ಕನ್ನಡದಲ್ಲಿದ್ದ ಚೆಕ್ ಅಮಾನ್ಯ ಮಾಡಿದ್ದಕ್ಕೆ ಬ್ಯಾಂಕ್ ನ ಕೋರ್ಟ್ ಗೆಳೆದ ಗ್ರಾಹಕ
ಕನ್ನಡದಲ್ಲಿ ಚೆಕ್ ನ ವಿವರಗಳನ್ನು ತುಂಬಿದ್ದಾರೆ ಎಂಬ ಕಾರಣಕ್ಕೆ ಐಸಿಐಸಿಐ ಬ್ಯಾಂಕ್ ನಲ್ಲಿ ಅಮಾನ್ಯ ಮಾಡಿದ್ದಾರೆ. ಇದೀಗ ಗ್ರಾಹಕ ಆ ಕ್ರಮವನ್ನು ಪ್ರಶ್ನಿಸಿ ಬೆಳಗಾವಿಯ ಗ್ರಾಹಕರ ಜಿಲ್ಲಾ ಕೋರ್ಟ್ ಮೆಟ್ಟಿಲೇರಿದ್ದಾರೆ.
ಬೆಳಗಾವಿ, ಜನವರಿ 27: ಚೆಕ್ ನಲ್ಲಿನ ಮಾಹಿತಿಯನ್ನು ಕನ್ನಡದಲ್ಲಿ ಬರೆದಿದೆ ಎಂಬ ಕಾರಣ ಕೊಟ್ಟು, ಅದನ್ನು ಮಾನ್ಯತೆ ಮಾಡ ಕಾರಣಕ್ಕೆ ಗ್ರಾಹಕರೊಬ್ಬರು ಐಸಿಐಸಿಐ ಬ್ಯಾಂಕ್ ಅನ್ನು ಕೋರ್ಟ್ ಗೆ ಎಳೆದಿದ್ದಾರೆ. ಅಸಮರ್ಪಕ ಸೇವೆ ಎಂದು ಆರೋಪಿಸಿ, ಬೆಳಗಾವಿಯ ಜಿಲ್ಲಾ ಗ್ರಾಹಕರ ಕೋರ್ಟ್ ನಲ್ಲಿ ಆನಂದ್ ದಿವಾಕರ್ ಗಾರಗ್ ಮೊಕದ್ದಮೆ ಹೂಡಿದ್ದಾರೆ.
ನವೆಂಬರ್ ನಲ್ಲಿ ಗಾರಗ್ ಅವರು ಎಲ್ ಐಸಿಗೆ 17,220 ರುಪಾಯಿಗೆ ಚೆಕ್ ನೀಡಿದ್ದರು. ಅದನ್ನು ಎಲ್ ಐಸಿಯು ಕಾರ್ಪೋರೇಷನ್ ಬ್ಯಾಂಕ್ ಗೆ ಹಾಕಿತ್ತು. ಅದರ ಪಾವತಿಗಾಗಿ ಐಸಿಐಸಿಐ ಬ್ಯಾಂಕ್ ಗೆ ಕಳುಹಿಸಿದಾಗ, "ದಾಖಲೆ ಸಹಿತ ಕಳುಹಿಸಿ" ಎಂಬ ಒಕ್ಕಣೆಯೊಂದಿಗೆ ವಾಪಸ್ ಮಾಡಿದ್ದಾರೆ.[ಪ್ರಯಾಣಕ್ಕೆ ಅವಕಾಶ ನೀಡದ ಕೆಎಸ್ ಆರ್ ಟಿಸಿಗೆ 10 ಸಾವಿರ ದಂಡ]

ಮೊಕದ್ದಮೆ ದಾಖಲಿಸುವ ಮುನ್ನ ಐಸಿಐಸಿಐ ಬ್ಯಾಂಕ್ ಹಾಗೂ ಎಲ್ ಐಸಿ ಬಳಿ ಚೆಕ್ ಅಮಾನ್ಯ ಮಾಡಿರುವುದಕ್ಕೆ ಗಾರಗ್ ಸ್ಪಷ್ಟನೆ ಕೇಳಿದ್ದಾರೆ. ಎರಡೂ ಕಡೆಯಿಂದಲೂ ಸಮಾಧಾನಕರ ಉತ್ತರ ಬಂದಿಲ್ಲ. ಈ ಹಿಂದೆ ಹೆಸ್ಕಾಂಗೆ ಕನ್ನಡದಲ್ಲೇ ಚೆಕ್ ನೀಡಿದ್ದೆ ಎನ್ನುತ್ತಾರೆ ಗಾರಗ್.[ಇಲ್ಲೊಬ್ಬ ಟಿಸಿ ಅವ್ನೇ, ಅವ್ನಿಗೆ ಕರ್ನಾಟಕದ ಗಾಡಿ ಕಂಡ್ರೆ ಆಗಲ್ಲಾ]
ಆರ್.ಬಿ.ಐ (RBI) ನಿಯಮಗಳ ಪ್ರಕಾರ ಗ್ರಾಹಕರ ಹಿಂದಿ ಇಂಗ್ಲಿಷ್ ಅಥವಾ ತಮ್ಮ ಪ್ರಾದೇಶಿಕ ಭಾಷೆಯಲ್ಲಿ ಚೆಕ್ ಬರೆಯಬಹುದು, ಬ್ಯಾಂಕ್ ಅದನ್ನು ನಿರಾಕರಿಸುವಂತಿಲ್ಲ. pic.twitter.com/zbkOQRxwau
— KGK (@KannadaGrahaka) 27 January 2017
"ನಾನು ಕನ್ನಡದಲ್ಲಿ ಬರೆದೆ ಅನ್ನೋ ಕಾರಣಕ್ಕೆ ಐಸಿಐಸಿಐ ಬ್ಯಾಂಕ್ ಚೆಕ್ ಅಮಾನ್ಯ ಮಾಡಿದೆಯಂತೆ. ಅದೇ ರೀತಿ ಖಾಸಗಿ ಸಂಸ್ಥೆಯೊಂದಕ್ಕೆ ನೀಡಿದ್ದ ಚೆಕ್ ಕೂಡ ಅಮಾನ್ಯವಾಗಿದೆ" ಎನ್ನುತ್ತಾರೆ ಅವರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ ಐಸಿ, ಐಸಿಐಸಿಐ ಹಾಗೂ ಕಾರ್ಪೋರೇಷನ್ ಬ್ಯಾಂಕ್ ಗೆ ಕೋರ್ಟ್ ನೋಟಿಸ್ ನೀಡಿದ್ದು, ಫೆಬ್ರವರಿ 28ರಂದು ವಿಚಾರಣೆ ಕೈಗೆತ್ತಿಕೊಳ್ಳಲಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್












Click it and Unblock the Notifications