೊಂದಿಗೆ ಚಾಕುವಿನಿಂದ ಕುತ್ತಿಗೆಗೆ ಇರಿದು ಕೊಲೆ ಮಾಡಲು ಪ್ರಯತ್ನಿಸಿದ್ದಾರೆ.
ಗಾಯಾಳು ಶಶಿಕುಮಾರ್ ಅವರನ್ನು ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿ, ಮನೆಗೆ ಕರೆದೊಯ್ಯಲಾಗಿದೆ. ಗಾಯಾಳು ಶಶಿಕುಮಾರ್ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೊಲೆಗೆ ಯತ್ನಿಸಿದ ಮಾರುತಿ ಹಾಗೂ ಇನ್ನಿಬ್ಬರು ಪರಾರಿಯಾಗಿದ್ದಾರೆ. ಪೊಲೀಸರಿಂದ ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ.